<p><strong>ಮೇಯರ್ ಆಯ್ಕೆಗೆ ಸೇರಲಿದ್ದ ಕಾರ್ಪೊರೇಷನ್ ಸಭೆ ಹಠಾತ್ ರದ್ದು</strong></p>.<p><strong>ಬೆಂಗಳೂರು, ಜ. 8– </strong>ಮೇಯರ್ ಹಾಗೂ ಉಪಮೇಯರ್ಗಳನ್ನು ಚುನಾಯಿಸಲು ಸೇರಲಿದ್ದ ನೂತನ ಕಾರ್ಪೊರೇಷನ್ನಿನ ಪ್ರಥಮ ಸಭೆ ಸೇರುವ ಸುಮಾರು 3 ಗಂಟೆಗಳ ಮುನ್ನ ಕಮಿಷನರ್ ಅವರು ಹಠಾತ್ತನೆ ಸಭೆಯನ್ನು ರದ್ದುಗೊಳಿಸಿದರು.</p>.<p>ನಿಯಮದಂತೆ ಸಕಾಲದಲ್ಲಿ ಕಾರ್ಪೊರೇಷನ್ ಚುನಾವಣೆಗಳ ಫಲಿತಾಂಶ ರಾಜ್ಯ ಪತ್ರದಲ್ಲಿ ಪ್ರಕಟವಾಗದಿದ್ದುದೇ ಕಮಿಷನರ್ ಅವರ ಈ ನಿರ್ಧಾರಕ್ಕೆ ಕಾರಣ. ಈ ಅನಿರೀಕ್ಷಿತ ಬೆಳವಣಿಗೆ ಬಗ್ಗೆ ಕಾರ್ಪೊರೇಷನ್ನಿನ ನಾನಾ ರಾಜಕೀಯ ಪಕ್ಷಗಳಲ್ಲಿ ತೀವ್ರ ಪ್ರತಿಕ್ರಿಯೆಗಳುಂಟಾದವು.</p>.<p><strong>ಬರೀ ವಿಚಾರಣೆಯಲ್ಲ, ಅಧಿಕಾರಿ ಸಸ್ಪೆಂಡ್ ಆಗಬೇಕು: ಅರಸು</strong></p>.<p><strong>ಬೆಂಗಳೂರು, ಜ. 8– </strong>ಇಂದು ನಡೆಯಬೇಕಾಗಿದ್ದ ಕಾರ್ಪೊರೇಷನ್ ಸಭೆ ರದ್ದಾದ ಪ್ರಕರಣ, ‘ಕೇವಲ ಸಾಮಾನ್ಯ ವಿಚಾರಣೆ ನಡೆಸುವುದಲ್ಲ, ಸಂಬಂಧಪಟ್ಟ ಅಧಿಕಾರಿಗಳನ್ನು ಸಸ್ಪೆಂಡ್ ಮಾಡುವ ಪ್ರಸಂಗ’ ಎಂದು ಆಡಳಿತ ಕಾಂಗ್ರೆಸ್ಸಿನ ರಾಜ್ಯ ಅಡ್ಹಾಕ್ ಸಮಿತಿ ಸಂಚಾಲಕ ಶ್ರೀ ಡಿ.ದೇವರಾಜ ಅರಸ್ ಅವರು ಇಂದು ವರದಿಗಾರರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೇಯರ್ ಆಯ್ಕೆಗೆ ಸೇರಲಿದ್ದ ಕಾರ್ಪೊರೇಷನ್ ಸಭೆ ಹಠಾತ್ ರದ್ದು</strong></p>.<p><strong>ಬೆಂಗಳೂರು, ಜ. 8– </strong>ಮೇಯರ್ ಹಾಗೂ ಉಪಮೇಯರ್ಗಳನ್ನು ಚುನಾಯಿಸಲು ಸೇರಲಿದ್ದ ನೂತನ ಕಾರ್ಪೊರೇಷನ್ನಿನ ಪ್ರಥಮ ಸಭೆ ಸೇರುವ ಸುಮಾರು 3 ಗಂಟೆಗಳ ಮುನ್ನ ಕಮಿಷನರ್ ಅವರು ಹಠಾತ್ತನೆ ಸಭೆಯನ್ನು ರದ್ದುಗೊಳಿಸಿದರು.</p>.<p>ನಿಯಮದಂತೆ ಸಕಾಲದಲ್ಲಿ ಕಾರ್ಪೊರೇಷನ್ ಚುನಾವಣೆಗಳ ಫಲಿತಾಂಶ ರಾಜ್ಯ ಪತ್ರದಲ್ಲಿ ಪ್ರಕಟವಾಗದಿದ್ದುದೇ ಕಮಿಷನರ್ ಅವರ ಈ ನಿರ್ಧಾರಕ್ಕೆ ಕಾರಣ. ಈ ಅನಿರೀಕ್ಷಿತ ಬೆಳವಣಿಗೆ ಬಗ್ಗೆ ಕಾರ್ಪೊರೇಷನ್ನಿನ ನಾನಾ ರಾಜಕೀಯ ಪಕ್ಷಗಳಲ್ಲಿ ತೀವ್ರ ಪ್ರತಿಕ್ರಿಯೆಗಳುಂಟಾದವು.</p>.<p><strong>ಬರೀ ವಿಚಾರಣೆಯಲ್ಲ, ಅಧಿಕಾರಿ ಸಸ್ಪೆಂಡ್ ಆಗಬೇಕು: ಅರಸು</strong></p>.<p><strong>ಬೆಂಗಳೂರು, ಜ. 8– </strong>ಇಂದು ನಡೆಯಬೇಕಾಗಿದ್ದ ಕಾರ್ಪೊರೇಷನ್ ಸಭೆ ರದ್ದಾದ ಪ್ರಕರಣ, ‘ಕೇವಲ ಸಾಮಾನ್ಯ ವಿಚಾರಣೆ ನಡೆಸುವುದಲ್ಲ, ಸಂಬಂಧಪಟ್ಟ ಅಧಿಕಾರಿಗಳನ್ನು ಸಸ್ಪೆಂಡ್ ಮಾಡುವ ಪ್ರಸಂಗ’ ಎಂದು ಆಡಳಿತ ಕಾಂಗ್ರೆಸ್ಸಿನ ರಾಜ್ಯ ಅಡ್ಹಾಕ್ ಸಮಿತಿ ಸಂಚಾಲಕ ಶ್ರೀ ಡಿ.ದೇವರಾಜ ಅರಸ್ ಅವರು ಇಂದು ವರದಿಗಾರರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>