<p><strong>ನ. 1ರಂದು ಜಿಲ್ಲಾಮಟ್ಟದಲ್ಲಿ ಕನ್ನಡ ಆಡಳಿತ ಭಾಷೆ ಎಂದು ಸಾರಲು ಕರೆ</strong></p>.<p>ಬೆಂಗಳೂರು, ಅ. 22– ನವೆಂಬರ್ ಒಂದರಂದು (ರಾಜ್ಯೋತ್ಸವದಂದು) ಕನ್ನಡ ಜನತೆಯ ಬಯಕೆಯನ್ನು ಗಮನಿಸಿ ಜಿಲ್ಲಾ ಮಟ್ಟದಲ್ಲಿ ಕನ್ನಡವನ್ನು ಆಡಳಿತ ಭಾಷೆಯಾಗಿ ಘೋಷಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀ ಜಿ. ನಾರಾಯಣ ಅವರು ರಾಜ್ಯಪಾಲ ಶ್ರೀ ಧರ್ಮವೀರ ಅವರನ್ನು ಕೋರಿದ್ದಾರೆ.</p>.<p>ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ‘ಕನ್ನಡನಾಡು ಇನ್ನು ಪೂರ್ಣವಾಗಿ ಒಂದಾಗಿಲ್ಲ– ಹೊರನಾಡಿನ ಕನ್ನಡಿಗರ ಸ್ಥಿತಿಗತಿ ತೃಪ್ತಿಕರವಾಗಿಲ್ಲ’ ಎಂದೂ ಅವರು ಹೇಳಿದ್ದಾರೆ.</p>.<p><strong>ಶಾಲಾ ಶಿಕ್ಷಕರಿಗೆ ಪ್ರಶಸ್ತಿ ನೀಡಿಕೆಗೆ ಸರ್ಕಾರದ ಒಪ್ಪಿಗೆ</strong></p>.<p>ಬೆಂಗಳೂರು, ಅ. 22– ರಾಜ್ಯದ ಪ್ರಾಥಮಿಕ ಹಾಗೂ ಸೆಕೆಂಡರಿ ಶಾಲಾ ಶಿಕ್ಷಕರಿಗೆ 1971–72ನೇ ಸಾಲಿನ ಪ್ರಶಸ್ತಿ ನೀಡುವ ಬಗ್ಗೆ ಸರ್ಕಾರ ತನ್ನ ಒಪ್ಪಿಗೆಯನ್ನು ನೀಡಿದೆ.</p>.<p>ಈ ವಿಚಾರವನ್ನು ಇಂದು ವರದಿಗಾರರಿಗೆ ತಿಳಿಸಿದ ರಾಜ್ಯಪಾಲ ಶ್ರೀ ಧರ್ಮವೀರ ಅವರು ಪ್ರಶಸ್ತಿ ಪಡೆಯುವ ಶಿಕ್ಷಕರಿಗೆ 300 ರೂ. ನಗದು ಹಾಗೂ ಸರ್ಟಿಫಿಕೇಟುಗಳನ್ನು ನೀಡಲಾಗುವುದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನ. 1ರಂದು ಜಿಲ್ಲಾಮಟ್ಟದಲ್ಲಿ ಕನ್ನಡ ಆಡಳಿತ ಭಾಷೆ ಎಂದು ಸಾರಲು ಕರೆ</strong></p>.<p>ಬೆಂಗಳೂರು, ಅ. 22– ನವೆಂಬರ್ ಒಂದರಂದು (ರಾಜ್ಯೋತ್ಸವದಂದು) ಕನ್ನಡ ಜನತೆಯ ಬಯಕೆಯನ್ನು ಗಮನಿಸಿ ಜಿಲ್ಲಾ ಮಟ್ಟದಲ್ಲಿ ಕನ್ನಡವನ್ನು ಆಡಳಿತ ಭಾಷೆಯಾಗಿ ಘೋಷಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀ ಜಿ. ನಾರಾಯಣ ಅವರು ರಾಜ್ಯಪಾಲ ಶ್ರೀ ಧರ್ಮವೀರ ಅವರನ್ನು ಕೋರಿದ್ದಾರೆ.</p>.<p>ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ‘ಕನ್ನಡನಾಡು ಇನ್ನು ಪೂರ್ಣವಾಗಿ ಒಂದಾಗಿಲ್ಲ– ಹೊರನಾಡಿನ ಕನ್ನಡಿಗರ ಸ್ಥಿತಿಗತಿ ತೃಪ್ತಿಕರವಾಗಿಲ್ಲ’ ಎಂದೂ ಅವರು ಹೇಳಿದ್ದಾರೆ.</p>.<p><strong>ಶಾಲಾ ಶಿಕ್ಷಕರಿಗೆ ಪ್ರಶಸ್ತಿ ನೀಡಿಕೆಗೆ ಸರ್ಕಾರದ ಒಪ್ಪಿಗೆ</strong></p>.<p>ಬೆಂಗಳೂರು, ಅ. 22– ರಾಜ್ಯದ ಪ್ರಾಥಮಿಕ ಹಾಗೂ ಸೆಕೆಂಡರಿ ಶಾಲಾ ಶಿಕ್ಷಕರಿಗೆ 1971–72ನೇ ಸಾಲಿನ ಪ್ರಶಸ್ತಿ ನೀಡುವ ಬಗ್ಗೆ ಸರ್ಕಾರ ತನ್ನ ಒಪ್ಪಿಗೆಯನ್ನು ನೀಡಿದೆ.</p>.<p>ಈ ವಿಚಾರವನ್ನು ಇಂದು ವರದಿಗಾರರಿಗೆ ತಿಳಿಸಿದ ರಾಜ್ಯಪಾಲ ಶ್ರೀ ಧರ್ಮವೀರ ಅವರು ಪ್ರಶಸ್ತಿ ಪಡೆಯುವ ಶಿಕ್ಷಕರಿಗೆ 300 ರೂ. ನಗದು ಹಾಗೂ ಸರ್ಟಿಫಿಕೇಟುಗಳನ್ನು ನೀಡಲಾಗುವುದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>