ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಶುಕ್ರವಾರ 8–10–1971

Last Updated 7 ಅಕ್ಟೋಬರ್ 2021, 15:22 IST
ಅಕ್ಷರ ಗಾತ್ರ

ಭಾರತದ ದಮನ ಯಾರಿಂದಲೂ ಸಾಧ್ಯವಿಲ್ಲ: ಇಂದಿರಾ

ಚಂಡೀಗಡ, ಅ. 7– ಭಾರತವನ್ನು ದಮನ ಮಾಡುವುದಾಗಲಿ, ಅದನ್ನು ಹಿಂದಿನ ಸಾಲಿಗೆ ತಳ್ಳುವುದಾಗಲಿ ಈ ಭೂಮಿಯ ಮೇಲಣ ಯಾವ ಶಕ್ತಿಗೂ ಸಾಧ್ಯವಿಲ್ಲ ಎಂದು ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ಘೋಷಿಸಿದರು.

‘ಎಲ್ಲ ಅಪಾಯಗಳನ್ನೂ ನಾವು ಒಗ್ಗಟ್ಟಿನಿಂದ ಎದುರಿಸುತ್ತೇವೆ. ವಿವಿಧ ಎಡರುತೊಡರುಗಳನ್ನು ದಾಟಿ ಮುನ್ನಡೆಯುತ್ತೇವೆ’ ಎಂದೂ ಅವರು ನುಡಿದರು.

ಆಡಳಿತ ಕಾಂಗ್ರೆಸ್‌ ಸ್ಥಾನ ಈಗ ಮತ್ತಷ್ಟು ಭದ್ರ: ಕಾರ್ಯದರ್ಶಿಗಳ ಸಮೀಕ್ಷೆ

ಶಿಮ್ಲಾ, ಅ. 7– ಚುನಾವಣೆಯ ಕಾಲದಲ್ಲಿ ನೀಡಲಾದ ಆಶ್ವಾಸನೆಗಳನ್ನು ಶೀಘ್ರಗತಿಯಲ್ಲಿ ಜಾರಿಗೆ ತಂದದ್ದು, ರಾಜಸ್ಥಾನ, ಬಿಹಾರ ಮತ್ತು ಆಂದ್ರ ಪ್ರದೇಶಗಳಲ್ಲಿ ರಾಜಕೀಯ ಬಿಕ್ಕಟ್ಟುಗಳನ್ನು ಯಶಸ್ವಿಯಾಗಿ ಪರಿಹರಿಸಿದ್ದು ಹಾಗೂ ಪಕ್ಷದ ಆಡಳಿತ ಯಂತ್ರವನ್ನು ಏಕಮುಖಗೊಳಿಸಲು ಕೈಗೊಂಡ ಸತ್ವ ಪೂರ್ಣ ಕ್ರಮಗಳು ಆಡಳಿತ ಕಾಂಗ್ರೆಸ್‌ ಪಕ್ಷ ತನ್ನ ಸ್ಥಾನವನ್ನು ಲೋಕಸಭೆ ಚುನಾವಣೆಯಲ್ಲಿ ಭಾರೀ ವಿಜಯ ಗಳಿಸಿದ ನಂತರ ಮತ್ತಷ್ಟು ಭದ್ರಪಡಿಸಿಕೊಳ್ಳಲು ಸಹಾಯಕವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT