<p><strong>ಸಂಸ್ಥಾನದ ಆಹಾರ ಪರಿಸ್ಥಿತಿ</strong></p>.<p>ಬೆಂಗಳೂರು, ಆಗಸ್ಟ್ 24– ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಅವರು, ಇಂದು ಅವರ ಕಚೇರಿಯಲ್ಲಿ ಸಂಸ್ಥಾನದ ಆಹಾರ ಪರಿಸ್ಥಿತಿ ಬಗ್ಗೆ ಸಂಸ್ಥಾನದ ಜಿಲ್ಲಾಧಿಕಾರಿಗಳೊಡನೆ ಸಮಾಲೋಚನೆ ನಡೆಸಿದರು.</p>.<p>ಆಹಾರ ಸಚಿವ ಟಿ. ಮರಿಯಪ್ಪ ಅವರು ಹಾಜರಿದ್ದರು.</p>.<p>ಕಳೆದ ವಾರಾಂತ್ಯದಲ್ಲಿ ದೆಹಲಿಯಲ್ಲಿ ನಡೆದ ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ದೇಶದ ಆಹಾರ ಪರಿಸ್ಥಿತಿಯನ್ನು ಸುಧಾರಿಸಲು ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದ ಮುಖ್ಯಮಂತ್ರಿ ಅವರು, ಆ ಕ್ರಮಗಳನ್ನು ಯಶಸ್ವಿಯಾಗಿ ಜಾರಿಗೆ ತರಬೇಕೆಂದು ತಿಳಿಸಿದರು.</p>.<p><strong>ಸಮಾನ ಪಠ್ಯಭಾಷೆ ಬಗ್ಗೆ ಸಲಹೆ</strong></p>.<p>ನಾಗಪುರ, ಆಗಸ್ಟ್ 24– ಅಂತರ ವಿಶ್ವವಿದ್ಯಾಲಯ ಮಂಡಳಿಯು ವಿಶ್ವವಿದ್ಯಾಲಯ ಸಮಿತಿಯ ವರದಿಯನ್ನು ಅಂಗೀಕರಿಸಿ ದೇಶದ ಎಲ್ಲಾ ವಿಶ್ವವಿದ್ಯಾಲಯಗಳಿಗೂ ಸಮಾನ ಪಠ್ಯಭಾಷೆಯೊಂದು ಇರುವುದು ಸೂಕ್ತವೆಂದು ಅಭಿಪ್ರಾಯಪಟ್ಟಿದೆ.</p>.<p>ಆದರೆ, ಇಂಗ್ಲಿಷಿಗೆ ಬದಲು ಭಾರತೀಯ ಭಾಷೆಯೊಂದನ್ನು ಅನುಸರಿಸುವಾಗ ವಿದ್ಯಾಭ್ಯಾಸಮಟ್ಟ ಮತ್ತು ವಿದ್ಯಾಭ್ಯಾಸ ಪದ್ಧತಿಗೆ ಧಕ್ಕೆ ತಗುಲದಂತೆ ಎಚ್ಚರಿಕೆಯಿಂದಿರುವುದು ಅಗತ್ಯವೆಂದು ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂಸ್ಥಾನದ ಆಹಾರ ಪರಿಸ್ಥಿತಿ</strong></p>.<p>ಬೆಂಗಳೂರು, ಆಗಸ್ಟ್ 24– ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಅವರು, ಇಂದು ಅವರ ಕಚೇರಿಯಲ್ಲಿ ಸಂಸ್ಥಾನದ ಆಹಾರ ಪರಿಸ್ಥಿತಿ ಬಗ್ಗೆ ಸಂಸ್ಥಾನದ ಜಿಲ್ಲಾಧಿಕಾರಿಗಳೊಡನೆ ಸಮಾಲೋಚನೆ ನಡೆಸಿದರು.</p>.<p>ಆಹಾರ ಸಚಿವ ಟಿ. ಮರಿಯಪ್ಪ ಅವರು ಹಾಜರಿದ್ದರು.</p>.<p>ಕಳೆದ ವಾರಾಂತ್ಯದಲ್ಲಿ ದೆಹಲಿಯಲ್ಲಿ ನಡೆದ ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ದೇಶದ ಆಹಾರ ಪರಿಸ್ಥಿತಿಯನ್ನು ಸುಧಾರಿಸಲು ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದ ಮುಖ್ಯಮಂತ್ರಿ ಅವರು, ಆ ಕ್ರಮಗಳನ್ನು ಯಶಸ್ವಿಯಾಗಿ ಜಾರಿಗೆ ತರಬೇಕೆಂದು ತಿಳಿಸಿದರು.</p>.<p><strong>ಸಮಾನ ಪಠ್ಯಭಾಷೆ ಬಗ್ಗೆ ಸಲಹೆ</strong></p>.<p>ನಾಗಪುರ, ಆಗಸ್ಟ್ 24– ಅಂತರ ವಿಶ್ವವಿದ್ಯಾಲಯ ಮಂಡಳಿಯು ವಿಶ್ವವಿದ್ಯಾಲಯ ಸಮಿತಿಯ ವರದಿಯನ್ನು ಅಂಗೀಕರಿಸಿ ದೇಶದ ಎಲ್ಲಾ ವಿಶ್ವವಿದ್ಯಾಲಯಗಳಿಗೂ ಸಮಾನ ಪಠ್ಯಭಾಷೆಯೊಂದು ಇರುವುದು ಸೂಕ್ತವೆಂದು ಅಭಿಪ್ರಾಯಪಟ್ಟಿದೆ.</p>.<p>ಆದರೆ, ಇಂಗ್ಲಿಷಿಗೆ ಬದಲು ಭಾರತೀಯ ಭಾಷೆಯೊಂದನ್ನು ಅನುಸರಿಸುವಾಗ ವಿದ್ಯಾಭ್ಯಾಸಮಟ್ಟ ಮತ್ತು ವಿದ್ಯಾಭ್ಯಾಸ ಪದ್ಧತಿಗೆ ಧಕ್ಕೆ ತಗುಲದಂತೆ ಎಚ್ಚರಿಕೆಯಿಂದಿರುವುದು ಅಗತ್ಯವೆಂದು ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>