ಕನ್ನಡಕ್ಕೆ ಶಾಸನಗಳ ಭಾಷಾಂತರ
ಬೆಂಗಳೂರು, ಏ. 30– ಈಚೆಗೆ ಪುನರ್ರಚಿಸಲಾದ ಅಧಿಕೃತ ಭಾಷಾ (ಶಾಸನಗಳಿಗೆ ಸಂಬಂಧಿಸಿದ್ದು) ಆಯೋಗವು ಭಾಷಾ ನೀತಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಸಲಹೆ ಮಾಡುವುದರ ಜೊತೆಗೆ ಶಾಸನಗಳನ್ನು ಕನ್ನಡಕ್ಕೆ ಭಾಷಾಂತರಿಸುವ ವಿಷಯವನ್ನೂ ನೋಡಿಕೊಳ್ಳುವುದೆಂದು ರಾಜ್ಯಪಾಲ ಶ್ರೀ ಧರ್ಮವೀರ ಅವರು ಇಂದು ವರದಿಗಾರರಿಗೆ ತಿಳಿಸಿದರು.