<p><strong>ಸಾಮಾನ್ಯ ವಿಮೆ ರಾಷ್ಟ್ರೀಕರಣ– ರಾಷ್ಟ್ರಪತಿ ಸುಗ್ರೀವಾಜ್ಞೆ: 106 ಸಂಸ್ಥೆಗಳ ಆಡಳಿತಕ್ಕೆ ಕಾರ್ಪೊರೇಷನ್</strong></p>.<p><strong>ನವದೆಹಲಿ, ಮೇ 13– </strong>ರಾಷ್ಟ್ರದ ಸಾಮಾನ್ಯ ವಿಮೆ ಉದ್ಯಮವನ್ನು ಕೇಂದ್ರ ಸರ್ಕಾರ ಇಂದು ರಾಷ್ಟ್ರೀಕರಿಸಿತು.</p>.<p>ಭಾರತದಲ್ಲಿ ಈಗ ಕಾರ್ಯನಿರತವಾಗಿರುವ ಸಾಮಾನ್ಯ ವಿಮೆ ಸಂಸ್ಥೆಗಳ ಆಡಳಿತವನ್ನು ತತ್ಕ್ಷಣದಿಂದ ಕೇಂದ್ರ ಸರ್ಕಾರ ವಹಿಸಿಕೊಂಡಿದೆ.</p>.<p>ಇದಕ್ಕೆ ಸಂಬಂಧಿಸಿದ ಸುಗ್ರೀವಾಜ್ಞೆಯೊಂದನ್ನು ರಾಷ್ಟ್ರಪತಿ ಇಂದು ಹೊರಡಿಸಿದರು. ಈ ಸುಗ್ರೀವಾಜ್ಞೆಯಿಂದ ರಾಷ್ಟ್ರದಲ್ಲಿನ ನಲವತ್ತೆರಡು ವಿದೇಶಿ ಸಾಮಾನ್ಯ ವಿಮೆ ಸಂಸ್ಥೆಗಳು ಹಾಗೂ ಅರವತ್ನಾಲ್ಕು ಭಾರತೀಯ ಸಾಮಾನ್ಯ ವಿಮೆ ಸಂಸ್ಥೆಗಳ ಆಡಳಿತವು ಸರ್ಕಾರದ ಹತೋಟಿಗೆ ಬಂದಿದೆ.</p>.<p><strong>ಸಂಸ್ಥಾ ಕಾಂಗ್ರೆಸ್ ಹೊಸ ಅಧ್ಯಕ್ಷರ ಒಮ್ಮತದ ಆಯ್ಕೆ ಯತ್ನ ವಿಫಲ<br />ಮುಂಬೈ, ಮೇ 13– </strong>ಸಂಸ್ಥಾ ಕಾಂಗ್ರೆಸಿನ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯ ಆಯ್ಕೆ ವಿಚಾರದಲ್ಲಿ ಕಾರ್ಯಕಾರಿ ಸಮಿತಿಯು ಇಂದು ಸರ್ವಸಮ್ಮತ ನಿರ್ಧಾರಕ್ಕೆ ಬರಲಾಗದೆ ಹೊಸ ಅಧ್ಯಕ್ಷರ ಚುನಾವಣೆಯ ವಿಷಯವನ್ನು ಎಐಸಿಸಿಗೇ ಬಿಡಲು ನಿರ್ಧರಿಸಿತು.</p>.<p>ಪಕ್ಷದ ಹೊಸ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರಗಳನ್ನು ಆಹ್ವಾನಿಸಲೂ ಕಾರ್ಯಕಾರಿ ಸಮಿತಿಯು ನಿರ್ಧರಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಮಾನ್ಯ ವಿಮೆ ರಾಷ್ಟ್ರೀಕರಣ– ರಾಷ್ಟ್ರಪತಿ ಸುಗ್ರೀವಾಜ್ಞೆ: 106 ಸಂಸ್ಥೆಗಳ ಆಡಳಿತಕ್ಕೆ ಕಾರ್ಪೊರೇಷನ್</strong></p>.<p><strong>ನವದೆಹಲಿ, ಮೇ 13– </strong>ರಾಷ್ಟ್ರದ ಸಾಮಾನ್ಯ ವಿಮೆ ಉದ್ಯಮವನ್ನು ಕೇಂದ್ರ ಸರ್ಕಾರ ಇಂದು ರಾಷ್ಟ್ರೀಕರಿಸಿತು.</p>.<p>ಭಾರತದಲ್ಲಿ ಈಗ ಕಾರ್ಯನಿರತವಾಗಿರುವ ಸಾಮಾನ್ಯ ವಿಮೆ ಸಂಸ್ಥೆಗಳ ಆಡಳಿತವನ್ನು ತತ್ಕ್ಷಣದಿಂದ ಕೇಂದ್ರ ಸರ್ಕಾರ ವಹಿಸಿಕೊಂಡಿದೆ.</p>.<p>ಇದಕ್ಕೆ ಸಂಬಂಧಿಸಿದ ಸುಗ್ರೀವಾಜ್ಞೆಯೊಂದನ್ನು ರಾಷ್ಟ್ರಪತಿ ಇಂದು ಹೊರಡಿಸಿದರು. ಈ ಸುಗ್ರೀವಾಜ್ಞೆಯಿಂದ ರಾಷ್ಟ್ರದಲ್ಲಿನ ನಲವತ್ತೆರಡು ವಿದೇಶಿ ಸಾಮಾನ್ಯ ವಿಮೆ ಸಂಸ್ಥೆಗಳು ಹಾಗೂ ಅರವತ್ನಾಲ್ಕು ಭಾರತೀಯ ಸಾಮಾನ್ಯ ವಿಮೆ ಸಂಸ್ಥೆಗಳ ಆಡಳಿತವು ಸರ್ಕಾರದ ಹತೋಟಿಗೆ ಬಂದಿದೆ.</p>.<p><strong>ಸಂಸ್ಥಾ ಕಾಂಗ್ರೆಸ್ ಹೊಸ ಅಧ್ಯಕ್ಷರ ಒಮ್ಮತದ ಆಯ್ಕೆ ಯತ್ನ ವಿಫಲ<br />ಮುಂಬೈ, ಮೇ 13– </strong>ಸಂಸ್ಥಾ ಕಾಂಗ್ರೆಸಿನ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯ ಆಯ್ಕೆ ವಿಚಾರದಲ್ಲಿ ಕಾರ್ಯಕಾರಿ ಸಮಿತಿಯು ಇಂದು ಸರ್ವಸಮ್ಮತ ನಿರ್ಧಾರಕ್ಕೆ ಬರಲಾಗದೆ ಹೊಸ ಅಧ್ಯಕ್ಷರ ಚುನಾವಣೆಯ ವಿಷಯವನ್ನು ಎಐಸಿಸಿಗೇ ಬಿಡಲು ನಿರ್ಧರಿಸಿತು.</p>.<p>ಪಕ್ಷದ ಹೊಸ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರಗಳನ್ನು ಆಹ್ವಾನಿಸಲೂ ಕಾರ್ಯಕಾರಿ ಸಮಿತಿಯು ನಿರ್ಧರಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>