ಅರ್ಹ ಕೆಳದರ್ಜೆ ನೌಕರರು ಉನ್ನತ ದರ್ಜೆಗೆ ಏರಲು ತಕ್ಕ ಕಾರ್ಮಿಕ ನೀತಿಗೆ ಕೆಂಗಲ್ ಕರೆ
ಬೆಂಗಳೂರು, ಜುಲೈ 5– ಯೋಗ್ಯತೆ, ನಿಸ್ಪೃಹತೆ ಮತ್ತು ಕೌಶಲ ಇರುವ ಕೆಳದರ್ಜೆಯ ನೌಕರ, ಸಂಸ್ಥೆಯ ಉನ್ನತ ದರ್ಜೆಗೆ ಏರುವುದಕ್ಕೆ ಅವಕಾಶವಿರುವ ಕಾರ್ಮಿಕ ನೀತಿ ಅನುಸರಣೆ ಅಗತ್ಯವೆಂದು ಕೇಂದ್ರ ರೈಲ್ವೆ ಸಚಿವ ಶ್ರೀ ಕೆ.ಹನುಮಂತಯ್ಯ ಅವರು ಇಂದು ಇಲ್ಲಿ ನುಡಿದರು.