<p><strong>ಬೆಂಗಳೂರು, ಮಾರ್ಚ್ 10–</strong> ರಾಜ್ಯದಲ್ಲಿನ ವಿಧಾನಮಂಡಲ ನಾಯಕತ್ವದಲ್ಲಿ ಬದಲಾವಣೆಯೇನೂ ಇಲ್ಲವೆಂದು ಕಾಂಗ್ರೆಸ್ ಅಧ್ಯಕ್ಷ ದೇವಕಾಂತ ಬರೂವ ಅವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.</p><p>ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಆ ಬಗ್ಗೆ ಪತ್ರಿಕೆಗಳಲ್ಲಿ ಬಂದ ವರದಿಗಳನ್ನು ತಾವು ಓದಿಲ್ಲವೆಂದು ಹೇಳಿ, ಮೊದಲು ಆ ಸಂಬಂಧದಲ್ಲಿ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ವ್ಯಕ್ತಪಡಿಸಲು ನಿರಾಕರಿಸಿದರು.</p><p>ಪ್ರಶ್ನೆ: ಯಾರಾದರೂ ಆ ಬಗ್ಗೆ ಈ ಹಿಂದೆ ಚರ್ಚಿಸಿದರೇ?</p><p>ಉತ್ತರ: ನನಗೆ ನೆನಪಿಲ್ಲ.</p><p>ದೇವರಾಜ ಅರಸು ಮಂತ್ರಿಮಂಡಲದ ಬಗ್ಗೆ ತಮಗೇನೂ ಖಚಿತವಾದ ಆಪಾದನೆಗಳು ಬಂದಿಲ್ಲವೆಂದು ಬರೂವ ಅವರು ಹೇಳಿದರು.</p><p>ವಿವಿಧ ರಾಜ್ಯಗಳಿಂದ ಬರುವ ದೂರುಗಳನ್ನು ಪರಿಶೀಲಿಸಲು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಒಂದು ಪರಿಶೀಲನಾ ಸಮಿತಿಯನ್ನು ಹೊಂದಿದೆ. ಅದರಲ್ಲಿ ಹಿರಿಯ ಕಾಂಗ್ರೆಸ್ಸಿಗರಾದ ಸರ್ದಾರ್ ಸ್ವರ್ಣಸಿಂಗ್, ಸಿ. ಸುಬ್ರಹ್ಮಣ್ಯಂ ಮತ್ತು ಗೋಖಲೆ ಅವರು ಸದಸ್ಯರಾಗಿದ್ದಾರೆ. ಖಚಿತವಾದ ಆಪಾದನೆಗಳಿಂದ ಕೂಡಿದ ದೂರುಗಳನ್ನು ಆ ಸಮಿತಿಗೆ ಈಗಾಗಲೇ ಒಪ್ಪಿಸಲಾಗಿದೆಯೆಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು, ಮಾರ್ಚ್ 10–</strong> ರಾಜ್ಯದಲ್ಲಿನ ವಿಧಾನಮಂಡಲ ನಾಯಕತ್ವದಲ್ಲಿ ಬದಲಾವಣೆಯೇನೂ ಇಲ್ಲವೆಂದು ಕಾಂಗ್ರೆಸ್ ಅಧ್ಯಕ್ಷ ದೇವಕಾಂತ ಬರೂವ ಅವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.</p><p>ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಆ ಬಗ್ಗೆ ಪತ್ರಿಕೆಗಳಲ್ಲಿ ಬಂದ ವರದಿಗಳನ್ನು ತಾವು ಓದಿಲ್ಲವೆಂದು ಹೇಳಿ, ಮೊದಲು ಆ ಸಂಬಂಧದಲ್ಲಿ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ವ್ಯಕ್ತಪಡಿಸಲು ನಿರಾಕರಿಸಿದರು.</p><p>ಪ್ರಶ್ನೆ: ಯಾರಾದರೂ ಆ ಬಗ್ಗೆ ಈ ಹಿಂದೆ ಚರ್ಚಿಸಿದರೇ?</p><p>ಉತ್ತರ: ನನಗೆ ನೆನಪಿಲ್ಲ.</p><p>ದೇವರಾಜ ಅರಸು ಮಂತ್ರಿಮಂಡಲದ ಬಗ್ಗೆ ತಮಗೇನೂ ಖಚಿತವಾದ ಆಪಾದನೆಗಳು ಬಂದಿಲ್ಲವೆಂದು ಬರೂವ ಅವರು ಹೇಳಿದರು.</p><p>ವಿವಿಧ ರಾಜ್ಯಗಳಿಂದ ಬರುವ ದೂರುಗಳನ್ನು ಪರಿಶೀಲಿಸಲು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಒಂದು ಪರಿಶೀಲನಾ ಸಮಿತಿಯನ್ನು ಹೊಂದಿದೆ. ಅದರಲ್ಲಿ ಹಿರಿಯ ಕಾಂಗ್ರೆಸ್ಸಿಗರಾದ ಸರ್ದಾರ್ ಸ್ವರ್ಣಸಿಂಗ್, ಸಿ. ಸುಬ್ರಹ್ಮಣ್ಯಂ ಮತ್ತು ಗೋಖಲೆ ಅವರು ಸದಸ್ಯರಾಗಿದ್ದಾರೆ. ಖಚಿತವಾದ ಆಪಾದನೆಗಳಿಂದ ಕೂಡಿದ ದೂರುಗಳನ್ನು ಆ ಸಮಿತಿಗೆ ಈಗಾಗಲೇ ಒಪ್ಪಿಸಲಾಗಿದೆಯೆಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>