<p><strong>ವಿಶ್ವಸಂಸ್ಥೆ ಕಮ್ಯುನಿಸ್ಟ್ ಪ್ರಾತಿನಿಧ್ಯಕ್ಕೆ ನೆಹರೂ ಒತ್ತಾಯ</strong></p>.<p>ನವದೆಹಲಿ, ಜುಲೈ– ಭಾರತದ ಪ್ರಧಾನಿ ಪಂಡಿತ ಜವಾಹರ ಲಾಲ್ ನೆಹರೂ ಸೋವಿಯತ್ ರಷ್ಯಾ ಪ್ರಧಾನಿ ಮಾರ್ಷಲ್ ಸ್ಟಾಲಿನ್ರವರಿಗೂ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಡೀನ್ ಅಚಿಸನ್ರವರಿಗೂ ಖಾಸಗಿ ಪತ್ರಗಳನ್ನು ಬರೆದು ಕೊರಿಯನ್ ಕಲಹವನ್ನು ಶಾಂತ ರೀತಿಯಲ್ಲಿ ಬೇಗ ಇತ್ಯರ್ಥಪಡಿಸಬೇಕೆಂದು ಕೋರಿದ್ದಾರೆ.</p>.<p>ಈ ಕುರಿತು ಭಾರತದ ವಿದೇಶಾಂಗ ಸಚಿವ ಶಾಖೆ ಈ ದಿನ ಪ್ರಕಟಿಸಿದೆ. ಬ್ರಿಟಿಷ್ ಪ್ರಧಾನಿ ಕ್ಲೆಮೆಂಟ್ ಆಟ್ಲಯವರೊಂದಿಗೂ ನೇರ ಸಂಪರ್ಕವಿಟ್ಟುಕೊಂಡಿದ್ದಾರೆಂದೂ ಪ್ರಕಟಿಸಲಾಗಿದೆ.</p>.<p>ಸಚಿವ ಶಾಖೆಯ ಪತ್ರಿಕಾ ಪ್ರಕಟಣೆ ‘ಕೊರಿಯಾ ಸಂಗ್ರಾಮ ಆರಂಭವಾದಂದಿನಿಂದಲೂ ಕಲಹದ ಶಾಂತಿಯುತ ಇತ್ಯರ್ಥಕ್ಕಾಗಿ ಭಾರತ, ಲಂಡನ್, ವಾಷಿಂಗ್ಟನ್ ಮತ್ತು ಮಾಸ್ಕೋಗಳಲ್ಲಿರುವ ತನ್ನ ರಾಯಭಾರಿ ಕಚೇರಿಗಳ ಮೂಲಕ ಪ್ರಯತ್ನಿಸುತ್ತಲೇ ಇದೆ.</p>.<p>****</p>.<p><strong>ಕೃಷ್ಣರಾಜಸಾಗರ ವಿಚಾರಣಾ ಸಮಿತಿ ಸಭೆ</strong></p>.<p>ಬೆಂಗಳೂರು, ಜುಲೈ 14– ಇಂದು ಪ್ರಾತಃಕಾಲ ಕೃಷ್ಣರಾಜಸಾಗರ ವಿಚಾರಣಾ ಸಮಿತಿ ಸಮಾವೇಶಗೊಂಡು, ಸಾಗರ ಕೆಲಸ ಮಾಡುತ್ತಿರುವ ಬಗ್ಗೆ ಸರ್ಕಾರ ಒದಗಿಸಿರುವ ಕೆಲವು ಅಂಕಿ ಅಂಶಗಳನ್ನು ಪರಿಶೀಲಿಸಿತು. ಈ ಸಮಿತಿ ಪುನಃ ಜುಲೈ ಅಂತ್ಯಕ್ಕೆ ಸೇರುವುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಶ್ವಸಂಸ್ಥೆ ಕಮ್ಯುನಿಸ್ಟ್ ಪ್ರಾತಿನಿಧ್ಯಕ್ಕೆ ನೆಹರೂ ಒತ್ತಾಯ</strong></p>.<p>ನವದೆಹಲಿ, ಜುಲೈ– ಭಾರತದ ಪ್ರಧಾನಿ ಪಂಡಿತ ಜವಾಹರ ಲಾಲ್ ನೆಹರೂ ಸೋವಿಯತ್ ರಷ್ಯಾ ಪ್ರಧಾನಿ ಮಾರ್ಷಲ್ ಸ್ಟಾಲಿನ್ರವರಿಗೂ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಡೀನ್ ಅಚಿಸನ್ರವರಿಗೂ ಖಾಸಗಿ ಪತ್ರಗಳನ್ನು ಬರೆದು ಕೊರಿಯನ್ ಕಲಹವನ್ನು ಶಾಂತ ರೀತಿಯಲ್ಲಿ ಬೇಗ ಇತ್ಯರ್ಥಪಡಿಸಬೇಕೆಂದು ಕೋರಿದ್ದಾರೆ.</p>.<p>ಈ ಕುರಿತು ಭಾರತದ ವಿದೇಶಾಂಗ ಸಚಿವ ಶಾಖೆ ಈ ದಿನ ಪ್ರಕಟಿಸಿದೆ. ಬ್ರಿಟಿಷ್ ಪ್ರಧಾನಿ ಕ್ಲೆಮೆಂಟ್ ಆಟ್ಲಯವರೊಂದಿಗೂ ನೇರ ಸಂಪರ್ಕವಿಟ್ಟುಕೊಂಡಿದ್ದಾರೆಂದೂ ಪ್ರಕಟಿಸಲಾಗಿದೆ.</p>.<p>ಸಚಿವ ಶಾಖೆಯ ಪತ್ರಿಕಾ ಪ್ರಕಟಣೆ ‘ಕೊರಿಯಾ ಸಂಗ್ರಾಮ ಆರಂಭವಾದಂದಿನಿಂದಲೂ ಕಲಹದ ಶಾಂತಿಯುತ ಇತ್ಯರ್ಥಕ್ಕಾಗಿ ಭಾರತ, ಲಂಡನ್, ವಾಷಿಂಗ್ಟನ್ ಮತ್ತು ಮಾಸ್ಕೋಗಳಲ್ಲಿರುವ ತನ್ನ ರಾಯಭಾರಿ ಕಚೇರಿಗಳ ಮೂಲಕ ಪ್ರಯತ್ನಿಸುತ್ತಲೇ ಇದೆ.</p>.<p>****</p>.<p><strong>ಕೃಷ್ಣರಾಜಸಾಗರ ವಿಚಾರಣಾ ಸಮಿತಿ ಸಭೆ</strong></p>.<p>ಬೆಂಗಳೂರು, ಜುಲೈ 14– ಇಂದು ಪ್ರಾತಃಕಾಲ ಕೃಷ್ಣರಾಜಸಾಗರ ವಿಚಾರಣಾ ಸಮಿತಿ ಸಮಾವೇಶಗೊಂಡು, ಸಾಗರ ಕೆಲಸ ಮಾಡುತ್ತಿರುವ ಬಗ್ಗೆ ಸರ್ಕಾರ ಒದಗಿಸಿರುವ ಕೆಲವು ಅಂಕಿ ಅಂಶಗಳನ್ನು ಪರಿಶೀಲಿಸಿತು. ಈ ಸಮಿತಿ ಪುನಃ ಜುಲೈ ಅಂತ್ಯಕ್ಕೆ ಸೇರುವುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>