<p><strong>ಆಡಳಿತ ಭಾಷೆ, ಶಿಕ್ಷಣ ಮಾಧ್ಯಮ ಆಗಲಿ ಕನ್ನಡ: ಆಗ್ರಹ</strong></p><p>ಚಿಕ್ಕದೇವರಾಜ ಮಂಟಪ (ಮಂಡ್ಯ), ಮೇ 31– ‘ಆದಷ್ಟು ಬೇಗ ಕನ್ನಡ ಆಡಳಿತ ಭಾಷೆಯಾಗಬೇಕು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ಶಿಕ್ಷಣ ಮಾಧ್ಯಮವಾಗಬೇಕು’</p><p>ಶ್ರೀಮತಿ ಜಯದೇವಿ ತಾಯಿ ಲಿಗಾಡೆ ಅವರು ಇಂದು ಇಲ್ಲಿ ಆರಂಭವಾದ 48ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಭಾಷಣದಲ್ಲಿ ಈ ಅಂಶವನ್ನು ಆಗ್ರಹಪೂರ್ವಕವಾಗಿ ಒತ್ತಾಯಪಡಿಸಿದರು.</p><p>ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣ ಮಾಡಲು 17 ವರ್ಷಗಳ ಕಾಲ ಕಾಯಬೇಕಾಯಿತೆಂದು ಹೇಳಿದ ಅವರು, ಈಗ ಕನ್ನಡವನ್ನು ಆಡಳಿತ ಭಾಷೆಯಾಗಿ ಮಾಡಲು ಇನ್ನೂ ಹೆಚ್ಚು ಕಾಲ ಕಾಯಬೇಕೆಂದರೆ ಅದು ನಮ್ಮ ಸಹನೆಯನ್ನು ಒರೆಗೆ ಹಚ್ಚಿದಂತೆ ಆಗುವುದು ಎಂದು ಎಚ್ಚರಿಸಿದರು.</p><p><strong>ಪ್ರಚೋದಕ ಶಕ್ತಿಯ ವಿಚಾರಸಾಹಿತ್ಯ ರಚನೆಗೆ ಅರಸು ಕರೆ</strong></p><p>ಚಿಕ್ಕದೇವರಾಜ ಮಂಟಪ (ಮಂಡ್ಯ), ಮೇ 31– ‘ಜನರ ಬದುಕಿಗೆ ನೆರವಾಗುವಂತಹ, ಅವರ ಮಾನಸಿಕ ದಾಸ್ಯವನ್ನು ಹೋಗಲಾಡಿಸಿ, ಅವರಲ್ಲಿ ಆತ್ಮಗೌರವ ಮೂಡಿಸುವಂತಹ ಚೇತನಪೂರ್ಣ ಸಾಹಿತ್ಯವನ್ನು ಹೆಚ್ಚು ಹೆಚ್ಚಾಗಿ ಸೃಷ್ಟಿಸಬೇಕು’ ಎಂದು ಮುಖ್ಯಮಂತ್ರಿ ದೇವರಾಜ ಅರಸು ಅವರು ಇಂದು ಸಾಹಿತಿಗಳಿಗೆ ಕರೆ ನೀಡಿದರು.</p><p>ಇಲ್ಲಿ ಬೆಳಿಗ್ಗೆ 48ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಅವರು ‘ನಮಗೆ ಬೇಕಾಗಿರುವುದು ಪ್ರಚಾರ ಸಾಹಿತ್ಯವಲ್ಲ, ವಿಚಾರಸಾಹಿತ್ಯ. ರಾಷ್ಟ್ರದ ಪುನರ್ ನಿರ್ಮಾಣಕ್ಕೆ ಜನತೆಯನ್ನು ಸನ್ನದ್ಧಗೊಳಿಸುವ ಪ್ರಚೋದಕ ಸಾಹಿತ್ಯ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಡಳಿತ ಭಾಷೆ, ಶಿಕ್ಷಣ ಮಾಧ್ಯಮ ಆಗಲಿ ಕನ್ನಡ: ಆಗ್ರಹ</strong></p><p>ಚಿಕ್ಕದೇವರಾಜ ಮಂಟಪ (ಮಂಡ್ಯ), ಮೇ 31– ‘ಆದಷ್ಟು ಬೇಗ ಕನ್ನಡ ಆಡಳಿತ ಭಾಷೆಯಾಗಬೇಕು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ಶಿಕ್ಷಣ ಮಾಧ್ಯಮವಾಗಬೇಕು’</p><p>ಶ್ರೀಮತಿ ಜಯದೇವಿ ತಾಯಿ ಲಿಗಾಡೆ ಅವರು ಇಂದು ಇಲ್ಲಿ ಆರಂಭವಾದ 48ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಭಾಷಣದಲ್ಲಿ ಈ ಅಂಶವನ್ನು ಆಗ್ರಹಪೂರ್ವಕವಾಗಿ ಒತ್ತಾಯಪಡಿಸಿದರು.</p><p>ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣ ಮಾಡಲು 17 ವರ್ಷಗಳ ಕಾಲ ಕಾಯಬೇಕಾಯಿತೆಂದು ಹೇಳಿದ ಅವರು, ಈಗ ಕನ್ನಡವನ್ನು ಆಡಳಿತ ಭಾಷೆಯಾಗಿ ಮಾಡಲು ಇನ್ನೂ ಹೆಚ್ಚು ಕಾಲ ಕಾಯಬೇಕೆಂದರೆ ಅದು ನಮ್ಮ ಸಹನೆಯನ್ನು ಒರೆಗೆ ಹಚ್ಚಿದಂತೆ ಆಗುವುದು ಎಂದು ಎಚ್ಚರಿಸಿದರು.</p><p><strong>ಪ್ರಚೋದಕ ಶಕ್ತಿಯ ವಿಚಾರಸಾಹಿತ್ಯ ರಚನೆಗೆ ಅರಸು ಕರೆ</strong></p><p>ಚಿಕ್ಕದೇವರಾಜ ಮಂಟಪ (ಮಂಡ್ಯ), ಮೇ 31– ‘ಜನರ ಬದುಕಿಗೆ ನೆರವಾಗುವಂತಹ, ಅವರ ಮಾನಸಿಕ ದಾಸ್ಯವನ್ನು ಹೋಗಲಾಡಿಸಿ, ಅವರಲ್ಲಿ ಆತ್ಮಗೌರವ ಮೂಡಿಸುವಂತಹ ಚೇತನಪೂರ್ಣ ಸಾಹಿತ್ಯವನ್ನು ಹೆಚ್ಚು ಹೆಚ್ಚಾಗಿ ಸೃಷ್ಟಿಸಬೇಕು’ ಎಂದು ಮುಖ್ಯಮಂತ್ರಿ ದೇವರಾಜ ಅರಸು ಅವರು ಇಂದು ಸಾಹಿತಿಗಳಿಗೆ ಕರೆ ನೀಡಿದರು.</p><p>ಇಲ್ಲಿ ಬೆಳಿಗ್ಗೆ 48ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಅವರು ‘ನಮಗೆ ಬೇಕಾಗಿರುವುದು ಪ್ರಚಾರ ಸಾಹಿತ್ಯವಲ್ಲ, ವಿಚಾರಸಾಹಿತ್ಯ. ರಾಷ್ಟ್ರದ ಪುನರ್ ನಿರ್ಮಾಣಕ್ಕೆ ಜನತೆಯನ್ನು ಸನ್ನದ್ಧಗೊಳಿಸುವ ಪ್ರಚೋದಕ ಸಾಹಿತ್ಯ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>