<h2>ಬಳ್ಳಾರಿ–ಹೊಸಪೇಟೆ ಪ್ರದೇಶದಲ್ಲಿ ಕಬ್ಬಿಣ ಅದಿರು ನಿಕ್ಷೇಪ ವೃದ್ಧಿ ಯೋಜನೆ ಬಗ್ಗೆ ಸಮಿತಿ ನೇಮಕ</h2>.<p><strong>ನವದೆಹಲಿ, ಜೂನ್ 13–</strong> ಕರ್ನಾಟಕದ ಬಳ್ಳಾರಿ–ಹೊಸಪೇಟೆ ಪ್ರದೇಶದಲ್ಲಿರುವ ಕಬ್ಬಿಣದ ಅದಿರು ನಿಕ್ಷೇಪದ ಅಭಿವೃದ್ಧಿ ಯೋಜನೆ ಬಗ್ಗೆ ಅಧ್ಯಯನ ನಡೆಸಿ ಸಲಹೆ ನೀಡಲು ಕಬ್ಬಿಣ ಅದಿರು ಮಂಡಳಿ ಸಮಿತಿಯೊಂದನ್ನು ರಚಿಸಿದೆ.</p>.<p>ನಿಕ್ಷೇಪವನ್ನು ಹೊರತೆಗೆಯಲು ಕೈಗೊಳ್ಳುವ ನಾನಾ ವಿಧಾನಗಳಿಗೆ ಬೇಕಾಗುವ ಬಂಡವಾಳ ಹಾಗೂ ಆ ಪ್ರದೇಶದಲ್ಲಿ ಉದ್ಯೋಗ ನೀಡಿಕೆ ಅವಕಾಶವನ್ನು ಹೆಚ್ಚಿಸುವ ಅಗತ್ಯ– ಈ ಹಿನ್ನೆಲೆಯಲ್ಲಿ, ಸಮಿತಿಯು ಉತ್ಪಾದನೆ ಕುರಿತು ಯೋಜನೆಯನ್ನು ರೂಪಿಸಲಿದೆ.</p>.<h2>ಹರಿಜನ, ಗಿರಿಜನರ ರಕ್ಷಣೆಗೆ ರಾಜ್ಯದಲ್ಲಿ ಪ್ರತ್ಯೇಕ ಪೊಲೀಸ್ ಘಟಕ</h2>.<p><strong>ಬೆಂಗಳೂರು, ಜೂನ್ 13–</strong> ರಾಜ್ಯದಲ್ಲಿ ಹರಿಜನ, ಗಿರಿಜನರ ಹಕ್ಕುಬಾಧ್ಯತೆಗಳನ್ನು<br>ರಕ್ಷಿಸಲು ಸರ್ಕಾರ ಪ್ರತ್ಯೇಕ ಪೊಲೀಸ್ ಘಟಕವೊಂದನ್ನು ಶೀಘ್ರದಲ್ಲಿಯೇ ಸ್ಥಾಪಿಸಲು ಪರಿಶೀಲಿಸುತ್ತಿದೆ.</p>.<p>ಸಮಾಜ ಕಲ್ಯಾಣ ಸಚಿವ ಎನ್. ರಾಚಯ್ಯ ಈ ವಿಷಯವನ್ನು ಸುದ್ದಿಗಾರರಿಗೆ ಪ್ರಕಟಿಸಿ, ಆ ಘಟಕವು ಪೊಲೀಸ್ ಸೂಪರಿಂಟೆಂಡೆಂಟ್ ಒಬ್ಬರನ್ನು ಮುಖ್ಯಾಧಿಕಾರಿಯನ್ನಾಗಿ ಪಡೆಯಲಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2>ಬಳ್ಳಾರಿ–ಹೊಸಪೇಟೆ ಪ್ರದೇಶದಲ್ಲಿ ಕಬ್ಬಿಣ ಅದಿರು ನಿಕ್ಷೇಪ ವೃದ್ಧಿ ಯೋಜನೆ ಬಗ್ಗೆ ಸಮಿತಿ ನೇಮಕ</h2>.<p><strong>ನವದೆಹಲಿ, ಜೂನ್ 13–</strong> ಕರ್ನಾಟಕದ ಬಳ್ಳಾರಿ–ಹೊಸಪೇಟೆ ಪ್ರದೇಶದಲ್ಲಿರುವ ಕಬ್ಬಿಣದ ಅದಿರು ನಿಕ್ಷೇಪದ ಅಭಿವೃದ್ಧಿ ಯೋಜನೆ ಬಗ್ಗೆ ಅಧ್ಯಯನ ನಡೆಸಿ ಸಲಹೆ ನೀಡಲು ಕಬ್ಬಿಣ ಅದಿರು ಮಂಡಳಿ ಸಮಿತಿಯೊಂದನ್ನು ರಚಿಸಿದೆ.</p>.<p>ನಿಕ್ಷೇಪವನ್ನು ಹೊರತೆಗೆಯಲು ಕೈಗೊಳ್ಳುವ ನಾನಾ ವಿಧಾನಗಳಿಗೆ ಬೇಕಾಗುವ ಬಂಡವಾಳ ಹಾಗೂ ಆ ಪ್ರದೇಶದಲ್ಲಿ ಉದ್ಯೋಗ ನೀಡಿಕೆ ಅವಕಾಶವನ್ನು ಹೆಚ್ಚಿಸುವ ಅಗತ್ಯ– ಈ ಹಿನ್ನೆಲೆಯಲ್ಲಿ, ಸಮಿತಿಯು ಉತ್ಪಾದನೆ ಕುರಿತು ಯೋಜನೆಯನ್ನು ರೂಪಿಸಲಿದೆ.</p>.<h2>ಹರಿಜನ, ಗಿರಿಜನರ ರಕ್ಷಣೆಗೆ ರಾಜ್ಯದಲ್ಲಿ ಪ್ರತ್ಯೇಕ ಪೊಲೀಸ್ ಘಟಕ</h2>.<p><strong>ಬೆಂಗಳೂರು, ಜೂನ್ 13–</strong> ರಾಜ್ಯದಲ್ಲಿ ಹರಿಜನ, ಗಿರಿಜನರ ಹಕ್ಕುಬಾಧ್ಯತೆಗಳನ್ನು<br>ರಕ್ಷಿಸಲು ಸರ್ಕಾರ ಪ್ರತ್ಯೇಕ ಪೊಲೀಸ್ ಘಟಕವೊಂದನ್ನು ಶೀಘ್ರದಲ್ಲಿಯೇ ಸ್ಥಾಪಿಸಲು ಪರಿಶೀಲಿಸುತ್ತಿದೆ.</p>.<p>ಸಮಾಜ ಕಲ್ಯಾಣ ಸಚಿವ ಎನ್. ರಾಚಯ್ಯ ಈ ವಿಷಯವನ್ನು ಸುದ್ದಿಗಾರರಿಗೆ ಪ್ರಕಟಿಸಿ, ಆ ಘಟಕವು ಪೊಲೀಸ್ ಸೂಪರಿಂಟೆಂಡೆಂಟ್ ಒಬ್ಬರನ್ನು ಮುಖ್ಯಾಧಿಕಾರಿಯನ್ನಾಗಿ ಪಡೆಯಲಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>