<p><strong>ಭಾರತ ಯಾವುದೇ ವಿದೇಶಿ ರಾಷ್ಟ್ರವನ್ನು ಅವಲಂಬಿಸಿರುವ ಟೀಕೆ ನಿರಾಧಾರ: ಇಂದಿರಾ</strong></p>.<p><strong>ಚಂಡೀಗಡ, ನ. 6– </strong>ಯಾವುದೇ ಒಂದು ನಿರ್ದಿಷ್ಟ ರಾಷ್ಟ್ರವನ್ನೂ ಭಾರತ ಅವಲಂಬಿಸಿಲ್ಲವೆಂದು ಇಲ್ಲಿ ಇಂದು ಸ್ಪಷ್ಟಪಡಿಸಿದ ಪ್ರಧಾನಿ ಇಂದಿರಾ ಗಾಂಧಿ ಅವರು, ತನ್ನ ಹಿತಕ್ಕನುಗುಣವಾದ ಸ್ವತಂತ್ರ ನೀತಿಗಳನ್ನು ಭಾರತ ಅನುಸರಿಸುತ್ತಿದೆ ಎಂದರು.</p>.<p>‘ವಿದೇಶಿ ಶಕ್ತಿಶಾಲಿ ರಾಷ್ಟ್ರವೊಂದರ ಮೇಲೆ ಭಾರತ ವಿಪರೀತ ಅವಲಂಬಿಸುತ್ತಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಆದರೆ, ಅದು ನಿರಾಧಾರವಾದದ್ದು’ ಎಂದು ಅವರು ಹರಿಯಾಣ ಮುಖ್ಯಮಂತ್ರಿ ಬನ್ಸಿಲಾಲ್ ಅವರ ನಿವಾಸದಲ್ಲಿ ಪಂಜಾಬ್, ಹರಿಯಾಣ ಮತ್ತು ಚಂಡೀಗಡದ ಆಡಳಿತ ಕಾಂಗ್ರೆಸ್ಸಿಗರ ಸಭೆಯಲ್ಲಿ ತಿಳಿಸಿದರು.</p>.<p>ಈ ಪ್ರಚಾರ ಸಮರದಲ್ಲಿ ಆಡಳಿತ ಕಾಂಗ್ರೆಸ್ಸಿಗರು ಸದಾ ಸ್ವರಕ್ಷಣೆಯಲ್ಲೇ ಇರದೆ ಅವರೂ ಮುಂದಾಗಿ ನಿಜವಾದ ವಿಚಾರ ವಿವರಿಸಬೇಕೆಂದರು.</p>.<p><strong>ನ್ಯಾಯ ದೊರಕಿಸಲು ಕೊನೆತನಕ ಹೋರಾಟ</strong></p>.<p><strong>ಮಂಗಳೂರು, ನ. 6–</strong> ‘ಕಾಸರಗೋಡು ಮತ್ತು ಬೆಳಗಾವಿ ನನ್ನ ವೈಯಕ್ತಿಕ ಆಸ್ತಿ ಅಲ್ಲ. ಅವು ಈ ರಾಜ್ಯದ ಪ್ರಜೆಗಳದು. ಪ್ರಜೆಗಳಿಗೆ ನ್ಯಾಯ ದೊರೆಯುವಂತೆ ಕೊನೆತನಕ ಹೋರಾಡುತ್ತೇನೆ’ ಎಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾರತ ಯಾವುದೇ ವಿದೇಶಿ ರಾಷ್ಟ್ರವನ್ನು ಅವಲಂಬಿಸಿರುವ ಟೀಕೆ ನಿರಾಧಾರ: ಇಂದಿರಾ</strong></p>.<p><strong>ಚಂಡೀಗಡ, ನ. 6– </strong>ಯಾವುದೇ ಒಂದು ನಿರ್ದಿಷ್ಟ ರಾಷ್ಟ್ರವನ್ನೂ ಭಾರತ ಅವಲಂಬಿಸಿಲ್ಲವೆಂದು ಇಲ್ಲಿ ಇಂದು ಸ್ಪಷ್ಟಪಡಿಸಿದ ಪ್ರಧಾನಿ ಇಂದಿರಾ ಗಾಂಧಿ ಅವರು, ತನ್ನ ಹಿತಕ್ಕನುಗುಣವಾದ ಸ್ವತಂತ್ರ ನೀತಿಗಳನ್ನು ಭಾರತ ಅನುಸರಿಸುತ್ತಿದೆ ಎಂದರು.</p>.<p>‘ವಿದೇಶಿ ಶಕ್ತಿಶಾಲಿ ರಾಷ್ಟ್ರವೊಂದರ ಮೇಲೆ ಭಾರತ ವಿಪರೀತ ಅವಲಂಬಿಸುತ್ತಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಆದರೆ, ಅದು ನಿರಾಧಾರವಾದದ್ದು’ ಎಂದು ಅವರು ಹರಿಯಾಣ ಮುಖ್ಯಮಂತ್ರಿ ಬನ್ಸಿಲಾಲ್ ಅವರ ನಿವಾಸದಲ್ಲಿ ಪಂಜಾಬ್, ಹರಿಯಾಣ ಮತ್ತು ಚಂಡೀಗಡದ ಆಡಳಿತ ಕಾಂಗ್ರೆಸ್ಸಿಗರ ಸಭೆಯಲ್ಲಿ ತಿಳಿಸಿದರು.</p>.<p>ಈ ಪ್ರಚಾರ ಸಮರದಲ್ಲಿ ಆಡಳಿತ ಕಾಂಗ್ರೆಸ್ಸಿಗರು ಸದಾ ಸ್ವರಕ್ಷಣೆಯಲ್ಲೇ ಇರದೆ ಅವರೂ ಮುಂದಾಗಿ ನಿಜವಾದ ವಿಚಾರ ವಿವರಿಸಬೇಕೆಂದರು.</p>.<p><strong>ನ್ಯಾಯ ದೊರಕಿಸಲು ಕೊನೆತನಕ ಹೋರಾಟ</strong></p>.<p><strong>ಮಂಗಳೂರು, ನ. 6–</strong> ‘ಕಾಸರಗೋಡು ಮತ್ತು ಬೆಳಗಾವಿ ನನ್ನ ವೈಯಕ್ತಿಕ ಆಸ್ತಿ ಅಲ್ಲ. ಅವು ಈ ರಾಜ್ಯದ ಪ್ರಜೆಗಳದು. ಪ್ರಜೆಗಳಿಗೆ ನ್ಯಾಯ ದೊರೆಯುವಂತೆ ಕೊನೆತನಕ ಹೋರಾಡುತ್ತೇನೆ’ ಎಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>