<h2>ಕಾಸರಗೋಡು ಮುಗಿದ ಅಧ್ಯಾಯ: ನಾಯನಾರ್</h2>.<p><strong>ಕಾಸರಗೋಡು, ಜ. 13–</strong> ಕರ್ನಾಟಕದೊಂದಿಗೆ ಕಾಸರಗೋಡನ್ನು ವಿಲೀನಗೊಳಿಸುವ ವಿಷಯ ಮುಗಿದ ಅಧ್ಯಾಯ ಎಂದು ಕೇರಳದ ಮುಖ್ಯಮಂತ್ರಿ ಹಾಗೂ ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯ ಇ.ಕೆ. ನಾಯನಾರ್ ಇಂದು ಹೇಳಿದ್ದಾರೆ.</p>.<p>ಮಂಗಳೂರಿನಲ್ಲಿ ನಿನ್ನೆ ಕೇಂದ್ರ ಸರ್ಕಾರದ ವಿರುದ್ಧದ ಸಿಪಿಎಂ ಪಕ್ಷದ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದ ಅವರು, ಇಂದು ಕಾಞಂಗಾಡ್ನಲ್ಲಿ ಮಾತನಾಡಿದರು.</p>.<p>ಮಹಾಜನ ಆಯೋಗದ ವರದಿ ಜಾರಿಗೆ ಈಗ ಅರ್ಥವಿಲ್ಲ. ಕಾಸರಗೋಡು ಕೇರಳದ ಅವಿಭಾಜ್ಯ ಅಂಗ. 1956ರಲ್ಲಿ ಆಯಾ ರಾಜ್ಯಗಳ ಗಡಿ ನಿರ್ಣಯವಾದ ನಂತರ ಮತ್ತೆ ಈ ವಿಷಯವನ್ನು ಕೆದಕುವ ಅಗತ್ಯವಿಲ್ಲ. ಬೆಳಗಾವಿಯನ್ನು ಮಹಾರಾಷ್ಟ್ರದೊಂದಿಗೆ ವಿಲೀನ ಮಾಡಬೇಕೆಂದು ಮಹಾರಾಷ್ಟ್ರ ಸರ್ಕಾರವು ಹಲವು ಬಾರಿ ಮಾಡಿದ ಮನವಿಯನ್ನು ಕರ್ನಾಟಕ ತಿರಸ್ಕರಿಸಿದೆ. ಹಾಗಿರುವಾಗ ಕಾಸರಗೋಡು ವಿಲೀನ ಪ್ರಶ್ನೆಯನ್ನು ಈಗ ಎತ್ತುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2>ಕಾಸರಗೋಡು ಮುಗಿದ ಅಧ್ಯಾಯ: ನಾಯನಾರ್</h2>.<p><strong>ಕಾಸರಗೋಡು, ಜ. 13–</strong> ಕರ್ನಾಟಕದೊಂದಿಗೆ ಕಾಸರಗೋಡನ್ನು ವಿಲೀನಗೊಳಿಸುವ ವಿಷಯ ಮುಗಿದ ಅಧ್ಯಾಯ ಎಂದು ಕೇರಳದ ಮುಖ್ಯಮಂತ್ರಿ ಹಾಗೂ ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯ ಇ.ಕೆ. ನಾಯನಾರ್ ಇಂದು ಹೇಳಿದ್ದಾರೆ.</p>.<p>ಮಂಗಳೂರಿನಲ್ಲಿ ನಿನ್ನೆ ಕೇಂದ್ರ ಸರ್ಕಾರದ ವಿರುದ್ಧದ ಸಿಪಿಎಂ ಪಕ್ಷದ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದ ಅವರು, ಇಂದು ಕಾಞಂಗಾಡ್ನಲ್ಲಿ ಮಾತನಾಡಿದರು.</p>.<p>ಮಹಾಜನ ಆಯೋಗದ ವರದಿ ಜಾರಿಗೆ ಈಗ ಅರ್ಥವಿಲ್ಲ. ಕಾಸರಗೋಡು ಕೇರಳದ ಅವಿಭಾಜ್ಯ ಅಂಗ. 1956ರಲ್ಲಿ ಆಯಾ ರಾಜ್ಯಗಳ ಗಡಿ ನಿರ್ಣಯವಾದ ನಂತರ ಮತ್ತೆ ಈ ವಿಷಯವನ್ನು ಕೆದಕುವ ಅಗತ್ಯವಿಲ್ಲ. ಬೆಳಗಾವಿಯನ್ನು ಮಹಾರಾಷ್ಟ್ರದೊಂದಿಗೆ ವಿಲೀನ ಮಾಡಬೇಕೆಂದು ಮಹಾರಾಷ್ಟ್ರ ಸರ್ಕಾರವು ಹಲವು ಬಾರಿ ಮಾಡಿದ ಮನವಿಯನ್ನು ಕರ್ನಾಟಕ ತಿರಸ್ಕರಿಸಿದೆ. ಹಾಗಿರುವಾಗ ಕಾಸರಗೋಡು ವಿಲೀನ ಪ್ರಶ್ನೆಯನ್ನು ಈಗ ಎತ್ತುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>