<p><strong>ತುಮಕೂರಿನಿಂದ ದೆಹಲಿವರೆಗೆ ಹಬ್ಬಿದ ವೈದ್ಯಕೀಯ ಸೀಟು ವಂಚನೆ ಜಾಲ</strong></p>.<p><strong>ತುಮಕೂರು, ನ. 13– </strong>ಇಲ್ಲಿನ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಕೊಡಿಸುವ ಭರವಸೆ ನೀಡಿ ಇಬ್ಬರಿಂದ 14 ಲಕ್ಷ ರೂಪಾಯಿ ಪಡೆದು ವಂಚಿಸಿದ್ದ ಇಬ್ಬರು ಯುವಕರನ್ನು ತುಮಕೂರು ಪೊಲೀಸರು ಬೆಂಗಳೂರಿನ ಹೋಟೆಲ್ವೊಂದರಲ್ಲಿ ಬಂಧಿಸಿದ್ದಾರೆ.</p>.<p>ಆರೋಪಿಗಳಿಂದ ಸುಮಾರು 20 ಲಕ್ಷ ರೂಪಾಯಿಯ ಡಿಮಾಂಡ್ ಡ್ರಾಫ್ಟ್, ಬೆಂಗಳೂರು ವಿಶ್ವವಿದ್ಯಾಲಯ ಮತ್ತಿತರ ಶಿಕ್ಷಣ ಸಂಸ್ಥೆಗಳ ಲೆಟರ್ಹೆಡ್, ಹೈ ಕಮಿಷನರ್ಗಳ ಪತ್ರ ಮೊದಲಾದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.</p>.<p>ದೇಶದಾದ್ಯಂತ, ಮುಖ್ಯವಾಗಿ ಉತ್ತರದ ರಾಜ್ಯಗಳಲ್ಲಿ ಹರಡಿಕೊಂಡಿರುವ ಈ ವಂಚನೆಯ ಜಾಲದ ಕೇಂದ್ರ ಕಚೇರಿ ರಾಜಧಾನಿಯಲ್ಲಿದ್ದು, ಅಲ್ಲಿನ ವಂಚಕರನ್ನು ಬಂಧಿಸಲು ಪೊಲೀಸ್ ತನಿಖಾದಳ ದೆಹಲಿಗೆ ತೆರಳಿದೆ. ಪೊಲೀಸರು ವಶಪಡಿಸಿಕೊಂಡ ಡಿಮಾಂಡ್ ಡ್ರಾಫ್ಟ್ನಲ್ಲಿ ಮೂರು, ಕಲ್ಬುರ್ಗಿಯ ಹೈದರಾಬಾದ್ ಕರ್ನಾಟಕ ಶಿಕ್ಷಣ ಸೊಸೈಟಿಗೆ ಸೇರಿದ್ದಾಗಿದ್ದು, ಒಂದು, ಬೆಂಗಳೂರಿನ<br />ದಂತ ವೈದ್ಯಕೀಯ ಕಾಲೇಜಿಗೆ ಸಂಬಂಧಿಸಿದ್ದು.</p>.<p><strong>ವೈದ್ಯ ಸೇವೆ ಗ್ರಾಹಕ ಕಾಯ್ದೆ ವ್ಯಾಪ್ತಿಗೆ</strong></p>.<p><strong>ನವದೆಹಲಿ, ನ. 13 (ಯುಎನ್ಐ)–</strong> ವೈದ್ಯಕೀಯ ಸೇವೆಯು ಗ್ರಾಹಕ ರಕ್ಷಣಾ ಕಾಯ್ದೆ ಅಡಿಯ ಸೇವಾ ವಿಭಾಗದಲ್ಲಿ ಒಳಗೊಳ್ಳುವುದು ಎಂದು ಸುಪ್ರೀಂ ಕೋರ್ಟ್ ಇಂದು ಐತಿಹಾಸಿಕ ತೀರ್ಪು ನೀಡಿದೆ.</p>.<p>ಉಚಿತ ಚಿಕಿತ್ಸೆ ಅಥವಾ ವೈಯಕ್ತಿಕ ಗುತ್ತಿಗೆ ಸೇವೆಗಳ ಹೊರತಾಗಿ ಉಳಿದಂತೆ ವೈದ್ಯರು ನೀಡುವ ಎಲ್ಲಾ ತರದ ಸೇವೆಗಳು ಈ ಕಾಯ್ದೆ ವ್ಯಾಪ್ತಿಗೆ ಸೇರುತ್ತವೆ ಎಂದು ನ್ಯಾಯಾಲಯ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರಿನಿಂದ ದೆಹಲಿವರೆಗೆ ಹಬ್ಬಿದ ವೈದ್ಯಕೀಯ ಸೀಟು ವಂಚನೆ ಜಾಲ</strong></p>.<p><strong>ತುಮಕೂರು, ನ. 13– </strong>ಇಲ್ಲಿನ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಕೊಡಿಸುವ ಭರವಸೆ ನೀಡಿ ಇಬ್ಬರಿಂದ 14 ಲಕ್ಷ ರೂಪಾಯಿ ಪಡೆದು ವಂಚಿಸಿದ್ದ ಇಬ್ಬರು ಯುವಕರನ್ನು ತುಮಕೂರು ಪೊಲೀಸರು ಬೆಂಗಳೂರಿನ ಹೋಟೆಲ್ವೊಂದರಲ್ಲಿ ಬಂಧಿಸಿದ್ದಾರೆ.</p>.<p>ಆರೋಪಿಗಳಿಂದ ಸುಮಾರು 20 ಲಕ್ಷ ರೂಪಾಯಿಯ ಡಿಮಾಂಡ್ ಡ್ರಾಫ್ಟ್, ಬೆಂಗಳೂರು ವಿಶ್ವವಿದ್ಯಾಲಯ ಮತ್ತಿತರ ಶಿಕ್ಷಣ ಸಂಸ್ಥೆಗಳ ಲೆಟರ್ಹೆಡ್, ಹೈ ಕಮಿಷನರ್ಗಳ ಪತ್ರ ಮೊದಲಾದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.</p>.<p>ದೇಶದಾದ್ಯಂತ, ಮುಖ್ಯವಾಗಿ ಉತ್ತರದ ರಾಜ್ಯಗಳಲ್ಲಿ ಹರಡಿಕೊಂಡಿರುವ ಈ ವಂಚನೆಯ ಜಾಲದ ಕೇಂದ್ರ ಕಚೇರಿ ರಾಜಧಾನಿಯಲ್ಲಿದ್ದು, ಅಲ್ಲಿನ ವಂಚಕರನ್ನು ಬಂಧಿಸಲು ಪೊಲೀಸ್ ತನಿಖಾದಳ ದೆಹಲಿಗೆ ತೆರಳಿದೆ. ಪೊಲೀಸರು ವಶಪಡಿಸಿಕೊಂಡ ಡಿಮಾಂಡ್ ಡ್ರಾಫ್ಟ್ನಲ್ಲಿ ಮೂರು, ಕಲ್ಬುರ್ಗಿಯ ಹೈದರಾಬಾದ್ ಕರ್ನಾಟಕ ಶಿಕ್ಷಣ ಸೊಸೈಟಿಗೆ ಸೇರಿದ್ದಾಗಿದ್ದು, ಒಂದು, ಬೆಂಗಳೂರಿನ<br />ದಂತ ವೈದ್ಯಕೀಯ ಕಾಲೇಜಿಗೆ ಸಂಬಂಧಿಸಿದ್ದು.</p>.<p><strong>ವೈದ್ಯ ಸೇವೆ ಗ್ರಾಹಕ ಕಾಯ್ದೆ ವ್ಯಾಪ್ತಿಗೆ</strong></p>.<p><strong>ನವದೆಹಲಿ, ನ. 13 (ಯುಎನ್ಐ)–</strong> ವೈದ್ಯಕೀಯ ಸೇವೆಯು ಗ್ರಾಹಕ ರಕ್ಷಣಾ ಕಾಯ್ದೆ ಅಡಿಯ ಸೇವಾ ವಿಭಾಗದಲ್ಲಿ ಒಳಗೊಳ್ಳುವುದು ಎಂದು ಸುಪ್ರೀಂ ಕೋರ್ಟ್ ಇಂದು ಐತಿಹಾಸಿಕ ತೀರ್ಪು ನೀಡಿದೆ.</p>.<p>ಉಚಿತ ಚಿಕಿತ್ಸೆ ಅಥವಾ ವೈಯಕ್ತಿಕ ಗುತ್ತಿಗೆ ಸೇವೆಗಳ ಹೊರತಾಗಿ ಉಳಿದಂತೆ ವೈದ್ಯರು ನೀಡುವ ಎಲ್ಲಾ ತರದ ಸೇವೆಗಳು ಈ ಕಾಯ್ದೆ ವ್ಯಾಪ್ತಿಗೆ ಸೇರುತ್ತವೆ ಎಂದು ನ್ಯಾಯಾಲಯ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>