<p><strong>ರಿಚರ್ಡ್ ನಿಕ್ಸನ್ ಮತ್ತೆ ಶ್ವೇತಭವನಕ್ಕೆ: ಪ್ರಚಂಡ ಬಹುಮತ</strong></p>.<p><strong>ವಾಷಿಂಗ್ಟನ್, ನ. 8–</strong> ಅಧ್ಯಕ್ಷ ರಿಚರ್ಡ್ ಎಂ. ನಿಕ್ಸನ್ ಅವರು ಪ್ರಚಂಡ ಬಹುಮತ ದಿಂದ ನಿನ್ನೆ ರಾತ್ರಿ ಅಮೆರಿಕದ ಅಧ್ಯಕ್ಷ ಗದ್ದುಗೆಗೆ ಪುನರಾಯ್ಕೆಯಾಗಿ ಶ್ವೇತಭವನದಲ್ಲಿ ಮತ್ತೆ ನಾಲ್ಕು ವರ್ಷಗಳ ಅಧಿಕಾರವನ್ನು ಸ್ಥಿರಪಡಿಸಿಕೊಂಡರು.</p>.<p>ಅವರ ಪ್ರತಿಸ್ಪರ್ಧಿ ಮೆಕ್ಗವರ್ನ್ 1864ರಿಂದೀಚೆಗೆ ಯಾವುದೇ ಡೆಮಾಕ್ರಟಿಕ್ ಅಭ್ಯರ್ಥಿ ಕಾಣದ ಭಾರೀ ಪರಭಾವವನ್ನು ಕಂಡರು.</p>.<p>ಆದರೆ, ಡೆಮಾಕ್ರಟಿಕರ ಕೈಹಿಡಿತದಿಂದ ಕಾಂಗ್ರೆಸ್ ಅನ್ನು ತಪ್ಪಿಸಲು ರಿಪಬ್ಲಿಕನ್ನರು ವಿಫಲರಾಗಿದ್ದಾರೆ. ನಿಕ್ಸನ್ನರ ಚುನಾವಣೆ ಅವರಿಗೆ ವೈಯಕ್ತಿಕ ವಿಜಯವಾಗಿದ್ದರೂ ಕೊನೆಯ ಪಕ್ಷ ಎರಡು ವರ್ಷ ಅವರು ವಿಭಕ್ತರಾಗಿರುವ ಸರ್ಕಾರವನ್ನು ಎದುರಿಸಬೇಕಾಗಿದೆ. ಕಾಂಗ್ರೆಸ್ ಮೇಲೆ ಡೆಮಾಕ್ರಟಿಕ್ ಬಿಗಿಮುಷ್ಟಿ ಸಡಿಲವಾಗದಿರುವುದೇ ಇದಕ್ಕೆ ಕಾರಣ.</p>.<p><strong>ಡಿಎಂಕೆ ವಿರಸ ಕೇವಲ ಆವುಟ: ಸಂಪುಟದ ಅವಸಾನ ಖಚಿತ</strong></p>.<p><strong>ವೆಲ್ಲೂರು, ನ. 8–</strong> ಡಿಎಂಕೆ ಸರ್ಕಾರದ ಗತಿ ಬಹುಮಟ್ಟಿಗೆ ಕುಸಿಯುವ ಘಟ್ಟ ಮುಟ್ಟಿದೆ ಯೆಂದು ಸಂಸ್ಥಾ ಕಾಂಗ್ರೆಸ್ ನಾಯಕ ಕೆ. ಕಾಮರಾಜ್ ಅವರು ಇಂದು ಹೇಳಿ, ಅದು ಇನ್ನು ಉಳಿಯಲಾರದೆಂದರು.</p>.<p>ತಿರುವಾಹಿತಿಪುರಂನಲ್ಲಿ ಕಾಮರಾಜ್ ಅವರು ನಿನ್ನೆ ಒಂದು ಬಹಿರಂಗ ಸಭೆಯಲ್ಲಿ ಮಾತನಾಡಿ, ಡಿಎಂಕೆ ಸರ್ಕಾರ ಉಳಿಯದೆಂಬುದನ್ನು ಗ್ರಹಿಸಿ ಕೆಲವರು ಆ ಪಕ್ಷದಿಂದ ಹೊರಬರುತ್ತಿದ್ದಾರೆಂದೂ, ಇಷ್ಟು ದಿನಗಳು ಇಂತಹವರೇ ಭ್ರಷ್ಟಾಚಾರ ಮತ್ತು ದುರಾಚಾರಗಳನ್ನು ಪೋಷಿಸುತ್ತಿದ್ದರೆಂಬುದನ್ನು ಜನರು ಅರಿಯಬೇಕೆಂದೂ, ಅದರ ಎರಡು ಗುಂಪುಗಳು ಕೇವಲ ‘ಆವುಟ ಹೂಡಿ ನಾಟಕ ಆಡುತ್ತಿವೆ’ ಎಂದೂ ಅವರು ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಿಚರ್ಡ್ ನಿಕ್ಸನ್ ಮತ್ತೆ ಶ್ವೇತಭವನಕ್ಕೆ: ಪ್ರಚಂಡ ಬಹುಮತ</strong></p>.<p><strong>ವಾಷಿಂಗ್ಟನ್, ನ. 8–</strong> ಅಧ್ಯಕ್ಷ ರಿಚರ್ಡ್ ಎಂ. ನಿಕ್ಸನ್ ಅವರು ಪ್ರಚಂಡ ಬಹುಮತ ದಿಂದ ನಿನ್ನೆ ರಾತ್ರಿ ಅಮೆರಿಕದ ಅಧ್ಯಕ್ಷ ಗದ್ದುಗೆಗೆ ಪುನರಾಯ್ಕೆಯಾಗಿ ಶ್ವೇತಭವನದಲ್ಲಿ ಮತ್ತೆ ನಾಲ್ಕು ವರ್ಷಗಳ ಅಧಿಕಾರವನ್ನು ಸ್ಥಿರಪಡಿಸಿಕೊಂಡರು.</p>.<p>ಅವರ ಪ್ರತಿಸ್ಪರ್ಧಿ ಮೆಕ್ಗವರ್ನ್ 1864ರಿಂದೀಚೆಗೆ ಯಾವುದೇ ಡೆಮಾಕ್ರಟಿಕ್ ಅಭ್ಯರ್ಥಿ ಕಾಣದ ಭಾರೀ ಪರಭಾವವನ್ನು ಕಂಡರು.</p>.<p>ಆದರೆ, ಡೆಮಾಕ್ರಟಿಕರ ಕೈಹಿಡಿತದಿಂದ ಕಾಂಗ್ರೆಸ್ ಅನ್ನು ತಪ್ಪಿಸಲು ರಿಪಬ್ಲಿಕನ್ನರು ವಿಫಲರಾಗಿದ್ದಾರೆ. ನಿಕ್ಸನ್ನರ ಚುನಾವಣೆ ಅವರಿಗೆ ವೈಯಕ್ತಿಕ ವಿಜಯವಾಗಿದ್ದರೂ ಕೊನೆಯ ಪಕ್ಷ ಎರಡು ವರ್ಷ ಅವರು ವಿಭಕ್ತರಾಗಿರುವ ಸರ್ಕಾರವನ್ನು ಎದುರಿಸಬೇಕಾಗಿದೆ. ಕಾಂಗ್ರೆಸ್ ಮೇಲೆ ಡೆಮಾಕ್ರಟಿಕ್ ಬಿಗಿಮುಷ್ಟಿ ಸಡಿಲವಾಗದಿರುವುದೇ ಇದಕ್ಕೆ ಕಾರಣ.</p>.<p><strong>ಡಿಎಂಕೆ ವಿರಸ ಕೇವಲ ಆವುಟ: ಸಂಪುಟದ ಅವಸಾನ ಖಚಿತ</strong></p>.<p><strong>ವೆಲ್ಲೂರು, ನ. 8–</strong> ಡಿಎಂಕೆ ಸರ್ಕಾರದ ಗತಿ ಬಹುಮಟ್ಟಿಗೆ ಕುಸಿಯುವ ಘಟ್ಟ ಮುಟ್ಟಿದೆ ಯೆಂದು ಸಂಸ್ಥಾ ಕಾಂಗ್ರೆಸ್ ನಾಯಕ ಕೆ. ಕಾಮರಾಜ್ ಅವರು ಇಂದು ಹೇಳಿ, ಅದು ಇನ್ನು ಉಳಿಯಲಾರದೆಂದರು.</p>.<p>ತಿರುವಾಹಿತಿಪುರಂನಲ್ಲಿ ಕಾಮರಾಜ್ ಅವರು ನಿನ್ನೆ ಒಂದು ಬಹಿರಂಗ ಸಭೆಯಲ್ಲಿ ಮಾತನಾಡಿ, ಡಿಎಂಕೆ ಸರ್ಕಾರ ಉಳಿಯದೆಂಬುದನ್ನು ಗ್ರಹಿಸಿ ಕೆಲವರು ಆ ಪಕ್ಷದಿಂದ ಹೊರಬರುತ್ತಿದ್ದಾರೆಂದೂ, ಇಷ್ಟು ದಿನಗಳು ಇಂತಹವರೇ ಭ್ರಷ್ಟಾಚಾರ ಮತ್ತು ದುರಾಚಾರಗಳನ್ನು ಪೋಷಿಸುತ್ತಿದ್ದರೆಂಬುದನ್ನು ಜನರು ಅರಿಯಬೇಕೆಂದೂ, ಅದರ ಎರಡು ಗುಂಪುಗಳು ಕೇವಲ ‘ಆವುಟ ಹೂಡಿ ನಾಟಕ ಆಡುತ್ತಿವೆ’ ಎಂದೂ ಅವರು ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>