<h2>‘ಹಣದುಬ್ಬರ ವಿರುದ್ಧ ಕ್ರಮ ಯಶಸ್ವಿ’</h2>.<p><strong>ನವದೆಹಲಿ, ಫೆ. 17–</strong> ಹಣದುಬ್ಬರದ ವಿರುದ್ಧ ಸರ್ಕಾರ ಕೈಗೊಂಡಿರುವ ಸಂಘಟಿತ ಕ್ರಮಗಳಿಂದ ಬೆಲೆಗಳು ಇಳಿಯಲಾರಂಭಿಸಿವೆ ಎಂದು ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮದ್ ಇಂದು ತಿಳಿಸಿದರು.</p>.<p>ಅಗತ್ಯ ವಸ್ತುಗಳು ಸಲೀಸಾಗಿ ಸಿಗುವ ಪರಿಸ್ಥಿತಿ ಸಹ ಉತ್ತಮಗೊಂಡಿದೆಯೆಂದೂ ಅವರು ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ಘಾಟಿಸುತ್ತಾ ಹೇಳಿದರು.</p>.<p>ಹಿಂಗಾರು ಬೆಳೆ ಉತ್ತಮವಾಗಿದೆ. ವಿದ್ಯುತ್ ಉತ್ಪಾದನೆ ಕಳೆದ ವರ್ಷಕ್ಕಿಂತ ಶೇ 14ರಷ್ಟು ಹೆಚ್ಚಿದೆ. ಆದರೂ ಇನ್ನೂ ಕೆಲವು ರಾಜ್ಯಗಳು ವಿದ್ಯುತ್ ಅಭಾವದಿಂದ ನರಳುತ್ತಿರುವ ಕಾರಣ ವಿದ್ಯುತ್ ಉತ್ಪಾದನಾ ಯೋಜನೆಗಳನ್ನು ಪೂರೈಸಲು ಆದ್ಯತೆ ನೀಡಲಾಗಿದೆ ಎಂದೂ ರಾಷ್ಟ್ರಪತಿಗಳು ಹೇಳಿದರು.</p>.<h2>ಬೆಂಬಲಿಸಿದರೆ ಹಣ, ತಿರುಗಿಬಿದ್ದರೆ ಸಲಾಕಿ, ಸೈಕಲ್ ಚೈನು ಹೊಡೆತ</h2>.<p><strong>ಬೆಂಗಳೂರು, ಫೆ. 17– ‘</strong>ಸರ್ಕಾರದ ಬೆಂಬಲಿಗರಿಗೆ ಹಣದ ಚೀಲ– ವಿರೋಧಿಸಿದವರಿಗೆ ಕಬ್ಬಿಣದ ಸಲಾಕಿ, ಸೈಕಲ್ ಚೈನಿನ ಹೊಡೆತ’ ಎಂದು ನುಡಿದ ವಿರೋಧ ಪಕ್ಷದ ನಾಯಕ ಎಚ್.ಡಿ. ದೇವೇಗೌಡ ಅವರು ವಿದ್ಯಾರ್ಥಿಗಳ ಮೇಲೆ ನಾನಾ ಕಡೆ ಹಲ್ಲೆ ನಡೆದಿದೆಯೆಂದು ಇಂದು ವಿಧಾನಸಭೆಯಲ್ಲಿ ಟೀಕಿಸಿದರು.</p>.<p>ಬೆಂಗಳೂರು, ಶಿವಮೊಗ್ಗ, ಭದ್ರಾವತಿ, ಮೈಸೂರು ಮೊದಲಾದ ಕಡೆ ನಡೆದ ಘಟನೆಗಳನ್ನು ಪ್ರಸ್ತಾಪಿಸಿದ ಅವರು ‘ಎಷ್ಟು ಮಂದಿಯನ್ನು ಬಂಧಿಸಿದ್ದೀರಿ? ಪೊಲೀಸರು ಏನು ಮಾಡುತ್ತಿದ್ದಾರೆ? ಎಷ್ಟು ದಿನ ಅಧಿಕಾರ ದುರುಪಯೋಗ ಮಾಡಿ ಆಡಳಿತ ನಡೆಸಬೇಕೆಂದಿದ್ದೀರಿ? ಎಂದು ಸರ್ಕಾರವನ್ನು ಕೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2>‘ಹಣದುಬ್ಬರ ವಿರುದ್ಧ ಕ್ರಮ ಯಶಸ್ವಿ’</h2>.<p><strong>ನವದೆಹಲಿ, ಫೆ. 17–</strong> ಹಣದುಬ್ಬರದ ವಿರುದ್ಧ ಸರ್ಕಾರ ಕೈಗೊಂಡಿರುವ ಸಂಘಟಿತ ಕ್ರಮಗಳಿಂದ ಬೆಲೆಗಳು ಇಳಿಯಲಾರಂಭಿಸಿವೆ ಎಂದು ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮದ್ ಇಂದು ತಿಳಿಸಿದರು.</p>.<p>ಅಗತ್ಯ ವಸ್ತುಗಳು ಸಲೀಸಾಗಿ ಸಿಗುವ ಪರಿಸ್ಥಿತಿ ಸಹ ಉತ್ತಮಗೊಂಡಿದೆಯೆಂದೂ ಅವರು ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ಘಾಟಿಸುತ್ತಾ ಹೇಳಿದರು.</p>.<p>ಹಿಂಗಾರು ಬೆಳೆ ಉತ್ತಮವಾಗಿದೆ. ವಿದ್ಯುತ್ ಉತ್ಪಾದನೆ ಕಳೆದ ವರ್ಷಕ್ಕಿಂತ ಶೇ 14ರಷ್ಟು ಹೆಚ್ಚಿದೆ. ಆದರೂ ಇನ್ನೂ ಕೆಲವು ರಾಜ್ಯಗಳು ವಿದ್ಯುತ್ ಅಭಾವದಿಂದ ನರಳುತ್ತಿರುವ ಕಾರಣ ವಿದ್ಯುತ್ ಉತ್ಪಾದನಾ ಯೋಜನೆಗಳನ್ನು ಪೂರೈಸಲು ಆದ್ಯತೆ ನೀಡಲಾಗಿದೆ ಎಂದೂ ರಾಷ್ಟ್ರಪತಿಗಳು ಹೇಳಿದರು.</p>.<h2>ಬೆಂಬಲಿಸಿದರೆ ಹಣ, ತಿರುಗಿಬಿದ್ದರೆ ಸಲಾಕಿ, ಸೈಕಲ್ ಚೈನು ಹೊಡೆತ</h2>.<p><strong>ಬೆಂಗಳೂರು, ಫೆ. 17– ‘</strong>ಸರ್ಕಾರದ ಬೆಂಬಲಿಗರಿಗೆ ಹಣದ ಚೀಲ– ವಿರೋಧಿಸಿದವರಿಗೆ ಕಬ್ಬಿಣದ ಸಲಾಕಿ, ಸೈಕಲ್ ಚೈನಿನ ಹೊಡೆತ’ ಎಂದು ನುಡಿದ ವಿರೋಧ ಪಕ್ಷದ ನಾಯಕ ಎಚ್.ಡಿ. ದೇವೇಗೌಡ ಅವರು ವಿದ್ಯಾರ್ಥಿಗಳ ಮೇಲೆ ನಾನಾ ಕಡೆ ಹಲ್ಲೆ ನಡೆದಿದೆಯೆಂದು ಇಂದು ವಿಧಾನಸಭೆಯಲ್ಲಿ ಟೀಕಿಸಿದರು.</p>.<p>ಬೆಂಗಳೂರು, ಶಿವಮೊಗ್ಗ, ಭದ್ರಾವತಿ, ಮೈಸೂರು ಮೊದಲಾದ ಕಡೆ ನಡೆದ ಘಟನೆಗಳನ್ನು ಪ್ರಸ್ತಾಪಿಸಿದ ಅವರು ‘ಎಷ್ಟು ಮಂದಿಯನ್ನು ಬಂಧಿಸಿದ್ದೀರಿ? ಪೊಲೀಸರು ಏನು ಮಾಡುತ್ತಿದ್ದಾರೆ? ಎಷ್ಟು ದಿನ ಅಧಿಕಾರ ದುರುಪಯೋಗ ಮಾಡಿ ಆಡಳಿತ ನಡೆಸಬೇಕೆಂದಿದ್ದೀರಿ? ಎಂದು ಸರ್ಕಾರವನ್ನು ಕೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>