<p><strong>ಮನೆ, ಮನ ತುಂಬಿದಾಗ...</strong><br />ಬೆಂಗಳೂರು, ಡಿ.1– ಶತಮಾನ ಕಾಲ ಬಾಳಲಿ, ಸವರ ಸ್ಫೂರ್ತಿ ಅಖಂಡವಾಗಿ ಉಳಿಯಲಿ– ಹಾರೈಕೆ ಹೊಮ್ಮಿ ಹರಡಿತ್ತು.</p>.<p>‘ಅವರ ಪಾದದ ಮೇಲೆ ಇಟ್ಟು ಧನ್ಯ’ರಾದರು ಪ್ರೊ.ವಿ.ಕೃ. ಗೋಕಾಕ್.</p>.<p>ವೇದಿಕೆಯ ಮೇಲೆ ‘ದೇವರ ಹಾಗೆ’ ಕುಳಿತಿದ್ದವರು ಎದ್ದು ‘ನಿಮಗೆಲ್ಲ ನಮಸ್ಕಾರ’ ಎಂದರು.</p>.<p>ಕೂಟ ಮುಗಿಯುತ್ತ ಬಂದಂತೆಲ್ಲ ಗೌರವ ಹಾಗೂ ಕೃತಜ್ಞತೆಯ ಭಾರ ಹೆಚ್ಚಾಗುತ್ತಿತ್ತು. ಯಾವುದೋ ಸುಪ್ತ ಆವೇಶ. ನೆರೆದಿದ್ದ ಕಿರಿಯರೆಲ್ಲ ಕಾಲು ಮುಟ್ಟಿ ನಮಸ್ಕಾರ ಮಾಡಿದರು.</p>.<p>ಕನ್ನಡಕ್ಕೆ ‘ಶ್ರೀಮದ್ಭಗವದ್ಗೀತಾ ತಾತ್ಪರ್ಯ’ ನೀಡಿದ 79ವರ್ಷ ವಯಸ್ಸಿನ ಡಿ.ವಿ.ಜಿ. ಅವರಿಗೆ ರಾಷ್ಟ್ರಪ್ರಶಸ್ತಿ ಸಮರ್ಪಣೆಯಾಗಿತ್ತು.</p>.<p><strong>ವಾಣಿಜ್ಯ ಕ್ಷೇತ್ರದಲ್ಲಿ ಕೃತಕ ತಡೆಯಿಂದ ವಿಶ್ವಶಾಂತಿಗೆ ಗಂಡಾಂತರ<br />ನವದೆಹಲಿ, ಡಿ.1–</strong> ಜನಸಂಖ್ಯೆ ಆಸ್ಫೋಟನೆಗಿಂತ ವಾಣಿಜ್ಯದಲ್ಲಿ ಉಂಟಾದ ಕೃತಕ ತಡೆಗಳೇ ಹೆಚ್ಚಾಗಿ ವಿಶ್ವಶಾಂತಿಗೆ ಬೆದರಿಕೆಯನ್ನೊಡ್ಡಿವೆ ಎಂದು ಪ್ರಖ್ಯಾತ ಭೂಗೋಳ ಶಾಸ್ತ್ರಜ್ಞರು ಇಂದು ಇಲ್ಲಿ ಹೇಳಿದರು.</p>.<p>ಅಭಿವೃದ್ಧ ರಾಷ್ಟ್ರಗಳ ಮಾರುಕಟ್ಟೆಗೆ ಅಭಿವೃದ್ಧಿಶೀಲ ರಾಷ್ಟ್ರಗಳ ಕಚ್ಚಾ ಉತ್ಪನ್ನಗಳು ಪ್ರವೇಶಿಸುವುದು ಕಷ್ಟಕರವಾಗುವಂತೆ ಮಾಡುವುದೇ ಈ ಕೃತಕ ತಡೆಗಳ ಉದ್ದೇಶ ಎಂದೂ ಹೇಳಿದರು.</p>.<p><strong>ಗಣಿಗಳಿಗೆ ಸ್ಫೋಟಕ ನೇರ ಪೂರೈಕೆ<br />ಬೆಂಗಳೂರು, ಡಿ. 1– </strong>ಲೋಹ ಮತ್ತು ಖನಿಜಗಳ ಮಾರಾಟ ಕಾರ್ಪೊರೇಷನ್ ಬರುವ ಜನವರಿ ಅಂತ್ಯದಿಂದ ಹೊಸಪೇಟೆ– ಬಳ್ಳಾರಿ ಪ್ರದೇಶದಲ್ಲಿ ಗಣಿ ಕೈಗಾರಿಕೋದ್ಯಮಿಗಳಿಗೆ ನೇರವಾಗಿ ನಿಯಂತ್ರಿತ ದರಗಳಲ್ಲಿ ಸ್ಫೋಟಕ ವಸ್ತುಗಳನ್ನು ಒದಗಿಸಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮನೆ, ಮನ ತುಂಬಿದಾಗ...</strong><br />ಬೆಂಗಳೂರು, ಡಿ.1– ಶತಮಾನ ಕಾಲ ಬಾಳಲಿ, ಸವರ ಸ್ಫೂರ್ತಿ ಅಖಂಡವಾಗಿ ಉಳಿಯಲಿ– ಹಾರೈಕೆ ಹೊಮ್ಮಿ ಹರಡಿತ್ತು.</p>.<p>‘ಅವರ ಪಾದದ ಮೇಲೆ ಇಟ್ಟು ಧನ್ಯ’ರಾದರು ಪ್ರೊ.ವಿ.ಕೃ. ಗೋಕಾಕ್.</p>.<p>ವೇದಿಕೆಯ ಮೇಲೆ ‘ದೇವರ ಹಾಗೆ’ ಕುಳಿತಿದ್ದವರು ಎದ್ದು ‘ನಿಮಗೆಲ್ಲ ನಮಸ್ಕಾರ’ ಎಂದರು.</p>.<p>ಕೂಟ ಮುಗಿಯುತ್ತ ಬಂದಂತೆಲ್ಲ ಗೌರವ ಹಾಗೂ ಕೃತಜ್ಞತೆಯ ಭಾರ ಹೆಚ್ಚಾಗುತ್ತಿತ್ತು. ಯಾವುದೋ ಸುಪ್ತ ಆವೇಶ. ನೆರೆದಿದ್ದ ಕಿರಿಯರೆಲ್ಲ ಕಾಲು ಮುಟ್ಟಿ ನಮಸ್ಕಾರ ಮಾಡಿದರು.</p>.<p>ಕನ್ನಡಕ್ಕೆ ‘ಶ್ರೀಮದ್ಭಗವದ್ಗೀತಾ ತಾತ್ಪರ್ಯ’ ನೀಡಿದ 79ವರ್ಷ ವಯಸ್ಸಿನ ಡಿ.ವಿ.ಜಿ. ಅವರಿಗೆ ರಾಷ್ಟ್ರಪ್ರಶಸ್ತಿ ಸಮರ್ಪಣೆಯಾಗಿತ್ತು.</p>.<p><strong>ವಾಣಿಜ್ಯ ಕ್ಷೇತ್ರದಲ್ಲಿ ಕೃತಕ ತಡೆಯಿಂದ ವಿಶ್ವಶಾಂತಿಗೆ ಗಂಡಾಂತರ<br />ನವದೆಹಲಿ, ಡಿ.1–</strong> ಜನಸಂಖ್ಯೆ ಆಸ್ಫೋಟನೆಗಿಂತ ವಾಣಿಜ್ಯದಲ್ಲಿ ಉಂಟಾದ ಕೃತಕ ತಡೆಗಳೇ ಹೆಚ್ಚಾಗಿ ವಿಶ್ವಶಾಂತಿಗೆ ಬೆದರಿಕೆಯನ್ನೊಡ್ಡಿವೆ ಎಂದು ಪ್ರಖ್ಯಾತ ಭೂಗೋಳ ಶಾಸ್ತ್ರಜ್ಞರು ಇಂದು ಇಲ್ಲಿ ಹೇಳಿದರು.</p>.<p>ಅಭಿವೃದ್ಧ ರಾಷ್ಟ್ರಗಳ ಮಾರುಕಟ್ಟೆಗೆ ಅಭಿವೃದ್ಧಿಶೀಲ ರಾಷ್ಟ್ರಗಳ ಕಚ್ಚಾ ಉತ್ಪನ್ನಗಳು ಪ್ರವೇಶಿಸುವುದು ಕಷ್ಟಕರವಾಗುವಂತೆ ಮಾಡುವುದೇ ಈ ಕೃತಕ ತಡೆಗಳ ಉದ್ದೇಶ ಎಂದೂ ಹೇಳಿದರು.</p>.<p><strong>ಗಣಿಗಳಿಗೆ ಸ್ಫೋಟಕ ನೇರ ಪೂರೈಕೆ<br />ಬೆಂಗಳೂರು, ಡಿ. 1– </strong>ಲೋಹ ಮತ್ತು ಖನಿಜಗಳ ಮಾರಾಟ ಕಾರ್ಪೊರೇಷನ್ ಬರುವ ಜನವರಿ ಅಂತ್ಯದಿಂದ ಹೊಸಪೇಟೆ– ಬಳ್ಳಾರಿ ಪ್ರದೇಶದಲ್ಲಿ ಗಣಿ ಕೈಗಾರಿಕೋದ್ಯಮಿಗಳಿಗೆ ನೇರವಾಗಿ ನಿಯಂತ್ರಿತ ದರಗಳಲ್ಲಿ ಸ್ಫೋಟಕ ವಸ್ತುಗಳನ್ನು ಒದಗಿಸಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>