<p><strong>ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ಪಿ.ಯು.ಸಿ. ಬೋಧನೆಗೆ ವಿಶೇಷ ಭತ್ಯೆ: ಅಧ್ಯಾಪಕರ ಆಗ್ರಹ</strong></p>.<p><strong>ಬೆಂಗಳೂರು ಜೂನ್ 6– </strong>ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ಹೊಸ ಪಿ.ಯು.ಸಿ.ಯ ಪ್ರಥಮ ವರ್ಷದ ತರಗತಿಗಳನ್ನೆತ್ತಿಕೊಳ್ಳುವ ಶಿಕ್ಷಕರಿಗೆ ವಾರಕ್ಕೆ ತಲಾ ಒಂದು ತರಗತಿಗೆ ತಿಂಗಳಿಗೆ 20 ರೂಪಾಯಿಗಳ ಭತ್ಯೆ ನೀಡಬೇಕು ಎಂದು ಹೈಯರ್ ಸೆಕೆಂಡರಿ ಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ಉಪಾಧ್ಯಾಯರುಗಳ ಸಭೆಯು ಸರ್ಕಾರವನ್ನು ಒತ್ತಾಯಪಡಿಸಿದೆ.</p>.<p>ಈ ವರ್ಷದಿಂದ ಜಾರಿಗೆ ಬರಲಿರುವ ಎರಡು ವರ್ಷಗಳ ಪಿ.ಯು.ಸಿ.ಯ ತರಗತಿಗಳನ್ನು ಹೈಯರ್ ಸೆಕೆಂಡರಿ ಶಾಲಾ ಶಿಕ್ಷಕರೂ ಹಲವು ಪ್ರಸಂಗಗಳಲ್ಲಿ ತೆಗೆದುಕೊಳ್ಳಬೇಕಾಗಿರುವುದರಿಂದ ಅವರ ಶ್ರಮಕ್ಕೆ ಸೂಕ್ತ ಪರಿಹಾರ ಅಗತ್ಯ ಎಂದು ಸಭೆ ಅಭಿಪ್ರಾಯಪಟ್ಟಿತು.</p>.<p><strong>ಹೊಸ ಸೋಷಲಿಸ್ಟ್ ಪಕ್ಷ ಸೇರಲು ಕಾಂಗ್ರೆಸ್(ಸಂ) ಯುವಜನರ ಯತ್ನ</strong></p>.<p><strong>ನವದೆಹಲಿ, ಜೂನ್ 6–</strong> ಪ್ರಜಾ ಸೋಷಲಿಸ್ಟ್ ಮತ್ತು ಸಂಯುಕ್ತ ಸೋಷಲಿಸ್ಟ್ ಪಕ್ಷಗಳು ವಿಲೀನವಾಗಿ ಒಂದೇ ಒಂದು ಸಮಾಜವಾದಿ ಪಕ್ಷವಾಗುವ ನಿರೀಕ್ಷೆ ಇರುವ ಈ ಸಮಯದಲ್ಲಿ, ಈ ಹೊಸ ಪಕ್ಷದೊಡನೆ ಮಾತುಕತೆ ನಡೆಸಲು ಸಂಸ್ಥಾ ಕಾಂಗ್ರೆಸ್ಸಿನಲ್ಲಿನ ಕೆಲ ಮಂದಿ ಯುವಜನರು ತಮ್ಮ ತಮ್ಮಲ್ಲೇ ಬೆಂಬಲವನ್ನು ಸಂಘಟಿಸುತ್ತಿದ್ದಾರೆ.</p>.<p>ಈ ಮಾತುಕತೆಗಳು ಸಂಸ್ಥಾ ಕಾಂಗ್ರೆಸ್ಸಿನ ಒಂದು ವರ್ಗದವರು ಹೊಸ ಪಕ್ಷದೊಡನೆ ಸೇರಲು ಅವಕಾಶ ಮಾಡಿಕೊಡಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ಪಿ.ಯು.ಸಿ. ಬೋಧನೆಗೆ ವಿಶೇಷ ಭತ್ಯೆ: ಅಧ್ಯಾಪಕರ ಆಗ್ರಹ</strong></p>.<p><strong>ಬೆಂಗಳೂರು ಜೂನ್ 6– </strong>ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ಹೊಸ ಪಿ.ಯು.ಸಿ.ಯ ಪ್ರಥಮ ವರ್ಷದ ತರಗತಿಗಳನ್ನೆತ್ತಿಕೊಳ್ಳುವ ಶಿಕ್ಷಕರಿಗೆ ವಾರಕ್ಕೆ ತಲಾ ಒಂದು ತರಗತಿಗೆ ತಿಂಗಳಿಗೆ 20 ರೂಪಾಯಿಗಳ ಭತ್ಯೆ ನೀಡಬೇಕು ಎಂದು ಹೈಯರ್ ಸೆಕೆಂಡರಿ ಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ಉಪಾಧ್ಯಾಯರುಗಳ ಸಭೆಯು ಸರ್ಕಾರವನ್ನು ಒತ್ತಾಯಪಡಿಸಿದೆ.</p>.<p>ಈ ವರ್ಷದಿಂದ ಜಾರಿಗೆ ಬರಲಿರುವ ಎರಡು ವರ್ಷಗಳ ಪಿ.ಯು.ಸಿ.ಯ ತರಗತಿಗಳನ್ನು ಹೈಯರ್ ಸೆಕೆಂಡರಿ ಶಾಲಾ ಶಿಕ್ಷಕರೂ ಹಲವು ಪ್ರಸಂಗಗಳಲ್ಲಿ ತೆಗೆದುಕೊಳ್ಳಬೇಕಾಗಿರುವುದರಿಂದ ಅವರ ಶ್ರಮಕ್ಕೆ ಸೂಕ್ತ ಪರಿಹಾರ ಅಗತ್ಯ ಎಂದು ಸಭೆ ಅಭಿಪ್ರಾಯಪಟ್ಟಿತು.</p>.<p><strong>ಹೊಸ ಸೋಷಲಿಸ್ಟ್ ಪಕ್ಷ ಸೇರಲು ಕಾಂಗ್ರೆಸ್(ಸಂ) ಯುವಜನರ ಯತ್ನ</strong></p>.<p><strong>ನವದೆಹಲಿ, ಜೂನ್ 6–</strong> ಪ್ರಜಾ ಸೋಷಲಿಸ್ಟ್ ಮತ್ತು ಸಂಯುಕ್ತ ಸೋಷಲಿಸ್ಟ್ ಪಕ್ಷಗಳು ವಿಲೀನವಾಗಿ ಒಂದೇ ಒಂದು ಸಮಾಜವಾದಿ ಪಕ್ಷವಾಗುವ ನಿರೀಕ್ಷೆ ಇರುವ ಈ ಸಮಯದಲ್ಲಿ, ಈ ಹೊಸ ಪಕ್ಷದೊಡನೆ ಮಾತುಕತೆ ನಡೆಸಲು ಸಂಸ್ಥಾ ಕಾಂಗ್ರೆಸ್ಸಿನಲ್ಲಿನ ಕೆಲ ಮಂದಿ ಯುವಜನರು ತಮ್ಮ ತಮ್ಮಲ್ಲೇ ಬೆಂಬಲವನ್ನು ಸಂಘಟಿಸುತ್ತಿದ್ದಾರೆ.</p>.<p>ಈ ಮಾತುಕತೆಗಳು ಸಂಸ್ಥಾ ಕಾಂಗ್ರೆಸ್ಸಿನ ಒಂದು ವರ್ಗದವರು ಹೊಸ ಪಕ್ಷದೊಡನೆ ಸೇರಲು ಅವಕಾಶ ಮಾಡಿಕೊಡಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>