<p><strong>ರಕ್ಷಣಾ ಶಾಖೆ ರಹಸ್ಯ ವರದಿ ಬ್ರಿಟಿಷ್ ಗ್ರಂಥಕರ್ತನಿಗೆ ಬಯಲಾದ ಬಗ್ಗೆ ಆಕ್ರೋಶ</strong></p>.<p><strong>ನವದೆಹಲಿ, ನ. 9– </strong>ಬ್ರಿಟಿಷ್ ಲೇಖಕ ನವಿಲ್ ಮಾಕ್ಸ್ವೆಲ್ ಅವರ ‘ಇಂಡಿಯಾಸ್ ಚೈನಾ ವಾರ್’ ಎಂಬ ಪುಸ್ತಕಕ್ಕೆ ವಸ್ತುವನ್ನು ಯಾರು ಒದಗಿಸಿದರೆಂಬ ಪ್ರಶ್ನೆಯನ್ನು ಪರಿಶೀಲಿಸಿ ‘ಸಾಧ್ಯವಾದಷ್ಟು ಶೀಘ್ರವೇ’ ಕ್ರಮ ತೆಗೆದುಕೊಳ್ಳುವುದಾಗಿ ರಕ್ಷಣಾ ಸಚಿವ ಶ್ರೀ ಜಗಜೀವನರಾಂ ಅವರು ಇಂದು ಲೋಕಸಭೆಗೆ ಭರವಸೆ ಕೊಟ್ಟರು.</p>.<p>ಮಾಕ್ಸ್ವೆಲ್ ಅವರು ಅನುಮತಿ ಪಡೆದಿದ್ದರೇ, ಇಲ್ಲದಿದ್ದರೆ ಲೇಖಕರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಶ್ರೀನಾಥ್ ಪೈ ಪ್ರಶ್ನಿಸಿದ್ದರು.</p>.<p><strong>ಪ್ರಸ್ತುತ ಅಧಿವೇಶನ ಕಾಲದಲ್ಲೇ ಸಂಸತ್ ಸಮಿತಿ ರಚನೆ?</strong></p>.<p><strong>ನವದೆಹಲಿ, ನ. 9– ಮೈಸೂರು–</strong>ಮಹಾರಾಷ್ಟ್ರ ಗಡಿ ವಿವಾದ ಪರಿಶೀಲನೆಗಾಗಿ ಪ್ರಸ್ತುತ ಸಂಸತ್ ಅಧಿವೇಶನದ ಕಾಲದಲ್ಲೇ ಸಂಸತ್ ಸಮಿತಿಯೊಂದನ್ನು ರಚಿಸುವ ನಿರೀಕ್ಷೆಯಿದೆ.</p>.<p>ಸಮಿತಿಯನ್ನು ರಚಿಸುವಂತೆ ಲೋಕಸಭೆ ಮತ್ತು ರಾಜ್ಯಸಭೆಯ ಅಧ್ಯಕ್ಷರುಗಳನ್ನು ಕೋರುವ ನಿರ್ಣಯವೊಂದನ್ನು ಸರ್ಕಾರ ಶೀಘ್ರದಲ್ಲೇ ತರಲಿದೆಯೆಂದು ತಿಳಿದುಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಕ್ಷಣಾ ಶಾಖೆ ರಹಸ್ಯ ವರದಿ ಬ್ರಿಟಿಷ್ ಗ್ರಂಥಕರ್ತನಿಗೆ ಬಯಲಾದ ಬಗ್ಗೆ ಆಕ್ರೋಶ</strong></p>.<p><strong>ನವದೆಹಲಿ, ನ. 9– </strong>ಬ್ರಿಟಿಷ್ ಲೇಖಕ ನವಿಲ್ ಮಾಕ್ಸ್ವೆಲ್ ಅವರ ‘ಇಂಡಿಯಾಸ್ ಚೈನಾ ವಾರ್’ ಎಂಬ ಪುಸ್ತಕಕ್ಕೆ ವಸ್ತುವನ್ನು ಯಾರು ಒದಗಿಸಿದರೆಂಬ ಪ್ರಶ್ನೆಯನ್ನು ಪರಿಶೀಲಿಸಿ ‘ಸಾಧ್ಯವಾದಷ್ಟು ಶೀಘ್ರವೇ’ ಕ್ರಮ ತೆಗೆದುಕೊಳ್ಳುವುದಾಗಿ ರಕ್ಷಣಾ ಸಚಿವ ಶ್ರೀ ಜಗಜೀವನರಾಂ ಅವರು ಇಂದು ಲೋಕಸಭೆಗೆ ಭರವಸೆ ಕೊಟ್ಟರು.</p>.<p>ಮಾಕ್ಸ್ವೆಲ್ ಅವರು ಅನುಮತಿ ಪಡೆದಿದ್ದರೇ, ಇಲ್ಲದಿದ್ದರೆ ಲೇಖಕರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಶ್ರೀನಾಥ್ ಪೈ ಪ್ರಶ್ನಿಸಿದ್ದರು.</p>.<p><strong>ಪ್ರಸ್ತುತ ಅಧಿವೇಶನ ಕಾಲದಲ್ಲೇ ಸಂಸತ್ ಸಮಿತಿ ರಚನೆ?</strong></p>.<p><strong>ನವದೆಹಲಿ, ನ. 9– ಮೈಸೂರು–</strong>ಮಹಾರಾಷ್ಟ್ರ ಗಡಿ ವಿವಾದ ಪರಿಶೀಲನೆಗಾಗಿ ಪ್ರಸ್ತುತ ಸಂಸತ್ ಅಧಿವೇಶನದ ಕಾಲದಲ್ಲೇ ಸಂಸತ್ ಸಮಿತಿಯೊಂದನ್ನು ರಚಿಸುವ ನಿರೀಕ್ಷೆಯಿದೆ.</p>.<p>ಸಮಿತಿಯನ್ನು ರಚಿಸುವಂತೆ ಲೋಕಸಭೆ ಮತ್ತು ರಾಜ್ಯಸಭೆಯ ಅಧ್ಯಕ್ಷರುಗಳನ್ನು ಕೋರುವ ನಿರ್ಣಯವೊಂದನ್ನು ಸರ್ಕಾರ ಶೀಘ್ರದಲ್ಲೇ ತರಲಿದೆಯೆಂದು ತಿಳಿದುಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>