ಬೆಂಗಳೂರು, ಜ. 8– ಇಂದು ನಡೆಯಬೇಕಾಗಿದ್ದ ಕಾರ್ಪೊರೇಷನ್ ಸಭೆ ರದ್ದಾದ ಪ್ರಕರಣ, ‘ಕೇವಲ ಸಾಮಾನ್ಯ ವಿಚಾರಣೆ ನಡೆಸುವುದಲ್ಲ, ಸಂಬಂಧಪಟ್ಟ ಅಧಿಕಾರಿಗಳನ್ನು ಸಸ್ಪೆಂಡ್ ಮಾಡುವ ಪ್ರಸಂಗ’ ಎಂದು ಆಡಳಿತ ಕಾಂಗ್ರೆಸ್ಸಿನ ರಾಜ್ಯ ಅಡ್ಹಾಕ್ ಸಮಿತಿ ಸಂಚಾಲಕ ಶ್ರೀ ಡಿ.ದೇವರಾಜ ಅರಸ್ ಅವರು ಇಂದು ವರದಿಗಾರರಿಗೆ ತಿಳಿಸಿದರು.