ಬೆಂಗಳೂರು, ಜುಲೈ 7– ನಗರದಲ್ಲಿ 10ರಿಂದ ನಡೆಯಲಿರುವ ಎ.ಐ.ಸಿ.ಸಿ. ಅಧಿವೇಶನದಲ್ಲಿ ಭಾಗವಹಿಸಲು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರು ಜುಲೈ 8ರಂದು ಮಧ್ಯಾಹ್ನ 2.10ಕ್ಕೆ ಹಾಗೂ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಜುಲೈ 9ರಂದು ಸಂಜೆ 5.30ಕ್ಕೆ ನಗರಕ್ಕೆ ಆಗಮಿಸುವರು. ವಿಮಾನ ನಿಲ್ದಾಣದಿಂದ, ಕಾಂಗ್ರೆಸ್ ಅಧ್ಯಕ್ಷರು ತಂಗುವ ‘ಕುಮಾರ ಕೃಪಾ’ದವರೆಗೆ ಕಾಂಗ್ರೆಸ್ ಅಧ್ಯಕ್ಷರಿಗೆ ಸ್ವಾಗತ ನೀಡಲು ಕಮಾನುಗಳು ನಿರ್ಮಾಣವಾಗುತ್ತಿವೆ.