<p><strong>ಪ್ರಥಮ ಬೃಹತ್ ಸಮರನೌಕೆ ‘ನೀಲಗಿರಿ’ ಜಲಯಾನ</strong></p>.<p><strong>ಮುಂಬೈ, ಅ. 23– </strong>‘ಹಿಂದೂ ಮಹಾಸಾಗರದ ಮೇಲೆ ಪ್ರಭುತ್ವ ಸ್ಥಾಪಿಸುವ ಆಶೆ– ಆಕಾಂಕ್ಷೆಗಳೇನೂ ಭಾರತಕ್ಕೆ ಇಲ್ಲ’ ಎಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ಘೋಷಿಸಿದರು.</p>.<p>ಭಾರತದಲ್ಲಿ ತಯಾರಿಸಲಾದ ಪ್ರಥಮ ಸಬ್ ಮೆರಿನ್ ನಿರೋಧಕ ಹಾಗೂ ಸರ್ವೋದ್ದೇಶದ ಲಿಯಾಂಡರ್ ವರ್ಗದ ಬೃಹತ್ ಸಮರನೌಕೆ ‘ನೀಲಗಿರಿ’ಯನ್ನು ಇಂದು ಮಧ್ಯಾಹ್ನ 12.20ಕ್ಕೆ ಜಲಯಾನಕ್ಕೆ ತೊಡಗಿಸುತ್ತಾ ‘ಅಧಿಕಾರ ಅಥವಾ ಶಕ್ತಿಯ ಹಾಗೂ ಪ್ರಭಾವದ ಕ್ಷೇತ್ರಗಳಲ್ಲಿ ನಮಗೆ ನಂಬಿಕೆ ಇಲ್ಲ’ ಎಂದೂ ಅವರು ನುಡಿದರು.</p>.<p><strong>ಈರುಳ್ಳಿ ಮಹಿಮೆ</strong></p>.<p><strong>ನವದೆಹಲಿ, ಅ. 23–</strong> ದಿನಕ್ಕೆ ಒಂದು ಈರುಳ್ಳಿ ತಿನ್ನುವುದರಿಂದ ದಂತ ವೈದ್ಯರ ಅಗತ್ಯವೇ ಇರದು!</p>.<p>ದಂತಕ್ಷಯಕ್ಕೆ ಹಾಗೂ ಇತರ ದಂತ ರೋಗಗಳಿಗೆ ಕಾರಣವಾದ ಕ್ರಿಮಿಗಳನ್ನು ಈರುಳ್ಳಿಯಲ್ಲಿರುವ ಕೆಲವು ವಸ್ತುಗಳು ನಾಶಪಡಿಸುವುದೇ ಇದಕ್ಕೆ ಕಾರಣ.</p>.<p>ಈ ಅಂಶ ಇತ್ತೀಚಿನ ಸಂಶೋಧನೆಗಳಿಂದ ವ್ಯಕ್ತಪಟ್ಟಿದೆ.</p>.<p>‘ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ಕ್ರಿಮಿಗಳನ್ನು ಕೊಲ್ಲುವುದಕ್ಕೆ ಮೂರು ನಿಮಿಷಗಳ ಕಾಲ ಒಂದು ಈರುಳ್ಳಿಯನ್ನು ಅಗಿದರೆ ಸಾಕು’ ಎಂಬುದು ರಷ್ಯ ವಿಜ್ಞಾನಿ ಬಿ.ಪಿ. ಟೋಕಿನ್ ಅಭಿಪ್ರಾಯ. ಅವರೇ ಈ ಬಗ್ಗೆ ಸಂಶೋಧನೆ ನಡೆಸಿದರು.</p>.<p><strong>ದಾವಣಗೆರೆ ಅತಿ ದುಬಾರಿ ನಗರ</strong></p>.<p><strong>ಬೆಂಗಳೂರು, ಅ. 23–</strong> ಸೆಪ್ಟೆಂಬರ್ ತಿಂಗಳಲ್ಲಿ ಜೀವನ ವೆಚ್ಚ ಏರಿಕೆ ಸೂಚ್ಯಂಕಗಳ ವರದಿ ಪ್ರಕಾರ ದಾವಣಗೆರೆ, ರಾಜ್ಯದಲ್ಲಿ ಅತಿ ದುಬಾರಿ ಪಟ್ಟಣ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪ್ರಥಮ ಬೃಹತ್ ಸಮರನೌಕೆ ‘ನೀಲಗಿರಿ’ ಜಲಯಾನ</strong></p>.<p><strong>ಮುಂಬೈ, ಅ. 23– </strong>‘ಹಿಂದೂ ಮಹಾಸಾಗರದ ಮೇಲೆ ಪ್ರಭುತ್ವ ಸ್ಥಾಪಿಸುವ ಆಶೆ– ಆಕಾಂಕ್ಷೆಗಳೇನೂ ಭಾರತಕ್ಕೆ ಇಲ್ಲ’ ಎಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ಘೋಷಿಸಿದರು.</p>.<p>ಭಾರತದಲ್ಲಿ ತಯಾರಿಸಲಾದ ಪ್ರಥಮ ಸಬ್ ಮೆರಿನ್ ನಿರೋಧಕ ಹಾಗೂ ಸರ್ವೋದ್ದೇಶದ ಲಿಯಾಂಡರ್ ವರ್ಗದ ಬೃಹತ್ ಸಮರನೌಕೆ ‘ನೀಲಗಿರಿ’ಯನ್ನು ಇಂದು ಮಧ್ಯಾಹ್ನ 12.20ಕ್ಕೆ ಜಲಯಾನಕ್ಕೆ ತೊಡಗಿಸುತ್ತಾ ‘ಅಧಿಕಾರ ಅಥವಾ ಶಕ್ತಿಯ ಹಾಗೂ ಪ್ರಭಾವದ ಕ್ಷೇತ್ರಗಳಲ್ಲಿ ನಮಗೆ ನಂಬಿಕೆ ಇಲ್ಲ’ ಎಂದೂ ಅವರು ನುಡಿದರು.</p>.<p><strong>ಈರುಳ್ಳಿ ಮಹಿಮೆ</strong></p>.<p><strong>ನವದೆಹಲಿ, ಅ. 23–</strong> ದಿನಕ್ಕೆ ಒಂದು ಈರುಳ್ಳಿ ತಿನ್ನುವುದರಿಂದ ದಂತ ವೈದ್ಯರ ಅಗತ್ಯವೇ ಇರದು!</p>.<p>ದಂತಕ್ಷಯಕ್ಕೆ ಹಾಗೂ ಇತರ ದಂತ ರೋಗಗಳಿಗೆ ಕಾರಣವಾದ ಕ್ರಿಮಿಗಳನ್ನು ಈರುಳ್ಳಿಯಲ್ಲಿರುವ ಕೆಲವು ವಸ್ತುಗಳು ನಾಶಪಡಿಸುವುದೇ ಇದಕ್ಕೆ ಕಾರಣ.</p>.<p>ಈ ಅಂಶ ಇತ್ತೀಚಿನ ಸಂಶೋಧನೆಗಳಿಂದ ವ್ಯಕ್ತಪಟ್ಟಿದೆ.</p>.<p>‘ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ಕ್ರಿಮಿಗಳನ್ನು ಕೊಲ್ಲುವುದಕ್ಕೆ ಮೂರು ನಿಮಿಷಗಳ ಕಾಲ ಒಂದು ಈರುಳ್ಳಿಯನ್ನು ಅಗಿದರೆ ಸಾಕು’ ಎಂಬುದು ರಷ್ಯ ವಿಜ್ಞಾನಿ ಬಿ.ಪಿ. ಟೋಕಿನ್ ಅಭಿಪ್ರಾಯ. ಅವರೇ ಈ ಬಗ್ಗೆ ಸಂಶೋಧನೆ ನಡೆಸಿದರು.</p>.<p><strong>ದಾವಣಗೆರೆ ಅತಿ ದುಬಾರಿ ನಗರ</strong></p>.<p><strong>ಬೆಂಗಳೂರು, ಅ. 23–</strong> ಸೆಪ್ಟೆಂಬರ್ ತಿಂಗಳಲ್ಲಿ ಜೀವನ ವೆಚ್ಚ ಏರಿಕೆ ಸೂಚ್ಯಂಕಗಳ ವರದಿ ಪ್ರಕಾರ ದಾವಣಗೆರೆ, ರಾಜ್ಯದಲ್ಲಿ ಅತಿ ದುಬಾರಿ ಪಟ್ಟಣ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>