ಬೆಂಗಳೂರು, ನ. 21–ಸರ್ಕಾರಿ ಗ್ರೂಪ್ ‘ಡಿ’ ನೌಕರರು, ಹಮಾಲರು, ನೇಕಾರರು, ದೇವದಾಸಿಯರು ಹಾಗೂ ಬಡವರಿಗೆ ಮುಂದಿನ ಜೂನ್ ಅಂತ್ಯದೊಳಗೆ 1.75ಲಕ್ಷ ನಿವೇಶನ ಮತ್ತು ವಿವಿಧ ಕಾರ್ಯಕ್ರಮಗಳಡಿ 1.26ಲಕ್ಷ ಮನೆಗಳ ಹಂಚಿಕೆ, ಗ್ರಾಮಾಂತರ ಪ್ರದೇಶಗಳಲ್ಲಿ ವೈದ್ಯರ ಖಾಲಿ ಹುದ್ದೆಗೆ ಒಂದು ತಿಂಗಳಲ್ಲಿ ಗುತ್ತಿಗೆ ಮೇಲೆ ನೇಮಕಾತಿ, ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್ಗಳಲ್ಲಿ ವಿದ್ಯಾರ್ಥಿನಿಯರಿಗೆ ಶೇ 30ರಷ್ಟು ಮೀಸಲು–ಇವು ರಾಜ್ಯ ಸಚಿವ ಸಂಪುಟ ಇಂದು ಕೈಗೊಂಡ ಪ್ರಮುಖ ನಿರ್ಧಾರಗಳು.