ಬೆಂಗಳೂರು, ಸೆ. 30– ಡಾ.ವಿ. ರಾಜ ಮನ್ನಾರ್ ಅಥವಾ ಡಾ.ವಿ. ಲಕ್ಷ್ಮಣ ಸ್ವಾಮಿ ಮೊದಲಿಯಾರ್ ಅವರಂಥ ಸ್ಥಾನಮಾನವುಳ್ಳ ವ್ಯಕ್ತಿಯೊಬ್ಬರಿಂದ ಬೆಂಗಳೂರು ವಿಶ್ವವಿದ್ಯಾಲಯ ವ್ಯವಹಾರಗಳ ಬಗ್ಗೆ ವಿಚಾರಣೆ ನಡೆಸಬೇಕೆಂದು ರಾಜ್ಯದ ಎಂಟು ಮಂದಿ ಸಂಸತ್ ಸದಸ್ಯರು ರಾಜ್ಯಪಾಲರನ್ನು ಒತ್ತಾಯ ಮಾಡಿದ್ದಾರೆ.
ಕೆ.ಲಕ್ಕಪ್ಪ, ಡಿ.ಬಿ.ಚಂದ್ರೇಗೌಡ, ಕೆ.ಮಲ್ಲಣ್ಣ, ಎಸ್.ಎಂ.ಕೃಷ್ಣ, ಎನ್.ಶಿವಪ್ಪ ಮುಂತಾದವರು ರಾಜ್ಯಪಾಲರಿಗೆ ಮನವಿ ಅರ್ಪಿಸಿ, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಬ್ಬರಿಗೆ ‘ಕಿರುಕುಳ’ವಾಗಿರುವ ರಿಜಿಸ್ಟ್ರಾರ್ ಅವರನ್ನು ತತ್ಕ್ಷಣ ವಿಶ್ವವಿದ್ಯಾಲಯದಿಂದ ವಾಪಸು ಪಡೆಯಬೇಕೆಂದು ಒತ್ತಿ ಹೇಳಿದ್ದಾರೆ.