<p><strong>ದಕ್ಷಿಣದಲ್ಲೇ ಕೇಂದ್ರ ವಿಶ್ವವಿದ್ಯಾಲಯ ಆಗುವಂತೆ ಶ್ರಮಿಸಲು ಕರೆ</strong></p>.<p>ಬೆಂಗಳೂರು, ಜ. 17– ದಕ್ಷಿಣ ಭಾರತದ ಪ್ರಥಮ ಕೇಂದ್ರೀಯ ವಿಶ್ವವಿದ್ಯಾಲಯವಾಗಲು ಸರ್ವ ಅರ್ಹತೆಯಿರುವ ಬೆಂಗಳೂರು ವಿಶ್ವವಿದ್ಯಾಲಯವು ಆ ಸ್ಥಾನಕ್ಕೇರಲು ಸರ್ವ ಪ್ರಯತ್ನ ಮಾಡಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎ.ಎಸ್.ಅಡ್ಯ ಅವರು ಇಂದು ಇಲ್ಲಿ ಹೇಳಿದರು.</p>.<p>‘ಬೆಂಗಳೂರಿನ ಎಲ್ಲ ಕಾಲೇಜುಗಳು ಈ ಗುರಿಯನ್ನಿಟ್ಟುಕೊಂಡು ಮುಂದುವರಿದರೆ, ಅದರ ಸಾಧನೆ ಕಷ್ಟವಾಗದು’ ಎಂದು ಹೇಳಿದ ಶ್ರೀಯುತರು, ‘ಬೆಂಗಳೂರು ವಿಶ್ವವಿದ್ಯಾಲಯವು ಸ್ಥಾಪನೆಗೊಳ್ಳುವಾಗಲೇ ಅದು ಕೇಂದ್ರೀಯ ವಿಶ್ವವಿದ್ಯಾಲಯವಾಗಿ ಅಸ್ತಿತ್ವಕ್ಕೆ ಬರಬೇಕೆಂಬ ಸೂಚನೆಯಿತ್ತು’ ಎಂಬುದನ್ನು ಜ್ಞಾಪಿಸಿಕೊಂಡರು.</p>.<p><strong>‘ನಾಯಕರು ಪ್ರಗತಿ ಸಾಧಿಸುವತನಕ ಜನ ಕಾಯರು’</strong></p>.<p>ಮುಂಬಯಿ, ಜ. 17– ಎರಡು ಪಟ್ಟು ವೇಗದಲ್ಲಿ ರಾಷ್ಟ್ರವು ಪ್ರಗತಿ ಸಾಧಿಸಬೇಕು, ಅಲ್ಲದೆ ತ್ವರಿತವಾಗಿ ದಾರಿದ್ರ್ಯವನ್ನು ತೊಲಗಿಸಬೇಕು ಎಂದು ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ಹೇಳಿದರು.</p>.<p>ಇಲ್ಲಿ ಆಡಳಿತ ಕಾಂಗ್ರೆಸ್ ಪಕ್ಷದ ಚುನಾವಣೆ ಪ್ರಚಾರವನ್ನು ಉದ್ಘಾಟಿಸಿದ ಪ್ರಧಾನಿ ಅವರು ‘ರಾಷ್ಟ್ರದ ಪ್ರಗತಿ ಬಗ್ಗೆ ಜನ ಅಸಮಾಧಾನಗೊಂಡಿದ್ದಾರೆ. ಜನರು ಬಯಸುವ ಬದಲಾವಣೆಯನ್ನು ನಾಯಕರು ಸಾಧಿಸಿಕೊಡುವವರೆಗೂ ಜನ ಕಾದು ಕೂತಿರುವುದಿಲ್ಲ’ ಎಂದೂ ಎಚ್ಚರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಕ್ಷಿಣದಲ್ಲೇ ಕೇಂದ್ರ ವಿಶ್ವವಿದ್ಯಾಲಯ ಆಗುವಂತೆ ಶ್ರಮಿಸಲು ಕರೆ</strong></p>.<p>ಬೆಂಗಳೂರು, ಜ. 17– ದಕ್ಷಿಣ ಭಾರತದ ಪ್ರಥಮ ಕೇಂದ್ರೀಯ ವಿಶ್ವವಿದ್ಯಾಲಯವಾಗಲು ಸರ್ವ ಅರ್ಹತೆಯಿರುವ ಬೆಂಗಳೂರು ವಿಶ್ವವಿದ್ಯಾಲಯವು ಆ ಸ್ಥಾನಕ್ಕೇರಲು ಸರ್ವ ಪ್ರಯತ್ನ ಮಾಡಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎ.ಎಸ್.ಅಡ್ಯ ಅವರು ಇಂದು ಇಲ್ಲಿ ಹೇಳಿದರು.</p>.<p>‘ಬೆಂಗಳೂರಿನ ಎಲ್ಲ ಕಾಲೇಜುಗಳು ಈ ಗುರಿಯನ್ನಿಟ್ಟುಕೊಂಡು ಮುಂದುವರಿದರೆ, ಅದರ ಸಾಧನೆ ಕಷ್ಟವಾಗದು’ ಎಂದು ಹೇಳಿದ ಶ್ರೀಯುತರು, ‘ಬೆಂಗಳೂರು ವಿಶ್ವವಿದ್ಯಾಲಯವು ಸ್ಥಾಪನೆಗೊಳ್ಳುವಾಗಲೇ ಅದು ಕೇಂದ್ರೀಯ ವಿಶ್ವವಿದ್ಯಾಲಯವಾಗಿ ಅಸ್ತಿತ್ವಕ್ಕೆ ಬರಬೇಕೆಂಬ ಸೂಚನೆಯಿತ್ತು’ ಎಂಬುದನ್ನು ಜ್ಞಾಪಿಸಿಕೊಂಡರು.</p>.<p><strong>‘ನಾಯಕರು ಪ್ರಗತಿ ಸಾಧಿಸುವತನಕ ಜನ ಕಾಯರು’</strong></p>.<p>ಮುಂಬಯಿ, ಜ. 17– ಎರಡು ಪಟ್ಟು ವೇಗದಲ್ಲಿ ರಾಷ್ಟ್ರವು ಪ್ರಗತಿ ಸಾಧಿಸಬೇಕು, ಅಲ್ಲದೆ ತ್ವರಿತವಾಗಿ ದಾರಿದ್ರ್ಯವನ್ನು ತೊಲಗಿಸಬೇಕು ಎಂದು ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ಹೇಳಿದರು.</p>.<p>ಇಲ್ಲಿ ಆಡಳಿತ ಕಾಂಗ್ರೆಸ್ ಪಕ್ಷದ ಚುನಾವಣೆ ಪ್ರಚಾರವನ್ನು ಉದ್ಘಾಟಿಸಿದ ಪ್ರಧಾನಿ ಅವರು ‘ರಾಷ್ಟ್ರದ ಪ್ರಗತಿ ಬಗ್ಗೆ ಜನ ಅಸಮಾಧಾನಗೊಂಡಿದ್ದಾರೆ. ಜನರು ಬಯಸುವ ಬದಲಾವಣೆಯನ್ನು ನಾಯಕರು ಸಾಧಿಸಿಕೊಡುವವರೆಗೂ ಜನ ಕಾದು ಕೂತಿರುವುದಿಲ್ಲ’ ಎಂದೂ ಎಚ್ಚರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>