ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ: 26-3- 1971

Last Updated 25 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಚಂಡೀಗಡದ ಉಗ್ರಾಣದಲ್ಲಿ ಗುರುತಿಸಿದ ಮತಚೀಟಿಗಳು: ನ್ಯಾಯಾಂಗ ತನಿಖೆಗೆ ಒತ್ತಾಯ

ನವದೆಹಲಿ, ಮಾರ್ಚ್‌ 25– ಸಂಸತ್ತಿನ ಉಭಯ ಸದನಗಳಲ್ಲೂ ವಿರೋಧ ಪಕ್ಷ ಇಂದು ಆಡಳಿತ ಪಕ್ಷದ ಮೇಲೆ ತನ್ನ ಪ್ರಪ್ರಥಮ ಅಸ್ತ್ರವನ್ನು ಪ್ರಯೋಗಿಸಿತು.

ಈಚಿನ ಚುನಾವಣೆಗಳ ನಂತರ ಚಂಡೀಗಡದ ಖಾಸಗಿ ಉಗ್ರಾಣವೊಂದರಲ್ಲಿ ಗುರುತಿಸಿದ ಸಾವಿರಾರು ಮತಚೀಟಿಗಳು ಕಂಡುಬಂದಿವೆ. ಅದರ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂಬುದು ವಿರೋಧ ಪಕ್ಷದ ಒತ್ತಾಯವಾಗಿತ್ತು. ಜನಸಂಘದ ಸದಸ್ಯರು ಕೈಯಲ್ಲಿ ಒಂದು ಹಿಡಿ ಮತಪತ್ರಗಳನ್ನು ಹಿಡಿದು ಕೈಬೀಸುತ್ತಾ ಸರ್ಕಾರದಿಂದ ತೃಪ್ತಿಕರ ವಿವರಣೆ ಬಯಸಿದರು.

ರಾಜ್ಯದಲ್ಲಿ ಕಾಂಗ್ರೆಸ್ಸೇತರ ಸಂಪುಟ ರಚನೆ ಯತ್ನ

ಬೆಂಗಳೂರು, ಮಾರ್ಚ್‌ 25– ವಿಧಾನಸಭೆಯ ಕಾಂಗ್ರೆಸ್ಸೇತರ ಪಕ್ಷಗಳ ಪರವಾಗಿ ಮಂತ್ರಿಮಂಡಲ ರಚಿಸಲು ತಮಗೆ ಬಹುಮತದ ಬೆಂಬಲವಿದೆ ಎಂದು ತಿಳಿಸುವ ಪತ್ರವನ್ನು ನಾಳೆ ರಾಜ್ಯಪಾಲರಿಗೆ ಅರ್ಪಿಸುವ ಸಂಭವವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT