<p><strong>ಚುನಾವಣೆ ಫಲಿತಾಂಶ ಬುಡಮೇಲು ಮಾಡಲು ಕೆಲವು ಶಕ್ತಿಗಳ ಸಂಚು</strong></p>.<p>ನವದೆಹಲಿ, ಮಾರ್ಚ್ 21– ರಾಷ್ಟ್ರದ ಕೆಲವು ಕಡೆ ನಡೆಯುತ್ತಿರುವ ಹಿಂಸಾಚಾರಕ್ಕಾಗಿ ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ವ್ಯಥೆ ವ್ಯಕ್ತಪಡಿಸಿ, ಇದು ಪ್ರಜಾತಂತ್ರ ಹಾಗೂ ರಾಷ್ಟ್ರದ ರೀತಿನೀತಿಗಳ ವಿರುದ್ಧ ಕೆಲವು ಶಕ್ತಿಗಳು ಎಸಗಿರುವ ‘ದಾಳಿ’ ಎಂದು ವರ್ಣಿಸಿದರು.</p>.<p>ಭಾರತ ರಾಷ್ಟ್ರೀಯ ಗಣಿ ಕೆಲಸಗಾರರ ಫೆಡರೇಷನ್ನಿನ ರಜತ ಮಹೋತ್ಸವ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಗಾಂಧಿ ಅವರು, ಚುನಾವಣೆ ಫಲಿತಾಂಶಗಳನ್ನು ತಪ್ಪು ಮಾರ್ಗಗಳಿಂದ ಬುಡಮೇಲು ಮಾಡುವುದು ಈ ಶಕ್ತಿಗಳ ಬಯಕೆ. ಇಂತಹ ಕೆಲವರು ಈ ಚಳವಳಿಗಳಿಗೆ ಸಂಬಂಧಪಡದ ಬಹುಸಂಖ್ಯಾ ತರ ಧ್ವನಿ ಅದುಮಿ ಹಾಕಲು ಭೀತಗ್ರಸ್ತ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದರು.</p>.<p><strong>ರಾಜ್ಯಸಭೆಗೆ ಕೊಲ್ಲೂರು, ಆಳ್ವ, ರಾಚಯ್ಯ, ಲಕ್ಷ್ಮಣಗೌಡ</strong></p>.<p>ಬೆಂಗಳೂರು, ಮಾರ್ಚ್ 21– ವಿಧಾನಸಭೆಯ ಕಾಂಗ್ರೆಸ್ ಸದಸ್ಯರು ಮತಾಂತರ ಮಾಡದೆ ಶಿಸ್ತಿನಿಂದ ಮತ ಚಲಾಯಿಸಿದ್ದರಿಂದ, ಪಕ್ಷದ ಅಭ್ಯರ್ಥಿಗಳಾದ ಕೊಲ್ಲೂರು ಮಲ್ಲಪ್ಪ, ಬಿ.ರಾಚಯ್ಯ, ಮಾರ್ಗರೇಟ್ ಆಳ್ವ ಹಾಗೂ ಪಕ್ಷ ಬೆಂಬಲ ನೀಡಿದ ಪಕ್ಷೇತರ ಅಭ್ಯರ್ಥಿ ಯು.ಕೆ. ಲಕ್ಷ್ಮಣಗೌಡ ರಾಜ್ಯಸಭೆಗೆ ಆಯ್ಕೆಯಾದರು.</p>.<p>ನಾಲ್ಕು ಸ್ಥಾನಗಳಿಗೆ ಐದು ಮಂದಿ ಸ್ಪರ್ಧಿ ಸಿದ್ದು, ಕಾಂಗ್ರೆಸ್ಸಿನ ಹೆಚ್ಚುವರಿ ಮತಗಳನ್ನು ಪಡೆದ ಯು.ಕೆ. ಲಕ್ಷ್ಮಣಗೌಡ ಅವರು ಸಂಸ್ಥಾ ಕಾಂಗ್ರೆಸ್ ಅಭ್ಯರ್ಥಿ ಎಂ.ಎಸ್.ಗುರುಪಾದಸ್ವಾಮಿ ಅವರನ್ನು ಸೋಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚುನಾವಣೆ ಫಲಿತಾಂಶ ಬುಡಮೇಲು ಮಾಡಲು ಕೆಲವು ಶಕ್ತಿಗಳ ಸಂಚು</strong></p>.<p>ನವದೆಹಲಿ, ಮಾರ್ಚ್ 21– ರಾಷ್ಟ್ರದ ಕೆಲವು ಕಡೆ ನಡೆಯುತ್ತಿರುವ ಹಿಂಸಾಚಾರಕ್ಕಾಗಿ ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ವ್ಯಥೆ ವ್ಯಕ್ತಪಡಿಸಿ, ಇದು ಪ್ರಜಾತಂತ್ರ ಹಾಗೂ ರಾಷ್ಟ್ರದ ರೀತಿನೀತಿಗಳ ವಿರುದ್ಧ ಕೆಲವು ಶಕ್ತಿಗಳು ಎಸಗಿರುವ ‘ದಾಳಿ’ ಎಂದು ವರ್ಣಿಸಿದರು.</p>.<p>ಭಾರತ ರಾಷ್ಟ್ರೀಯ ಗಣಿ ಕೆಲಸಗಾರರ ಫೆಡರೇಷನ್ನಿನ ರಜತ ಮಹೋತ್ಸವ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಗಾಂಧಿ ಅವರು, ಚುನಾವಣೆ ಫಲಿತಾಂಶಗಳನ್ನು ತಪ್ಪು ಮಾರ್ಗಗಳಿಂದ ಬುಡಮೇಲು ಮಾಡುವುದು ಈ ಶಕ್ತಿಗಳ ಬಯಕೆ. ಇಂತಹ ಕೆಲವರು ಈ ಚಳವಳಿಗಳಿಗೆ ಸಂಬಂಧಪಡದ ಬಹುಸಂಖ್ಯಾ ತರ ಧ್ವನಿ ಅದುಮಿ ಹಾಕಲು ಭೀತಗ್ರಸ್ತ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದರು.</p>.<p><strong>ರಾಜ್ಯಸಭೆಗೆ ಕೊಲ್ಲೂರು, ಆಳ್ವ, ರಾಚಯ್ಯ, ಲಕ್ಷ್ಮಣಗೌಡ</strong></p>.<p>ಬೆಂಗಳೂರು, ಮಾರ್ಚ್ 21– ವಿಧಾನಸಭೆಯ ಕಾಂಗ್ರೆಸ್ ಸದಸ್ಯರು ಮತಾಂತರ ಮಾಡದೆ ಶಿಸ್ತಿನಿಂದ ಮತ ಚಲಾಯಿಸಿದ್ದರಿಂದ, ಪಕ್ಷದ ಅಭ್ಯರ್ಥಿಗಳಾದ ಕೊಲ್ಲೂರು ಮಲ್ಲಪ್ಪ, ಬಿ.ರಾಚಯ್ಯ, ಮಾರ್ಗರೇಟ್ ಆಳ್ವ ಹಾಗೂ ಪಕ್ಷ ಬೆಂಬಲ ನೀಡಿದ ಪಕ್ಷೇತರ ಅಭ್ಯರ್ಥಿ ಯು.ಕೆ. ಲಕ್ಷ್ಮಣಗೌಡ ರಾಜ್ಯಸಭೆಗೆ ಆಯ್ಕೆಯಾದರು.</p>.<p>ನಾಲ್ಕು ಸ್ಥಾನಗಳಿಗೆ ಐದು ಮಂದಿ ಸ್ಪರ್ಧಿ ಸಿದ್ದು, ಕಾಂಗ್ರೆಸ್ಸಿನ ಹೆಚ್ಚುವರಿ ಮತಗಳನ್ನು ಪಡೆದ ಯು.ಕೆ. ಲಕ್ಷ್ಮಣಗೌಡ ಅವರು ಸಂಸ್ಥಾ ಕಾಂಗ್ರೆಸ್ ಅಭ್ಯರ್ಥಿ ಎಂ.ಎಸ್.ಗುರುಪಾದಸ್ವಾಮಿ ಅವರನ್ನು ಸೋಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>