<p><strong>ಪಾಕ್ನಲ್ಲೇ 28ರಂದು ಅಧಿಕಾರಿ ಮಟ್ಟದ ಸಭೆ ನಡೆಸಲು ಸಲಹೆ</strong></p><p><strong>ನವದೆಹಲಿ, ಜು.6–</strong> ಭಾರತ, ಬಾಂಗ್ಲಾದೇಶ ಸಂಯುಕ್ತ ಘೋಷಣೆಯನ್ನು ಆಧರಿಸಿ, ಭಾರತ ಮತ್ತು ಪಾಕಿಸ್ತಾನದ ನಡುವೆ ಅಧಿಕಾರಿ ಮಟ್ಟದ ಚರ್ಚೆ ನಡೆಸುವುದಕ್ಕಾಗಿ ಪಾಕಿಸ್ತಾನವು ಜುಲೈ 28ನೇ ತಾರೀಕನ್ನು ಸಲಹೆ ಮಾಡಿದೆ.</p>.<p>ಭಾರತ ವಿದೇಶಾಂಗ ಸಚಿವ ಸ್ವರಣ್ ಸಿಂಗ್ ಅವರು ಜುಲೈ 3ರಂದು ಬರೆದ ಪತ್ರಕ್ಕೆ ಪಾಕಿಸ್ತಾನ ಕಳುಹಿಸಿದ ಉತ್ತರವು ನೇರ ಟೆಲಿಫೋನ್ ಸಂಪರ್ಕದಲ್ಲಿ (ಹಾಟ್ಲೈನ್) ಗುರುವಾರ ಸಂಜೆ ದೆಹಲಿ ಕೈಸೇರಿತು.</p>.<p>ಕಳೆದ ಬಾರಿ ಸಭೆ ಭಾರತದಲ್ಲಿ ನಡೆದ ಕಾರಣ ಈ ಬಾರಿಯ ಸಮಾವೇಶ ಪಾಕಿಸ್ತಾನದಲ್ಲೇ ನಡೆಯಬೇಕೆಂದು ಪಾಕಿಸ್ತಾನ ಪತ್ರದಲ್ಲಿ ಒತ್ತಾಯಪಡಿಸಿದೆ ಎಂದು ಇಲ್ಲಿನ ಅಧಿಕೃತ ಮೂಲಗಳು ತಿಳಿಸಿವೆ.</p>.<p>ಪಾಕಿಸ್ತಾನದ ಪತ್ರವನ್ನು ಈಗ ಪರಿಶೀಲಿಸುತ್ತಿರುವ ಭಾರತ ಸರ್ಕಾರ ಶೀಘ್ರವೇ ನಿರ್ಧಾರಕ್ಕೆ ಬರುತ್ತದೆ.</p>.<p><strong>ಕಾಳಿನದಿ– ದೂದ್ಸಾಗರ ಯೋಜನೆ ಸೇರಿಸಲು ರಾಜ್ಯದ ಜತೆ ಗೋವಾ ಸಂಧಾನ</strong></p><p><strong>ಮದ್ರಾಸ್, ಜುಲೈ 6</strong>– ದೂದ್ಸಾಗರದಲ್ಲಿ ತಮ್ಮ ಸರ್ಕಾರ ಪ್ರಾರಂಭಿಸಲಿರುವ ಮೊದಲ ವಿದ್ಯುತ್ ಯೋಜನೆಯನ್ನು ಮೈಸೂರಿನೊಡನೆ ಕೂಡಿಕೊಂಡು ನಿರ್ವಹಿಸುವುದಕ್ಕಾಗಿ ಆ ರಾಜ್ಯದೊಡನೆ ಸಂಧಾನ ನಡೆಸುತ್ತಿರುವುದಾಗಿ ಗೋವಾ ನೀರಾವರಿ ಮತ್ತು ವಿದ್ಯುತ್ ಸಚಿವ ಉಸ್ಗಾಂವ್ಕರ್ ಅವರು ಇಂದು ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.</p>.<p>ಈ ಸಂಬಂಧ ತಾವು ಮೈಸೂರು ಲೋಕೋಪಯೋಗಿ ಸಚಿವ ಎಚ್.ಎಂ. ಚನ್ನಬಸಪ್ಪ ಹಾಗೂ ಕೇಂದ್ರ ನೀರಾವರಿ ಮತ್ತು ವಿದ್ಯುತ್ ಸಚಿವ ಡಾ. ಕೆ.ಎಲ್. ರಾವ್ ಅವರೊಡನೆ ಮಾತುಕತೆ ನಡೆಸಿರುವುದಾಗಿ ಅವರು ಹೇಳಿದರು.</p>.<p>ಮೈಸೂರಿನ ಕಾಳಿನದಿ ಯೋಜನೆಗೆ ಏಳು ಕಿಲೋಮೀಟರ್ ಮಾತ್ರ ದೂರದಲ್ಲಿರುವ 30 ಮೆಗಾವಾಟ್ಗಳ ದೂದ್ಸಾಗರ ಯೋಜನೆಯನ್ನು ಸೇರಿಸಲು ಸಾಧ್ಯವೆಂದೂ ಇದರಿಂದ ವೆಚ್ಚ ಕಡಿಮೆಯಾಗುವುದೆಂದೂ ಅವರು ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾಕ್ನಲ್ಲೇ 28ರಂದು ಅಧಿಕಾರಿ ಮಟ್ಟದ ಸಭೆ ನಡೆಸಲು ಸಲಹೆ</strong></p><p><strong>ನವದೆಹಲಿ, ಜು.6–</strong> ಭಾರತ, ಬಾಂಗ್ಲಾದೇಶ ಸಂಯುಕ್ತ ಘೋಷಣೆಯನ್ನು ಆಧರಿಸಿ, ಭಾರತ ಮತ್ತು ಪಾಕಿಸ್ತಾನದ ನಡುವೆ ಅಧಿಕಾರಿ ಮಟ್ಟದ ಚರ್ಚೆ ನಡೆಸುವುದಕ್ಕಾಗಿ ಪಾಕಿಸ್ತಾನವು ಜುಲೈ 28ನೇ ತಾರೀಕನ್ನು ಸಲಹೆ ಮಾಡಿದೆ.</p>.<p>ಭಾರತ ವಿದೇಶಾಂಗ ಸಚಿವ ಸ್ವರಣ್ ಸಿಂಗ್ ಅವರು ಜುಲೈ 3ರಂದು ಬರೆದ ಪತ್ರಕ್ಕೆ ಪಾಕಿಸ್ತಾನ ಕಳುಹಿಸಿದ ಉತ್ತರವು ನೇರ ಟೆಲಿಫೋನ್ ಸಂಪರ್ಕದಲ್ಲಿ (ಹಾಟ್ಲೈನ್) ಗುರುವಾರ ಸಂಜೆ ದೆಹಲಿ ಕೈಸೇರಿತು.</p>.<p>ಕಳೆದ ಬಾರಿ ಸಭೆ ಭಾರತದಲ್ಲಿ ನಡೆದ ಕಾರಣ ಈ ಬಾರಿಯ ಸಮಾವೇಶ ಪಾಕಿಸ್ತಾನದಲ್ಲೇ ನಡೆಯಬೇಕೆಂದು ಪಾಕಿಸ್ತಾನ ಪತ್ರದಲ್ಲಿ ಒತ್ತಾಯಪಡಿಸಿದೆ ಎಂದು ಇಲ್ಲಿನ ಅಧಿಕೃತ ಮೂಲಗಳು ತಿಳಿಸಿವೆ.</p>.<p>ಪಾಕಿಸ್ತಾನದ ಪತ್ರವನ್ನು ಈಗ ಪರಿಶೀಲಿಸುತ್ತಿರುವ ಭಾರತ ಸರ್ಕಾರ ಶೀಘ್ರವೇ ನಿರ್ಧಾರಕ್ಕೆ ಬರುತ್ತದೆ.</p>.<p><strong>ಕಾಳಿನದಿ– ದೂದ್ಸಾಗರ ಯೋಜನೆ ಸೇರಿಸಲು ರಾಜ್ಯದ ಜತೆ ಗೋವಾ ಸಂಧಾನ</strong></p><p><strong>ಮದ್ರಾಸ್, ಜುಲೈ 6</strong>– ದೂದ್ಸಾಗರದಲ್ಲಿ ತಮ್ಮ ಸರ್ಕಾರ ಪ್ರಾರಂಭಿಸಲಿರುವ ಮೊದಲ ವಿದ್ಯುತ್ ಯೋಜನೆಯನ್ನು ಮೈಸೂರಿನೊಡನೆ ಕೂಡಿಕೊಂಡು ನಿರ್ವಹಿಸುವುದಕ್ಕಾಗಿ ಆ ರಾಜ್ಯದೊಡನೆ ಸಂಧಾನ ನಡೆಸುತ್ತಿರುವುದಾಗಿ ಗೋವಾ ನೀರಾವರಿ ಮತ್ತು ವಿದ್ಯುತ್ ಸಚಿವ ಉಸ್ಗಾಂವ್ಕರ್ ಅವರು ಇಂದು ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.</p>.<p>ಈ ಸಂಬಂಧ ತಾವು ಮೈಸೂರು ಲೋಕೋಪಯೋಗಿ ಸಚಿವ ಎಚ್.ಎಂ. ಚನ್ನಬಸಪ್ಪ ಹಾಗೂ ಕೇಂದ್ರ ನೀರಾವರಿ ಮತ್ತು ವಿದ್ಯುತ್ ಸಚಿವ ಡಾ. ಕೆ.ಎಲ್. ರಾವ್ ಅವರೊಡನೆ ಮಾತುಕತೆ ನಡೆಸಿರುವುದಾಗಿ ಅವರು ಹೇಳಿದರು.</p>.<p>ಮೈಸೂರಿನ ಕಾಳಿನದಿ ಯೋಜನೆಗೆ ಏಳು ಕಿಲೋಮೀಟರ್ ಮಾತ್ರ ದೂರದಲ್ಲಿರುವ 30 ಮೆಗಾವಾಟ್ಗಳ ದೂದ್ಸಾಗರ ಯೋಜನೆಯನ್ನು ಸೇರಿಸಲು ಸಾಧ್ಯವೆಂದೂ ಇದರಿಂದ ವೆಚ್ಚ ಕಡಿಮೆಯಾಗುವುದೆಂದೂ ಅವರು ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>