ಈರೋಡ್, ನ. 9 (ಯುಎನ್ಐ, ಪಿಟಿಐ)– ಈ ತಿಂಗಳ ಒಂದರಂದು ಅರಣ್ಯ ಇಲಾಖೆಯ ಮೂವರು ಸಿಬ್ಬಂದಿಯನ್ನು ಕುಖ್ಯಾತ ದಂತಚೋರ ವೀರಪ್ಪನ್ ಅಪಹರಿಸಿದ ಬಳಿಕ ಇದೇ ಮೊದಲ ಬಾರಿ ನಾಳೆ ರಾತ್ರಿ ಜಿಲ್ಲಾಧಿಕಾರಿ ಎನ್.ಪಳನಿಯಪ್ಪನ್, ವೀರಪ್ಪನ್ನ ಪ್ರತಿನಿಧಿಯ ಜತೆ ಅಂತಿಯೂರ್ ಅರಣ್ಯ ಅತಿಥಿಗೃಹದಲ್ಲಿ ಮಾತುಕತೆ ನಡೆಸುವ ನಿರೀಕ್ಷೆ ಇದೆ.