<h2>ರಾಜ್ಯಕ್ಕೆ ಐ.ಡಿ.ಎ.ನಿಂದ 3 ಕೋಟಿ ಡಾಲರ್ ನೆರವು</h2>.<p><strong>ನವದೆಹಲಿ, ಜೂನ್ 14–</strong> ಕರ್ನಾಟಕದಲ್ಲಿ ಡೈರಿ ಅಭಿವೃದ್ಧಿ ಯೋಜನೆಗೆ ವಿಶ್ವಬ್ಯಾಂಕಿಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಯು 3 ಕೋಟಿ ಡಾಲರ್ ಸಾಲ ನೀಡಿದೆ.</p>.<p>ಈ ಯೋಜನೆಗೆ ತಗಲುವ ಒಟ್ಟು ವೆಚ್ಚ ಸುಮಾರು 48 ಕೋಟಿ (640 ಲಕ್ಷ ಡಾಲರುಗಳು) ರೂಪಾಯಿ. 136 ಲಕ್ಷ ಡಾಲರುಗಳ ವಿದೇಶಿ ವಿನಿಮಯದ ಬಿಡಿ ಭಾಗಗಳೂ ಸೇರಿ ಒಟ್ಟು ವೆಚ್ಚದಲ್ಲಿ <br>ಶೇ 47ರಷ್ಟನ್ನು ಅಂತರರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆ ಸಾಲದ ರೂಪದಲ್ಲಿ ಪೂರೈಕೆ ಮಾಡು ತ್ತಿದೆ. ಉಳಿದದ್ದನ್ನು ಕೇಂದ್ರ ಸರ್ಕಾರ, ಕರ್ನಾಟಕ, ಭಾರತದ ಕೃಷಿ ಹಣಕಾಸು ಕಾರ್ಪೊರೇಷನ್, ಈ ಯೋಜನೆಯಲ್ಲಿ ಭಾಗವಹಿಸುವ ಕೃಷಿಕರು ನೀಡುವರು.</p>.<p>ಈ ಯೋಜನೆ 1981ರ ಹೊತ್ತಿಗೆ ಪೂರ್ಣವಾಗಲಿದ್ದು, ಆ ಹೊತ್ತಿಗೆ ವಾರ್ಷಿಕ ಹಾಲು ಉತ್ಪಾದನೆ 10 ಲಕ್ಷ ಟನ್ಗೆ ಏರಿಕೆ ಆಗುವುದು. ಅಲ್ಲದೆ ಒಂದು ಲಕ್ಷ ಎಳೆಯ ಹಸುಗಳು ದೊರೆಯುವುವು.</p>.<p>ಈ ಯೋಜನೆಯಿಂದ 4.50 ಲಕ್ಷ ಕೃಷಿ ಕುಟುಂಬಗಳಿಗೆ ಅಥವಾ ರಾಜ್ಯದ 25 ಲಕ್ಷ ಮಂದಿಗೆ ಲಾಭವಾಗುವುದು. ಈ ಜನರಲ್ಲಿ ಬಹುತೇಕ ಮಂದಿ ಎರಡು ಹೆಕ್ಟೇರ್ಗೂ ಕಡಿಮೆ ಜಮೀನು ಹೊಂದಿರುವವರು ಅಥವಾ ಭೂರಹಿತರು.</p>.<h2>ಆಯುರ್ವೇದ ವೈದ್ಯರಿಗೆ ‘ಎಮರ್ಜೆನ್ಸಿ ಚಿಕಿತ್ಸೆ’ ತರಪೇತಿಗೆ ವಿರೋಧ</h2>.<p><strong>ಬೆಂಗಳೂರು, ಜೂನ್ 14–</strong> ಶುದ್ಧ ಆಯುರ್ವೇದ ವಿದ್ಯಾರ್ಥಿಗಳಿಗೆ ಅಲೋಪಥಿಕ್ ಆಸ್ಪತ್ರೆಗಳಲ್ಲಿ ‘ಎಮರ್ಜೆನ್ಸಿ’ ಚಿಕಿತ್ಸಾ ತರಪೇತು ನೀಡುವುದನ್ನು ಭಾರತೀಯ ವೈದ್ಯರ ಸಂಘದ ಕರ್ನಾಟಕ ಶಾಖೆ ವಿರೋಧಿಸಿದೆ.</p>.<p>ಸಂಘದ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಎಂ.ಎ. ನರಸಿಂಹಾಚಾರ್ ಅವರು ಹೇಳಿಕೆಯೊಂದನ್ನು ನೀಡಿ, ‘ಆಯುರ್ವೇದ ಪರಂಪರೆಯ ಬಗ್ಗೆ ನಮಗೆ ಹೆಮ್ಮೆ. ಚರಕ ಮತ್ತು ಸುಶ್ರುತರ ಸಮಯದಲ್ಲೂ ಎಮರ್ಜೆನ್ಸಿ ಚಿಕಿತ್ಸೆ ಜಾರಿಯಲ್ಲಿತ್ತು. ಆಯುರ್ವೇದ ಮತ್ತು ಅಲೋಪಥಿಯ ಮಿಶ್ರಣದಿಂದ ರೋಗಿಗೆ ಅಪಾಯವಾಗಬಹುದು’ ಎಂದು ಎಚ್ಚರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2>ರಾಜ್ಯಕ್ಕೆ ಐ.ಡಿ.ಎ.ನಿಂದ 3 ಕೋಟಿ ಡಾಲರ್ ನೆರವು</h2>.<p><strong>ನವದೆಹಲಿ, ಜೂನ್ 14–</strong> ಕರ್ನಾಟಕದಲ್ಲಿ ಡೈರಿ ಅಭಿವೃದ್ಧಿ ಯೋಜನೆಗೆ ವಿಶ್ವಬ್ಯಾಂಕಿಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಯು 3 ಕೋಟಿ ಡಾಲರ್ ಸಾಲ ನೀಡಿದೆ.</p>.<p>ಈ ಯೋಜನೆಗೆ ತಗಲುವ ಒಟ್ಟು ವೆಚ್ಚ ಸುಮಾರು 48 ಕೋಟಿ (640 ಲಕ್ಷ ಡಾಲರುಗಳು) ರೂಪಾಯಿ. 136 ಲಕ್ಷ ಡಾಲರುಗಳ ವಿದೇಶಿ ವಿನಿಮಯದ ಬಿಡಿ ಭಾಗಗಳೂ ಸೇರಿ ಒಟ್ಟು ವೆಚ್ಚದಲ್ಲಿ <br>ಶೇ 47ರಷ್ಟನ್ನು ಅಂತರರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆ ಸಾಲದ ರೂಪದಲ್ಲಿ ಪೂರೈಕೆ ಮಾಡು ತ್ತಿದೆ. ಉಳಿದದ್ದನ್ನು ಕೇಂದ್ರ ಸರ್ಕಾರ, ಕರ್ನಾಟಕ, ಭಾರತದ ಕೃಷಿ ಹಣಕಾಸು ಕಾರ್ಪೊರೇಷನ್, ಈ ಯೋಜನೆಯಲ್ಲಿ ಭಾಗವಹಿಸುವ ಕೃಷಿಕರು ನೀಡುವರು.</p>.<p>ಈ ಯೋಜನೆ 1981ರ ಹೊತ್ತಿಗೆ ಪೂರ್ಣವಾಗಲಿದ್ದು, ಆ ಹೊತ್ತಿಗೆ ವಾರ್ಷಿಕ ಹಾಲು ಉತ್ಪಾದನೆ 10 ಲಕ್ಷ ಟನ್ಗೆ ಏರಿಕೆ ಆಗುವುದು. ಅಲ್ಲದೆ ಒಂದು ಲಕ್ಷ ಎಳೆಯ ಹಸುಗಳು ದೊರೆಯುವುವು.</p>.<p>ಈ ಯೋಜನೆಯಿಂದ 4.50 ಲಕ್ಷ ಕೃಷಿ ಕುಟುಂಬಗಳಿಗೆ ಅಥವಾ ರಾಜ್ಯದ 25 ಲಕ್ಷ ಮಂದಿಗೆ ಲಾಭವಾಗುವುದು. ಈ ಜನರಲ್ಲಿ ಬಹುತೇಕ ಮಂದಿ ಎರಡು ಹೆಕ್ಟೇರ್ಗೂ ಕಡಿಮೆ ಜಮೀನು ಹೊಂದಿರುವವರು ಅಥವಾ ಭೂರಹಿತರು.</p>.<h2>ಆಯುರ್ವೇದ ವೈದ್ಯರಿಗೆ ‘ಎಮರ್ಜೆನ್ಸಿ ಚಿಕಿತ್ಸೆ’ ತರಪೇತಿಗೆ ವಿರೋಧ</h2>.<p><strong>ಬೆಂಗಳೂರು, ಜೂನ್ 14–</strong> ಶುದ್ಧ ಆಯುರ್ವೇದ ವಿದ್ಯಾರ್ಥಿಗಳಿಗೆ ಅಲೋಪಥಿಕ್ ಆಸ್ಪತ್ರೆಗಳಲ್ಲಿ ‘ಎಮರ್ಜೆನ್ಸಿ’ ಚಿಕಿತ್ಸಾ ತರಪೇತು ನೀಡುವುದನ್ನು ಭಾರತೀಯ ವೈದ್ಯರ ಸಂಘದ ಕರ್ನಾಟಕ ಶಾಖೆ ವಿರೋಧಿಸಿದೆ.</p>.<p>ಸಂಘದ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಎಂ.ಎ. ನರಸಿಂಹಾಚಾರ್ ಅವರು ಹೇಳಿಕೆಯೊಂದನ್ನು ನೀಡಿ, ‘ಆಯುರ್ವೇದ ಪರಂಪರೆಯ ಬಗ್ಗೆ ನಮಗೆ ಹೆಮ್ಮೆ. ಚರಕ ಮತ್ತು ಸುಶ್ರುತರ ಸಮಯದಲ್ಲೂ ಎಮರ್ಜೆನ್ಸಿ ಚಿಕಿತ್ಸೆ ಜಾರಿಯಲ್ಲಿತ್ತು. ಆಯುರ್ವೇದ ಮತ್ತು ಅಲೋಪಥಿಯ ಮಿಶ್ರಣದಿಂದ ರೋಗಿಗೆ ಅಪಾಯವಾಗಬಹುದು’ ಎಂದು ಎಚ್ಚರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>