<h2>ಮುಷ್ಕರ ಅಕ್ರಮ: ಸರ್ಕಾರಿ ನೌಕರರಿಗೆ ಅರಸು ಎಚ್ಚರಿಕೆ</h2>.<p><strong>ಬೆಂಗಳೂರು, ಏ. 5–</strong> ರಾಜ್ಯ ಸರ್ಕಾರಿ ನೌಕರರು ಅಖಿಲ ಭಾರತ ಕಾರ್ಯಕ್ರಮದಂತೆ ಏಪ್ರಿಲ್ 9ರಂದು ಮುಷ್ಕರ ಹೂಡುವುದು ಅಕ್ರಮವಾಗುವುದಲ್ಲದೇ ಶಿಸ್ತಿನ ಕ್ರಮಗಳನ್ನು ಎದುರಿಸಬೇಕಾಗುವುದೆಂದು ಮುಖ್ಯಮಂತ್ರಿ ಶ್ರೀ ಡಿ. ದೇವರಾಜ ಅರಸು ಅವರು ಇಂದು ವಿಧಾನಸಭೆಯಲ್ಲಿ ಎಚ್ಚರಿಕೆ ನೀಡಿದರು.</p>.<p>ಮುಷ್ಕರದ ಬಗ್ಗೆ ಶ್ರೀ ಕೋಣಂದೂರು ಲಿಂಗಪ್ಪ ಅವರು ಪ್ರಶ್ನೋತ್ತರವಾದ ನಂತರ ಮುಖ್ಯಮಂತ್ರಿಗಳ ಗಮನ ಸೆಳೆದರು.</p>.<p>ಆಹಾರ ಬೆಲೆಗಳನ್ನು ಇಳಿಸುವುದು, ವೇತನ ಭತ್ಯೆಗಳ ಪರಿಷ್ಕರಣೆ ಮುಂತಾದ ಬೇಡಿಕೆಗಳ ಬಗ್ಗೆ ಇಂದು ಸಂಜೆ ಸಭೆ ನಡೆಯುವುದು ತಮಗೆ ಗೊತ್ತಿದೆಯೆಂದು ಮುಖ್ಯಮಂತ್ರಿ ತಿಳಿಸಿ ‘ಸಭೆ, ಮುಷ್ಕರಗಳಿಂದ ಸಮಸ್ಯೆ ಪರಿಹಾರವಾಗುವುದಿಲ್ಲ’ ಎಂದರು.</p>.<p>ನೌಕರರ ಬೇಡಿಕೆಗಳ ಬಗ್ಗೆ ಮಾನ್ಯ ಸದಸ್ಯರಷ್ಟೇ ಸರ್ಕಾರಕ್ಕೂ ಸಹಾನುಭೂತಿಯಿದೆ. ಆದರೆ, ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ನೌಕರರ ವೇತನ ಭತ್ಯೆಗಳನ್ನು ಪರಿಷ್ಕರಿಸುತ್ತಿರುವುದು ತಾರತಮ್ಯಕ್ಕೆ ಅವಕಾಶ<br>ಆಗಿದೆಯೆಂದು ಶ್ರೀ ಅರಸು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2>ಮುಷ್ಕರ ಅಕ್ರಮ: ಸರ್ಕಾರಿ ನೌಕರರಿಗೆ ಅರಸು ಎಚ್ಚರಿಕೆ</h2>.<p><strong>ಬೆಂಗಳೂರು, ಏ. 5–</strong> ರಾಜ್ಯ ಸರ್ಕಾರಿ ನೌಕರರು ಅಖಿಲ ಭಾರತ ಕಾರ್ಯಕ್ರಮದಂತೆ ಏಪ್ರಿಲ್ 9ರಂದು ಮುಷ್ಕರ ಹೂಡುವುದು ಅಕ್ರಮವಾಗುವುದಲ್ಲದೇ ಶಿಸ್ತಿನ ಕ್ರಮಗಳನ್ನು ಎದುರಿಸಬೇಕಾಗುವುದೆಂದು ಮುಖ್ಯಮಂತ್ರಿ ಶ್ರೀ ಡಿ. ದೇವರಾಜ ಅರಸು ಅವರು ಇಂದು ವಿಧಾನಸಭೆಯಲ್ಲಿ ಎಚ್ಚರಿಕೆ ನೀಡಿದರು.</p>.<p>ಮುಷ್ಕರದ ಬಗ್ಗೆ ಶ್ರೀ ಕೋಣಂದೂರು ಲಿಂಗಪ್ಪ ಅವರು ಪ್ರಶ್ನೋತ್ತರವಾದ ನಂತರ ಮುಖ್ಯಮಂತ್ರಿಗಳ ಗಮನ ಸೆಳೆದರು.</p>.<p>ಆಹಾರ ಬೆಲೆಗಳನ್ನು ಇಳಿಸುವುದು, ವೇತನ ಭತ್ಯೆಗಳ ಪರಿಷ್ಕರಣೆ ಮುಂತಾದ ಬೇಡಿಕೆಗಳ ಬಗ್ಗೆ ಇಂದು ಸಂಜೆ ಸಭೆ ನಡೆಯುವುದು ತಮಗೆ ಗೊತ್ತಿದೆಯೆಂದು ಮುಖ್ಯಮಂತ್ರಿ ತಿಳಿಸಿ ‘ಸಭೆ, ಮುಷ್ಕರಗಳಿಂದ ಸಮಸ್ಯೆ ಪರಿಹಾರವಾಗುವುದಿಲ್ಲ’ ಎಂದರು.</p>.<p>ನೌಕರರ ಬೇಡಿಕೆಗಳ ಬಗ್ಗೆ ಮಾನ್ಯ ಸದಸ್ಯರಷ್ಟೇ ಸರ್ಕಾರಕ್ಕೂ ಸಹಾನುಭೂತಿಯಿದೆ. ಆದರೆ, ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ನೌಕರರ ವೇತನ ಭತ್ಯೆಗಳನ್ನು ಪರಿಷ್ಕರಿಸುತ್ತಿರುವುದು ತಾರತಮ್ಯಕ್ಕೆ ಅವಕಾಶ<br>ಆಗಿದೆಯೆಂದು ಶ್ರೀ ಅರಸು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>