<p><strong>ರಾಜ್ಯದಲ್ಲಿ ಆಡಳಿತ ಕಾಂಗ್ರೆಸ್ ಸರ್ಕಾರ ಇಲ್ಲ<br />ದೆಹಲಿ, ಏ. 9–</strong> ಮೈಸೂರು ರಾಜ್ಯದಲ್ಲಿ ಸರ್ಕಾರ ರಚನೆಗೆ ಯಾವ ಯತ್ನವನ್ನೂ ನಡೆಸಬಾರದೆಂದು ಆಡಳಿತ ಕಾಂಗ್ರೆಸ್ ಅಧ್ಯಕ್ಷ ಶ್ರೀ ಡಿ.ಸಂಜೀವಯ್ಯನವರು ಇಂದು ರಾಜ್ಯ ಶಾಖೆಗೆ ಸೂಚನೆ ನೀಡಿದರು.</p>.<p>ರಾಜ್ಯದಲ್ಲಿ ಸರ್ಕಾರ ರಚಿಸಲು ಹೈಕಮಾಂಡ್ ವಿರೋಧಕ್ಕೆ ಕಾರಣಗಳೇ ನೆಂಬುದನ್ನು ಶ್ರೀ ಉಮಾಶಂಕರ್ ದೀಕ್ಷಿತ್ರವರು ಶ್ರೀ ದೇವರಾಜ ಅರಸ್ ಮತ್ತು ಶ್ರೀ ಎಚ್. ಸಿದ್ಧವೀರಪ್ಪನವರಿಗೆ ತಿಳಿಸಿದ್ದರು. ರಾಜ್ಯದಲ್ಲಿ ಮಂತ್ರಿಮಂಡಲ ರಚನೆಗೆ ಪಕ್ಷದಲ್ಲಿ ಸರ್ವಾನುಮತವಿಲ್ಲ ಎಂದು ಹೈಕಮಾಂಡ್ ಭಾವಿಸಿದೆಯೆಂದು ವರದಿಯಾಗಿದೆ.</p>.<p><strong>ಬಾಂಗ್ಲಾದೇಶದ ಅರ್ಧ ಭಾಗ ವಿಮುಕ್ತಿ<br />ಋಷ್ತಿಯಾ, ಏ. 9–</strong> ದೇಶಪ್ರೇಮ ಮತ್ತು ಉತ್ಸಾಹಗಳೇ ಪ್ರಮುಖ ಆಯುಧಗಳಾಗಿ, ಎರಡು ವಾರಗಳ ಹಿಂದೆ ಸ್ವಾತಂತ್ರ್ಯ ಸಮರವನ್ನಾರಂಭಿಸಿದ ಪೂರ್ವ ಬಂಗಾಳದ ಜನರು ಇಂದು ತಮ್ಮ ಪ್ರಾಂತ್ಯದ ಅರ್ಧಭಾಗವನ್ನು ವಶಪಡಿಸಿಕೊಂಡಿರುವಂತೆ ಕಂಡುಬರುತ್ತಿದೆ.</p>.<p>ಕನಿಷ್ಠ ಪಕ್ಷ ಅಲ್ಲಿಯ ಎರಡೂವರೆ ಕೋಟಿ ಜನರ (ಮೂರನೇ ಒಂದು ಭಾಗದಷ್ಟು) ಮಟ್ಟಿಗಾದರೂ ಸ್ವತಂತ್ರ ಬಾಂಗ್ಲಾದೇಶದ ಕನಸು ನನಸಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜ್ಯದಲ್ಲಿ ಆಡಳಿತ ಕಾಂಗ್ರೆಸ್ ಸರ್ಕಾರ ಇಲ್ಲ<br />ದೆಹಲಿ, ಏ. 9–</strong> ಮೈಸೂರು ರಾಜ್ಯದಲ್ಲಿ ಸರ್ಕಾರ ರಚನೆಗೆ ಯಾವ ಯತ್ನವನ್ನೂ ನಡೆಸಬಾರದೆಂದು ಆಡಳಿತ ಕಾಂಗ್ರೆಸ್ ಅಧ್ಯಕ್ಷ ಶ್ರೀ ಡಿ.ಸಂಜೀವಯ್ಯನವರು ಇಂದು ರಾಜ್ಯ ಶಾಖೆಗೆ ಸೂಚನೆ ನೀಡಿದರು.</p>.<p>ರಾಜ್ಯದಲ್ಲಿ ಸರ್ಕಾರ ರಚಿಸಲು ಹೈಕಮಾಂಡ್ ವಿರೋಧಕ್ಕೆ ಕಾರಣಗಳೇ ನೆಂಬುದನ್ನು ಶ್ರೀ ಉಮಾಶಂಕರ್ ದೀಕ್ಷಿತ್ರವರು ಶ್ರೀ ದೇವರಾಜ ಅರಸ್ ಮತ್ತು ಶ್ರೀ ಎಚ್. ಸಿದ್ಧವೀರಪ್ಪನವರಿಗೆ ತಿಳಿಸಿದ್ದರು. ರಾಜ್ಯದಲ್ಲಿ ಮಂತ್ರಿಮಂಡಲ ರಚನೆಗೆ ಪಕ್ಷದಲ್ಲಿ ಸರ್ವಾನುಮತವಿಲ್ಲ ಎಂದು ಹೈಕಮಾಂಡ್ ಭಾವಿಸಿದೆಯೆಂದು ವರದಿಯಾಗಿದೆ.</p>.<p><strong>ಬಾಂಗ್ಲಾದೇಶದ ಅರ್ಧ ಭಾಗ ವಿಮುಕ್ತಿ<br />ಋಷ್ತಿಯಾ, ಏ. 9–</strong> ದೇಶಪ್ರೇಮ ಮತ್ತು ಉತ್ಸಾಹಗಳೇ ಪ್ರಮುಖ ಆಯುಧಗಳಾಗಿ, ಎರಡು ವಾರಗಳ ಹಿಂದೆ ಸ್ವಾತಂತ್ರ್ಯ ಸಮರವನ್ನಾರಂಭಿಸಿದ ಪೂರ್ವ ಬಂಗಾಳದ ಜನರು ಇಂದು ತಮ್ಮ ಪ್ರಾಂತ್ಯದ ಅರ್ಧಭಾಗವನ್ನು ವಶಪಡಿಸಿಕೊಂಡಿರುವಂತೆ ಕಂಡುಬರುತ್ತಿದೆ.</p>.<p>ಕನಿಷ್ಠ ಪಕ್ಷ ಅಲ್ಲಿಯ ಎರಡೂವರೆ ಕೋಟಿ ಜನರ (ಮೂರನೇ ಒಂದು ಭಾಗದಷ್ಟು) ಮಟ್ಟಿಗಾದರೂ ಸ್ವತಂತ್ರ ಬಾಂಗ್ಲಾದೇಶದ ಕನಸು ನನಸಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>