ಶಿಮ್ಲಾ, ಅ. 7– ಚುನಾವಣೆಯ ಕಾಲದಲ್ಲಿ ನೀಡಲಾದ ಆಶ್ವಾಸನೆಗಳನ್ನು ಶೀಘ್ರಗತಿಯಲ್ಲಿ ಜಾರಿಗೆ ತಂದದ್ದು, ರಾಜಸ್ಥಾನ, ಬಿಹಾರ ಮತ್ತು ಆಂದ್ರ ಪ್ರದೇಶಗಳಲ್ಲಿ ರಾಜಕೀಯ ಬಿಕ್ಕಟ್ಟುಗಳನ್ನು ಯಶಸ್ವಿಯಾಗಿ ಪರಿಹರಿಸಿದ್ದು ಹಾಗೂ ಪಕ್ಷದ ಆಡಳಿತ ಯಂತ್ರವನ್ನು ಏಕಮುಖಗೊಳಿಸಲು ಕೈಗೊಂಡ ಸತ್ವ ಪೂರ್ಣ ಕ್ರಮಗಳು ಆಡಳಿತ ಕಾಂಗ್ರೆಸ್ ಪಕ್ಷ ತನ್ನ ಸ್ಥಾನವನ್ನು ಲೋಕಸಭೆ ಚುನಾವಣೆಯಲ್ಲಿ ಭಾರೀ ವಿಜಯ ಗಳಿಸಿದ ನಂತರ ಮತ್ತಷ್ಟು ಭದ್ರಪಡಿಸಿಕೊಳ್ಳಲು ಸಹಾಯಕವಾಗಿವೆ.