ಪ್ರಧಾನಿ ಜತೆ ಸಿ.ಎಸ್. ಚರ್ಚೆ
ಮದ್ರಾಸ್, ಜುಲೈ 10– ಕಾವೇರಿ ಜಲವಿವಾದವನ್ನು ಪಂಚಾಯ್ತಿಗೆ ಒಪ್ಪಿಸುವುದನ್ನು ಮೈಸೂರಿನಲ್ಲಿ ಜನಪ್ರಿಯ ಸರ್ಕಾರ ರಚನೆಯಾಗುವವರೆಗೆ ಮುಂದಕ್ಕೆ ಹಾಕಬೇಕಾದರೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಹೇಮಾವತಿ ಮತ್ತಿತರ ಅಣೆಕಟ್ಟುಗಳ ನಿರ್ಮಾಣ ಕಾರ್ಯವನ್ನು ಕೂಡಲೇ ನಿಲ್ಲಿಸುವಂತೆ ಮೈಸೂರಿಗೆ ಸೂಚಿಸಬೇಕು ಎಂಬ ತಮಿಳುನಾಡು ನಿಲುವಿನ ಬಗ್ಗೆ ಪ್ರಧಾನಿ ಜತೆ ಚರ್ಚಿಸಲು ಕೇಂದ್ರ ಯೋಜನಾ ಸಚಿವ ಶ್ರೀ ಸಿ. ಸುಬ್ರಹ್ಮಣ್ಯಂ ಅಂಗೀಕರಿಸಿದ್ದಾರೆ.