<h3>ಬರ್ಮಾ– ಭಾರತ ಸಾಮರಸ್ಯ ಸಾಧಕರಾಗಿ</h3>.<p>ರಂಗೂನ್, ಜೂನ್ 22– ಭಾರತದ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರೂ ಈ ದಿನ ಬರ್ಮಾದಲ್ಲಿರುವ ಭಾರತೀಯರನ್ನು ಉದ್ದೇಶಿಸಿ ಮಾತನಾಡುತ್ತ, ‘ನೀವುಗಳು ಭಾರತದ ರಾಯಭಾರಿಗಳಂತೆ ವರ್ತಿಸಿ, ಉಭಯ ದೇಶಗಳ ಸಾಮರಸ್ಯ ಹೆಚ್ಚುವಂತೆ ಮಾಡಬೇಕು’ ಎಂದು ಉಪದೇಶ ಮಾಡಿದರು.</p>.<p>ಅರ್ಧಕಾಲ ಹಿಂದಿಯಲ್ಲೂ, ಅರ್ಧಕಾಲ ಇಂಗ್ಲಿಷ್ನಲ್ಲೂ ಭಾಷಣ ಮಾಡಿದ ನೆಹರೂ, ಸ್ವಾತಂತ್ರ್ಯ ತನ್ನ ಜೊತೆಯಲ್ಲಿ ಹೊತ್ತು ತಂದಿರುವ ಜವಾಬ್ದಾರಿಗಳ ಅರಿವು ಮಾಡಿಕೊಳ್ಳಬೇಕೆಂದು ಜನತೆಗೆ ಒತ್ತು ಹೇಳುತ್ತ, ಹೊಸದಾಗಿ ಸ್ವಾತಂತ್ರ್ಯಗಳಿಸಿಕೊಂಡಿರುವ ರಾಷ್ಟ್ರಗಳಲ್ಲಿ ಸಂಪೂರ್ಣ ಐಕಮತ್ಯ ಅಗತ್ಯ ಎಂದರು.</p>.<p>ಅಖಿಲ ಬರ್ಮಾ ಕಾಂಗ್ರೆಸ್ಸಿನ ಆಶ್ರಯದಲ್ಲಿ ಸೇರಿದ್ದ ಈ ಸಭೆಗೆ ಬರ್ಮಾ ಪ್ರಧಾನಿ ಥಾಕಿನ್ ನೂ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾ ಸಚಿವ ಯೂ ಟುನ್ ಪೆ, ನ್ಯಾಯಾಂಗ ಸಚಿವ ಯೂ ಖೀಂ ಮಾಂಗ್, ವಿಶೇಷ ಸೌಕರ್ಯ ಕಲ್ಪನಾ ಸಮಿತಿಯ ಅಧ್ಯಕ್ಷೆ ಆಂಗ್ ಸೇನ್, ಬರ್ಮಾದ ಭಾರತೀಯ ಮುಖಂಡರೂ ವೇದಿಕೆಯ ಮೇಲೆ ಇದ್ದರು.</p>.<h3><strong>ಮುಂಬೈಯಲ್ಲಿ ಬಂದರು ಕಾರ್ಮಿಕರ ಮುಷ್ಕರ</strong></h3>.<p>ಮುಂಬೈ, ಜೂನ್ 22– ಬೋನಸ್ ಪ್ರಶ್ನೆಯನ್ನು ಕುರಿತ ಸಂಭಾಷಣೆ ಫಲಪ್ರದವಾಗದ್ದರಿಂದ ಮುಂಬೈ ಬಂದರು ಕಟ್ಟೆ ಕೆಲಸಗಾರರ ಸಂಘದ ಆರು ಸಹಸ್ರ ಮಂದಿ ಸದಸ್ಯರು ನಾಳೆಯಿಂದ ಅನಿಶ್ಚಿತಾವಧಿಯವರೆಗೆ ಮುಷ್ಕರ ಹೂಡಬೇಕೆಂದು ಈ ದಿನ ನಿರ್ಧರಿಸಿದರು.</p>.<p>ಅಧಿಕಾರೇತರ ರೀತಿಯಲ್ಲಿ ಮುಷ್ಕರದ ವಿಚಾರ ಗೊತ್ತಾದ್ದರಿಂದ ಶಸ್ತ್ರಸಜ್ಜಿತ ಪೊಲೀಸ್ ಪಡೆಗಳು, ನಾಲ್ಕು ಮೈಲಿ ಉದ್ದದ ಮುಂಬೈ ಜಲತಟದ ಮುಖ್ಯ ಸ್ಥಳಗಳಲ್ಲೂ ಬಂದರು ಕಟ್ಟೆಯ ಒಳಗೂ ಪಹರೆ ನಿಂತರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h3>ಬರ್ಮಾ– ಭಾರತ ಸಾಮರಸ್ಯ ಸಾಧಕರಾಗಿ</h3>.<p>ರಂಗೂನ್, ಜೂನ್ 22– ಭಾರತದ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರೂ ಈ ದಿನ ಬರ್ಮಾದಲ್ಲಿರುವ ಭಾರತೀಯರನ್ನು ಉದ್ದೇಶಿಸಿ ಮಾತನಾಡುತ್ತ, ‘ನೀವುಗಳು ಭಾರತದ ರಾಯಭಾರಿಗಳಂತೆ ವರ್ತಿಸಿ, ಉಭಯ ದೇಶಗಳ ಸಾಮರಸ್ಯ ಹೆಚ್ಚುವಂತೆ ಮಾಡಬೇಕು’ ಎಂದು ಉಪದೇಶ ಮಾಡಿದರು.</p>.<p>ಅರ್ಧಕಾಲ ಹಿಂದಿಯಲ್ಲೂ, ಅರ್ಧಕಾಲ ಇಂಗ್ಲಿಷ್ನಲ್ಲೂ ಭಾಷಣ ಮಾಡಿದ ನೆಹರೂ, ಸ್ವಾತಂತ್ರ್ಯ ತನ್ನ ಜೊತೆಯಲ್ಲಿ ಹೊತ್ತು ತಂದಿರುವ ಜವಾಬ್ದಾರಿಗಳ ಅರಿವು ಮಾಡಿಕೊಳ್ಳಬೇಕೆಂದು ಜನತೆಗೆ ಒತ್ತು ಹೇಳುತ್ತ, ಹೊಸದಾಗಿ ಸ್ವಾತಂತ್ರ್ಯಗಳಿಸಿಕೊಂಡಿರುವ ರಾಷ್ಟ್ರಗಳಲ್ಲಿ ಸಂಪೂರ್ಣ ಐಕಮತ್ಯ ಅಗತ್ಯ ಎಂದರು.</p>.<p>ಅಖಿಲ ಬರ್ಮಾ ಕಾಂಗ್ರೆಸ್ಸಿನ ಆಶ್ರಯದಲ್ಲಿ ಸೇರಿದ್ದ ಈ ಸಭೆಗೆ ಬರ್ಮಾ ಪ್ರಧಾನಿ ಥಾಕಿನ್ ನೂ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾ ಸಚಿವ ಯೂ ಟುನ್ ಪೆ, ನ್ಯಾಯಾಂಗ ಸಚಿವ ಯೂ ಖೀಂ ಮಾಂಗ್, ವಿಶೇಷ ಸೌಕರ್ಯ ಕಲ್ಪನಾ ಸಮಿತಿಯ ಅಧ್ಯಕ್ಷೆ ಆಂಗ್ ಸೇನ್, ಬರ್ಮಾದ ಭಾರತೀಯ ಮುಖಂಡರೂ ವೇದಿಕೆಯ ಮೇಲೆ ಇದ್ದರು.</p>.<h3><strong>ಮುಂಬೈಯಲ್ಲಿ ಬಂದರು ಕಾರ್ಮಿಕರ ಮುಷ್ಕರ</strong></h3>.<p>ಮುಂಬೈ, ಜೂನ್ 22– ಬೋನಸ್ ಪ್ರಶ್ನೆಯನ್ನು ಕುರಿತ ಸಂಭಾಷಣೆ ಫಲಪ್ರದವಾಗದ್ದರಿಂದ ಮುಂಬೈ ಬಂದರು ಕಟ್ಟೆ ಕೆಲಸಗಾರರ ಸಂಘದ ಆರು ಸಹಸ್ರ ಮಂದಿ ಸದಸ್ಯರು ನಾಳೆಯಿಂದ ಅನಿಶ್ಚಿತಾವಧಿಯವರೆಗೆ ಮುಷ್ಕರ ಹೂಡಬೇಕೆಂದು ಈ ದಿನ ನಿರ್ಧರಿಸಿದರು.</p>.<p>ಅಧಿಕಾರೇತರ ರೀತಿಯಲ್ಲಿ ಮುಷ್ಕರದ ವಿಚಾರ ಗೊತ್ತಾದ್ದರಿಂದ ಶಸ್ತ್ರಸಜ್ಜಿತ ಪೊಲೀಸ್ ಪಡೆಗಳು, ನಾಲ್ಕು ಮೈಲಿ ಉದ್ದದ ಮುಂಬೈ ಜಲತಟದ ಮುಖ್ಯ ಸ್ಥಳಗಳಲ್ಲೂ ಬಂದರು ಕಟ್ಟೆಯ ಒಳಗೂ ಪಹರೆ ನಿಂತರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>