<p><strong>ಬೇಂದ್ರೆಗೆ ಜ್ಞಾನಪೀಠ ಪ್ರಶಸ್ತಿ</strong></p><p><strong>ನವದೆಹಲಿ, ಏ. 7–</strong> ಕನ್ನಡದ ಹಿರಿಯ ಕವಿ ಡಾ. ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಮತ್ತು ಒರಿಯಾ ಕಾದಂಬರಿಕಾರ ಶ್ರೀ ಗೋಪಿನಾಥ ಮಹಂತಿ ಅವರಿಗೆ 1973ರ ಸಾಲಿನ ಜ್ಞಾನಪೀಠ ಪ್ರಶಸ್ತಿಯನ್ನು ನೀಡಲಾಗಿದೆ.</p>.<p>78 ವರ್ಷ ವಯಸ್ಸಿನ ಡಾ. ಬೇಂದ್ರೆ ಅವರ ‘ನಾಕು ತಂತಿ’ (44 ಕವನಗಳ ಸಂಕಲನ) ಮತ್ತು 60 ವರ್ಷ ವಯಸ್ಸಿನ ಮಹಂತಿ ಅವರ ‘ಮಾಟಿ ಮಟಲ್’ ಕೃತಿಗಳಿಗೆ ನೀಡಲಾಗಿರುವ ಈ ಪ್ರಶಸ್ತಿಯನ್ನು ಇಬ್ಬರಿಗೂ ಹಂಚಲಾಗಿದೆ. ಹೀಗೆ ಈ ಪ್ರಶಸ್ತಿ ಹಂಚಿಕೆ ಆಗುತ್ತಿರುವುದು ಇದು ಎರಡನೇ ಬಾರಿ.</p>.<p><strong>ಪುಣೆಯಲ್ಲಿ ಹಲ್ಲೆ, ಇರಿತ, ಗೋಲಿಬಾರ್: ಇಬ್ಬರಿಗೆ ಗಾಯ</strong></p><p><strong>ಪುಣೆ, ಏ. 7–</strong> ಪುಣೆ ನಗರದ ಭವಾನಿಪೇಟೆ ಪ್ರದೇಶದಲ್ಲಿ ಇಂದು ರಾತ್ರಿ ಉದ್ರಿಕ್ತ ಜನರ ಗುಂಪು ಚದುರಿಸಲು ಪೊಲೀಸರು ಒಂದು ಸುತ್ತು ಗೋಲಿಬಾರು ನಡೆಸಿದರು.</p>.<p>ಹೋಟೆಲ್ ಒಂದರ ಮೇಲೆ ಹಲ್ಲೆ ಮಾಡಿದ ಉದ್ರಿಕ್ತ ಜನರು ಆಸ್ತಿಪಾಸ್ತಿ ನಷ್ಟವನ್ನುಂಟು ಮಾಡಿದರೆಂದು ಪೊಲೀಸರು ತಿಳಿಸಿದರು.</p>.<p>ಗೋಲಿಬಾರಿನಲ್ಲಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೇಂದ್ರೆಗೆ ಜ್ಞಾನಪೀಠ ಪ್ರಶಸ್ತಿ</strong></p><p><strong>ನವದೆಹಲಿ, ಏ. 7–</strong> ಕನ್ನಡದ ಹಿರಿಯ ಕವಿ ಡಾ. ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಮತ್ತು ಒರಿಯಾ ಕಾದಂಬರಿಕಾರ ಶ್ರೀ ಗೋಪಿನಾಥ ಮಹಂತಿ ಅವರಿಗೆ 1973ರ ಸಾಲಿನ ಜ್ಞಾನಪೀಠ ಪ್ರಶಸ್ತಿಯನ್ನು ನೀಡಲಾಗಿದೆ.</p>.<p>78 ವರ್ಷ ವಯಸ್ಸಿನ ಡಾ. ಬೇಂದ್ರೆ ಅವರ ‘ನಾಕು ತಂತಿ’ (44 ಕವನಗಳ ಸಂಕಲನ) ಮತ್ತು 60 ವರ್ಷ ವಯಸ್ಸಿನ ಮಹಂತಿ ಅವರ ‘ಮಾಟಿ ಮಟಲ್’ ಕೃತಿಗಳಿಗೆ ನೀಡಲಾಗಿರುವ ಈ ಪ್ರಶಸ್ತಿಯನ್ನು ಇಬ್ಬರಿಗೂ ಹಂಚಲಾಗಿದೆ. ಹೀಗೆ ಈ ಪ್ರಶಸ್ತಿ ಹಂಚಿಕೆ ಆಗುತ್ತಿರುವುದು ಇದು ಎರಡನೇ ಬಾರಿ.</p>.<p><strong>ಪುಣೆಯಲ್ಲಿ ಹಲ್ಲೆ, ಇರಿತ, ಗೋಲಿಬಾರ್: ಇಬ್ಬರಿಗೆ ಗಾಯ</strong></p><p><strong>ಪುಣೆ, ಏ. 7–</strong> ಪುಣೆ ನಗರದ ಭವಾನಿಪೇಟೆ ಪ್ರದೇಶದಲ್ಲಿ ಇಂದು ರಾತ್ರಿ ಉದ್ರಿಕ್ತ ಜನರ ಗುಂಪು ಚದುರಿಸಲು ಪೊಲೀಸರು ಒಂದು ಸುತ್ತು ಗೋಲಿಬಾರು ನಡೆಸಿದರು.</p>.<p>ಹೋಟೆಲ್ ಒಂದರ ಮೇಲೆ ಹಲ್ಲೆ ಮಾಡಿದ ಉದ್ರಿಕ್ತ ಜನರು ಆಸ್ತಿಪಾಸ್ತಿ ನಷ್ಟವನ್ನುಂಟು ಮಾಡಿದರೆಂದು ಪೊಲೀಸರು ತಿಳಿಸಿದರು.</p>.<p>ಗೋಲಿಬಾರಿನಲ್ಲಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>