<p><strong>ವೀರಪ್ಪನ್ ಪ್ರಕರಣ: ದ್ವಂದ್ವದಲ್ಲಿ ಸರ್ಕಾರ</strong></p>.<p>ಈರೋಡ್, ನ. 15 (ಪಿಟಿಐ, ಯುಎನ್ಐ)– ಒತ್ತೆಯಾಳುಗಳ ಬಿಡುಗಡೆಗೆ ಮೂರು ಕೋಟಿ ರೂಪಾಯಿಗಳನ್ನು ನೀಡಬೇಕೆಂಬ ತನ್ನ ಷರತ್ತಿಗೆ ಪ್ರತಿಕ್ರಿಯಿಸಲು ತಮಿಳುನಾಡು ಸರ್ಕಾರಕ್ಕೆ ವೀರಪ್ಪನ್ ನೀಡಿರುವ ಗಡುವು ಇಂದು ಸಂಜೆಗೆ ಅಂತ್ಯವಾಗಿದ್ದು, ಸರ್ಕಾರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ವಿಫಲವಾಗಿದೆ.</p>.<p>ಈ ಸಮಸ್ಯೆಯನ್ನು ನಿವಾರಿಸಲು ಮುಂದಿನ ಕಾರ್ಯಯೋಜನೆಯ ಬಗೆಗೆ ಸರ್ಕಾರ ಯೋಚಿಸುತ್ತಿದ್ದು, ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ವೀರಪ್ಪನ್ಗೆ ಹಣ ನೀಡುವ ಕುರಿತು ಸರ್ಕಾರದೊಳಗೆ ಭಿನ್ನಾಭಿಪ್ರಾಯಗಳಿವೆ.</p>.<p>ಈ ಮಧ್ಯೆ, ಒತ್ತೆಯಾಳುಗಳ ರಕ್ಷಣೆಗಾಗಿ ಪೊಲೀಸ್ ಪಡೆ ಸಿದ್ಧವಾಗಿದ್ದು, ಸರ್ಕಾರದ ಆದೇಶಕ್ಕೆ ಎದುರು ನೋಡುತ್ತಿದೆ ಎಂದು ತಿಳಿದುಬಂದಿದೆ.</p>.<p><strong>ಹಣ ಹೊರುವ ರಹಸ್ಯ</strong></p>.<p>ಮ್ಯೂನಿಚ್, ನ. 15 (ಎಪಿ)– ಇಲ್ಲಿ 80 ವರ್ಷದ ಮಹಿಳೆಯೊಬ್ಬಳು ಹಣದ ಹೊರೆ ಹೊತ್ತು ವಾಕಿಂಗ್ ಹೋಗುತ್ತಾಳೆ.</p>.<p>ಬ್ಯಾಂಕ್ನಲ್ಲಿ ವಿಶ್ವಾಸ ಇಲ್ಲದ ಈಕೆ ತನ್ನ ಜೀವಾವಧಿ ಉಳಿತಾಯವನ್ನು ಸದಾ ಹೊತ್ತು ತಿರುಗಾಡುತ್ತಾಳೆ. ಸುಮಾರು 1.18 ಲಕ್ಷ ಡಾಲರ್ಗಳನ್ನು ಹೊತ್ತು ಷಾಪಿಂಗ್ಗೆ ಬಂದಾಗ ಆಶ್ಚರ್ಯಚಕಿತನಾದ ಕ್ಯಾಷಿಯರ್ ಪೊಲೀಸರಿಗೆ ತಿಳಿಸಿ, ವಿಚಾರಿಸಿದಾಗ ರಹಸ್ಯ ಬಯಲಾಯಿತು.</p>.<p><strong>ಜಿಲ್ಲಾ ಕಾಂಗೈ ಸಮಿತಿ ರಚನೆಗೆ ಕಸರತ್ತು</strong></p>.<p>ನವದೆಹಲಿ, ನ. 15– ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ನಾಯ್ಕರ್ ಅವರು ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಪುನರ್ರಚನೆ ಪಟ್ಟಿಯನ್ನು ಎಐಸಿಸಿ ಒಪ್ಪಿಗೆಗಾಗಿ ಸಲ್ಲಿಸಿದ್ದು ಅದರ ಬಗೆಗೆ ದೆಹಲಿಯಲ್ಲೀಗ ಲಾಬಿ ಪ್ರಾರಂಭವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವೀರಪ್ಪನ್ ಪ್ರಕರಣ: ದ್ವಂದ್ವದಲ್ಲಿ ಸರ್ಕಾರ</strong></p>.<p>ಈರೋಡ್, ನ. 15 (ಪಿಟಿಐ, ಯುಎನ್ಐ)– ಒತ್ತೆಯಾಳುಗಳ ಬಿಡುಗಡೆಗೆ ಮೂರು ಕೋಟಿ ರೂಪಾಯಿಗಳನ್ನು ನೀಡಬೇಕೆಂಬ ತನ್ನ ಷರತ್ತಿಗೆ ಪ್ರತಿಕ್ರಿಯಿಸಲು ತಮಿಳುನಾಡು ಸರ್ಕಾರಕ್ಕೆ ವೀರಪ್ಪನ್ ನೀಡಿರುವ ಗಡುವು ಇಂದು ಸಂಜೆಗೆ ಅಂತ್ಯವಾಗಿದ್ದು, ಸರ್ಕಾರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ವಿಫಲವಾಗಿದೆ.</p>.<p>ಈ ಸಮಸ್ಯೆಯನ್ನು ನಿವಾರಿಸಲು ಮುಂದಿನ ಕಾರ್ಯಯೋಜನೆಯ ಬಗೆಗೆ ಸರ್ಕಾರ ಯೋಚಿಸುತ್ತಿದ್ದು, ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ವೀರಪ್ಪನ್ಗೆ ಹಣ ನೀಡುವ ಕುರಿತು ಸರ್ಕಾರದೊಳಗೆ ಭಿನ್ನಾಭಿಪ್ರಾಯಗಳಿವೆ.</p>.<p>ಈ ಮಧ್ಯೆ, ಒತ್ತೆಯಾಳುಗಳ ರಕ್ಷಣೆಗಾಗಿ ಪೊಲೀಸ್ ಪಡೆ ಸಿದ್ಧವಾಗಿದ್ದು, ಸರ್ಕಾರದ ಆದೇಶಕ್ಕೆ ಎದುರು ನೋಡುತ್ತಿದೆ ಎಂದು ತಿಳಿದುಬಂದಿದೆ.</p>.<p><strong>ಹಣ ಹೊರುವ ರಹಸ್ಯ</strong></p>.<p>ಮ್ಯೂನಿಚ್, ನ. 15 (ಎಪಿ)– ಇಲ್ಲಿ 80 ವರ್ಷದ ಮಹಿಳೆಯೊಬ್ಬಳು ಹಣದ ಹೊರೆ ಹೊತ್ತು ವಾಕಿಂಗ್ ಹೋಗುತ್ತಾಳೆ.</p>.<p>ಬ್ಯಾಂಕ್ನಲ್ಲಿ ವಿಶ್ವಾಸ ಇಲ್ಲದ ಈಕೆ ತನ್ನ ಜೀವಾವಧಿ ಉಳಿತಾಯವನ್ನು ಸದಾ ಹೊತ್ತು ತಿರುಗಾಡುತ್ತಾಳೆ. ಸುಮಾರು 1.18 ಲಕ್ಷ ಡಾಲರ್ಗಳನ್ನು ಹೊತ್ತು ಷಾಪಿಂಗ್ಗೆ ಬಂದಾಗ ಆಶ್ಚರ್ಯಚಕಿತನಾದ ಕ್ಯಾಷಿಯರ್ ಪೊಲೀಸರಿಗೆ ತಿಳಿಸಿ, ವಿಚಾರಿಸಿದಾಗ ರಹಸ್ಯ ಬಯಲಾಯಿತು.</p>.<p><strong>ಜಿಲ್ಲಾ ಕಾಂಗೈ ಸಮಿತಿ ರಚನೆಗೆ ಕಸರತ್ತು</strong></p>.<p>ನವದೆಹಲಿ, ನ. 15– ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ನಾಯ್ಕರ್ ಅವರು ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಪುನರ್ರಚನೆ ಪಟ್ಟಿಯನ್ನು ಎಐಸಿಸಿ ಒಪ್ಪಿಗೆಗಾಗಿ ಸಲ್ಲಿಸಿದ್ದು ಅದರ ಬಗೆಗೆ ದೆಹಲಿಯಲ್ಲೀಗ ಲಾಬಿ ಪ್ರಾರಂಭವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>