<p><strong>ರಾಜರ ಮಾನ್ಯತೆ ರದ್ದು ಆಜ್ಞೆ ರಾಜ್ಯಾಂಗದ ವಿರುದ್ಧ: ಸುಪ್ರೀಂ ಕೋರ್ಟ್<br />ನವದೆಹಲಿ, ಡಿ. 15– </strong>ರಾಜಧನ ಮತ್ತು ಮಾಜಿ ಅರಸರ ವಿಶೇಷ ಹಕ್ಕು ಹಾಗೂ ಸೌಲಭ್ಯಗಳನ್ನು ಕಸಿದುಕೊಂಡಿದ್ದ ರಾಷ್ಟ್ರಪತಿ ಆಜ್ಞೆಯನ್ನು ಸುಪ್ರೀಂ ಕೋರ್ಟ್ ಇಂದು ರದ್ದುಗೊಳಿಸಿತು.</p>.<p>ರಾಜರುಗಳಿಗೆ ಮತ್ತೆ ರಾಜಧನ ಸಂದಾಯ; ಹಿಂದೆ ಅವರಿಗಿದ್ದ ಎಲ್ಲ ವಿಶೇಷ ಹಕ್ಕು ಮತ್ತು ಸೌಲಭ್ಯಗಳು ಮತ್ತೆ ಅವರಿಗೆ– ಇದು ಸುಪ್ರೀಂ ಕೋರ್ಟ್ ತೀರ್ಪಿನ ನೇರ ಪರಿಣಾಮ.</p>.<p>ರಾಜರಿಗೆ ನೀಡಿದ್ದ ಮಾನ್ಯತೆಯನ್ನು ರದ್ದುಗೊಳಿಸಿ ಸೆಪ್ಟೆಂಬರ್ 7ರಂದು ಹೊರಡಿಸಿದ ರಾಷ್ಟ್ರಪತಿ ಆಜ್ಞೆಯು ‘ಅಕ್ರಮ ಆದುದರಿಂದ ಆ ಆಜ್ಞೆಯು ಇಂದಿನಿಂದ ನಿಷ್ಕ್ರಿಯವಾದುದು’ ಎಂದು ಸುಪ್ರೀಂ ಕೋರ್ಟ್ ಬಹುಮತದ ತೀರ್ಪಿನಲ್ಲಿ ತಿಳಿಸಿತು.</p>.<p><strong>ರಾಜಧನ ರದ್ದತಿಗೆ ಸರ್ಕಾರ ಬದ್ಧ: ಪ್ರಧಾನಿ ಭರವಸೆ<br />ನವದೆಹಲಿ, ಡಿ, 15–</strong> ಸೂಕ್ತ ಸಂವಿಧಾನಾತ್ಮಕ ವಿಧಾನಗಳ ಮೂಲಕ ರಾಜಧನ ರದ್ದು ಮಾಡುವ ನೀತಿಗೆ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ಇಂದಿರಾ ಗಾಂಧಿ ಲೋಕಸಭೆಗೆ ಇಂದು ಆಶ್ವಾಸನೆ ನೀಡಿದರು.</p>.<p>ರಾಜರ ಮಾನ್ಯತೆ ರದ್ದು ಮಾಡಿದ್ದ ರಾಷ್ಟ್ರಪತಿ ಆಜ್ಞೆ ವಿರುದ್ಧ ಮಾಜಿ ರಾಜರ ಅರ್ಜಿಯ ಮೇಲೆ ಸುಪ್ರೀಂ ಕೋರ್ಟ್ ಇತ್ತ ತೀರ್ಪಿನ ಬಗ್ಗೆ ಒಂದು ಗಂಟೆ ಕಾಲ ಸಭೆಯಲ್ಲಿ ಉದ್ರಿಕ್ತ ಚರ್ಚೆ ನಡೆದ ನಂತರ ಪ್ರಧಾನಿ ಈ ಹೇಳಿಕೆಯಿತ್ತರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜರ ಮಾನ್ಯತೆ ರದ್ದು ಆಜ್ಞೆ ರಾಜ್ಯಾಂಗದ ವಿರುದ್ಧ: ಸುಪ್ರೀಂ ಕೋರ್ಟ್<br />ನವದೆಹಲಿ, ಡಿ. 15– </strong>ರಾಜಧನ ಮತ್ತು ಮಾಜಿ ಅರಸರ ವಿಶೇಷ ಹಕ್ಕು ಹಾಗೂ ಸೌಲಭ್ಯಗಳನ್ನು ಕಸಿದುಕೊಂಡಿದ್ದ ರಾಷ್ಟ್ರಪತಿ ಆಜ್ಞೆಯನ್ನು ಸುಪ್ರೀಂ ಕೋರ್ಟ್ ಇಂದು ರದ್ದುಗೊಳಿಸಿತು.</p>.<p>ರಾಜರುಗಳಿಗೆ ಮತ್ತೆ ರಾಜಧನ ಸಂದಾಯ; ಹಿಂದೆ ಅವರಿಗಿದ್ದ ಎಲ್ಲ ವಿಶೇಷ ಹಕ್ಕು ಮತ್ತು ಸೌಲಭ್ಯಗಳು ಮತ್ತೆ ಅವರಿಗೆ– ಇದು ಸುಪ್ರೀಂ ಕೋರ್ಟ್ ತೀರ್ಪಿನ ನೇರ ಪರಿಣಾಮ.</p>.<p>ರಾಜರಿಗೆ ನೀಡಿದ್ದ ಮಾನ್ಯತೆಯನ್ನು ರದ್ದುಗೊಳಿಸಿ ಸೆಪ್ಟೆಂಬರ್ 7ರಂದು ಹೊರಡಿಸಿದ ರಾಷ್ಟ್ರಪತಿ ಆಜ್ಞೆಯು ‘ಅಕ್ರಮ ಆದುದರಿಂದ ಆ ಆಜ್ಞೆಯು ಇಂದಿನಿಂದ ನಿಷ್ಕ್ರಿಯವಾದುದು’ ಎಂದು ಸುಪ್ರೀಂ ಕೋರ್ಟ್ ಬಹುಮತದ ತೀರ್ಪಿನಲ್ಲಿ ತಿಳಿಸಿತು.</p>.<p><strong>ರಾಜಧನ ರದ್ದತಿಗೆ ಸರ್ಕಾರ ಬದ್ಧ: ಪ್ರಧಾನಿ ಭರವಸೆ<br />ನವದೆಹಲಿ, ಡಿ, 15–</strong> ಸೂಕ್ತ ಸಂವಿಧಾನಾತ್ಮಕ ವಿಧಾನಗಳ ಮೂಲಕ ರಾಜಧನ ರದ್ದು ಮಾಡುವ ನೀತಿಗೆ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ಇಂದಿರಾ ಗಾಂಧಿ ಲೋಕಸಭೆಗೆ ಇಂದು ಆಶ್ವಾಸನೆ ನೀಡಿದರು.</p>.<p>ರಾಜರ ಮಾನ್ಯತೆ ರದ್ದು ಮಾಡಿದ್ದ ರಾಷ್ಟ್ರಪತಿ ಆಜ್ಞೆ ವಿರುದ್ಧ ಮಾಜಿ ರಾಜರ ಅರ್ಜಿಯ ಮೇಲೆ ಸುಪ್ರೀಂ ಕೋರ್ಟ್ ಇತ್ತ ತೀರ್ಪಿನ ಬಗ್ಗೆ ಒಂದು ಗಂಟೆ ಕಾಲ ಸಭೆಯಲ್ಲಿ ಉದ್ರಿಕ್ತ ಚರ್ಚೆ ನಡೆದ ನಂತರ ಪ್ರಧಾನಿ ಈ ಹೇಳಿಕೆಯಿತ್ತರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>