<p><strong>ಈಶಾನ್ಯ ರಾಜ್ಯಗಳಲ್ಲಿ ಬಹಿಷ್ಕಾರ ಹಿಂಸೆ ಮಧ್ಯೆ ಗಣರಾಜ್ಯೋತ್ಸವ</strong></p>.<p><strong>ಗುವಾಹಟಿ, ಜ. 26 (ಪಿಟಿಐ)–</strong> ಹಿಂಸಾಚಾರ, ಬಹಿಷ್ಕಾರ ಹಾಗೂ ಬಂದ್ಗಳ ನಡುವೆಯೇ ಇಂದು ದೇಶದಾದ್ಯಂತ 49ನೇ ಗಣರಾಜ್ಯೋತ್ಸವ ಆಚರಿಸಲಾಯಿತು.</p>.<p>ಅಸ್ಸಾಂನಲ್ಲಿ ಉಲ್ಫಾ ಹಾಗೂ ಎನ್ಡಿಎಫ್ಬಿ ಗಣರಾಜ್ಯೋತ್ಸವ ಬಹಿಷ್ಕರಿಸಲು ಕರೆ ನೀಡಿದ್ದ 12 ಗಂಟೆಗಳ ಬಂದ್ ವೇಳೆಯಲ್ಲಿ ಸುರಭೋಗ್ ರೈಲ್ವೆ ನಿಲ್ದಾಣಕ್ಕೆ ಬೆಂಕಿ ಹಚ್ಚಲಾಯಿತು.</p>.<p>ಬಾರ್ಪೇಟೆ ಜಿಲ್ಲೆಯ ನಿಲ್ದಾಣಕ್ಕೆ ಬೆಂಕಿ ಹಚ್ಚಿದ ಉಗ್ರಗಾಮಿಗಳು ಹಲವು ದಾಖಲೆಗಳನ್ನು ನಾಶಪಡಿಸಿದರಲ್ಲದೆ, ದೂರವಾಣಿ ತಂತಿಗಳನ್ನು ಕತ್ತರಿಸಿದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.</p>.<p><strong>ಉಗ್ರಗಾಮಿಗಳಿಂದ 23 ಕಾಶ್ಮೀರಿ ಪಂಡಿತರ ಹತ್ಯೆ</strong></p>.<p><strong>ಶ್ರೀನಗರ, ಜ. 26 (ಯುಎನ್ಐ, ಪಿಟಿಐ)–</strong> ಶ್ರೀನಗರದ ಹೊರವಲಯದಲ್ಲಿ ಬಂದೂಕುಗಳಿಂದ ಸಜ್ಜಿತರಾದ ಉಗ್ರಗಾಮಿಗಳು ಭಾನುವಾರ ರಾತ್ರಿ ಮನಸ್ವೇಚ್ಛೆ ಗುಂಡು ಹಾರಿಸಿ ಕನಿಷ್ಠ 23 ಮಂದಿ ಕಾಶ್ಮೀರಿ ಪಂಡಿತರನ್ನು ಕಗ್ಗೊಲೆ ಮಾಡಿರುವ ದಾರುಣ ಘಟನೆ ವರದಿಯಾಗಿದೆ.</p>.<p>ತಮ್ಮ ಜನಾಂಗದವರ ಕಗ್ಗೊಲೆಯನ್ನು ಪ್ರತಿಭಟಿಸಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಕಾಶ್ಮೀರ ಪಂಡಿತರು ಹೇಳಿದ್ದಾರೆ.</p>.<p>ಅಧಿಕೃತ ಮೂಲಗಳ ಪ್ರಕಾರ, ಉಗ್ರಗಾಮಿಗಳು ಶ್ರೀನಗರದಿಂದ 26 ಕಿ.ಮೀ. ದೂರದಲ್ಲಿರುವ ವಂಧಾಮ ಗ್ರಾಮದಲ್ಲಿ ಗುಂಡಿನ ಸುರಿಮಳೆಗೈದಿದ್ದರು. ದಾಳಿಯಲ್ಲಿ ಸತ್ತವರ ಪೈಕಿ ಒಂಬತ್ತು ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿದ್ದಾರೆ.</p>.<p><strong>‘ಭಾರತ ಸಮ್ಮಾನ’ ಪ್ರಶಸ್ತಿ</strong></p>.<p><strong>ನವದೆಹಲಿ, ಜ. 26 (ಪಿಟಿಐ)–</strong> ಭಾರತದ ಕುರಿತಾಗಿ ವಿದೇಶಗಳಲ್ಲಿ ಉತ್ತಮ ತಿಳಿವಳಿಕೆ ನೀಡಲು ಶ್ರಮಿಸುವವರಿಗೆ ಕೊಡಲು ‘ಭಾರತ ಸಮ್ಮಾನ’ ಪ್ರಶಸ್ತಿಯನ್ನು ಸರ್ಕಾರ ಸ್ಥಾಪಿಸಿದೆ.</p>.<p>ದೇಶದ ಸುವರ್ಣ ಸ್ವಾತಂತ್ರ್ಯದ ಸಂದರ್ಭದಲ್ಲಿ ಆರಂಭಿಸಲಾಗಿರುವ ಈ ಪ್ರಶಸ್ತಿಗೆ ವಿದೇಶಿಯರಲ್ಲದೆ, ವಿದೇಶಗಳಲ್ಲಿ ನೆಲೆಸಿರುವ ಭಾರತೀಯರೂ ಭಾರತೀಯ ಸಂಜಾತರೂ ಅರ್ಹರಾಗಿರುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಈಶಾನ್ಯ ರಾಜ್ಯಗಳಲ್ಲಿ ಬಹಿಷ್ಕಾರ ಹಿಂಸೆ ಮಧ್ಯೆ ಗಣರಾಜ್ಯೋತ್ಸವ</strong></p>.<p><strong>ಗುವಾಹಟಿ, ಜ. 26 (ಪಿಟಿಐ)–</strong> ಹಿಂಸಾಚಾರ, ಬಹಿಷ್ಕಾರ ಹಾಗೂ ಬಂದ್ಗಳ ನಡುವೆಯೇ ಇಂದು ದೇಶದಾದ್ಯಂತ 49ನೇ ಗಣರಾಜ್ಯೋತ್ಸವ ಆಚರಿಸಲಾಯಿತು.</p>.<p>ಅಸ್ಸಾಂನಲ್ಲಿ ಉಲ್ಫಾ ಹಾಗೂ ಎನ್ಡಿಎಫ್ಬಿ ಗಣರಾಜ್ಯೋತ್ಸವ ಬಹಿಷ್ಕರಿಸಲು ಕರೆ ನೀಡಿದ್ದ 12 ಗಂಟೆಗಳ ಬಂದ್ ವೇಳೆಯಲ್ಲಿ ಸುರಭೋಗ್ ರೈಲ್ವೆ ನಿಲ್ದಾಣಕ್ಕೆ ಬೆಂಕಿ ಹಚ್ಚಲಾಯಿತು.</p>.<p>ಬಾರ್ಪೇಟೆ ಜಿಲ್ಲೆಯ ನಿಲ್ದಾಣಕ್ಕೆ ಬೆಂಕಿ ಹಚ್ಚಿದ ಉಗ್ರಗಾಮಿಗಳು ಹಲವು ದಾಖಲೆಗಳನ್ನು ನಾಶಪಡಿಸಿದರಲ್ಲದೆ, ದೂರವಾಣಿ ತಂತಿಗಳನ್ನು ಕತ್ತರಿಸಿದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.</p>.<p><strong>ಉಗ್ರಗಾಮಿಗಳಿಂದ 23 ಕಾಶ್ಮೀರಿ ಪಂಡಿತರ ಹತ್ಯೆ</strong></p>.<p><strong>ಶ್ರೀನಗರ, ಜ. 26 (ಯುಎನ್ಐ, ಪಿಟಿಐ)–</strong> ಶ್ರೀನಗರದ ಹೊರವಲಯದಲ್ಲಿ ಬಂದೂಕುಗಳಿಂದ ಸಜ್ಜಿತರಾದ ಉಗ್ರಗಾಮಿಗಳು ಭಾನುವಾರ ರಾತ್ರಿ ಮನಸ್ವೇಚ್ಛೆ ಗುಂಡು ಹಾರಿಸಿ ಕನಿಷ್ಠ 23 ಮಂದಿ ಕಾಶ್ಮೀರಿ ಪಂಡಿತರನ್ನು ಕಗ್ಗೊಲೆ ಮಾಡಿರುವ ದಾರುಣ ಘಟನೆ ವರದಿಯಾಗಿದೆ.</p>.<p>ತಮ್ಮ ಜನಾಂಗದವರ ಕಗ್ಗೊಲೆಯನ್ನು ಪ್ರತಿಭಟಿಸಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಕಾಶ್ಮೀರ ಪಂಡಿತರು ಹೇಳಿದ್ದಾರೆ.</p>.<p>ಅಧಿಕೃತ ಮೂಲಗಳ ಪ್ರಕಾರ, ಉಗ್ರಗಾಮಿಗಳು ಶ್ರೀನಗರದಿಂದ 26 ಕಿ.ಮೀ. ದೂರದಲ್ಲಿರುವ ವಂಧಾಮ ಗ್ರಾಮದಲ್ಲಿ ಗುಂಡಿನ ಸುರಿಮಳೆಗೈದಿದ್ದರು. ದಾಳಿಯಲ್ಲಿ ಸತ್ತವರ ಪೈಕಿ ಒಂಬತ್ತು ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿದ್ದಾರೆ.</p>.<p><strong>‘ಭಾರತ ಸಮ್ಮಾನ’ ಪ್ರಶಸ್ತಿ</strong></p>.<p><strong>ನವದೆಹಲಿ, ಜ. 26 (ಪಿಟಿಐ)–</strong> ಭಾರತದ ಕುರಿತಾಗಿ ವಿದೇಶಗಳಲ್ಲಿ ಉತ್ತಮ ತಿಳಿವಳಿಕೆ ನೀಡಲು ಶ್ರಮಿಸುವವರಿಗೆ ಕೊಡಲು ‘ಭಾರತ ಸಮ್ಮಾನ’ ಪ್ರಶಸ್ತಿಯನ್ನು ಸರ್ಕಾರ ಸ್ಥಾಪಿಸಿದೆ.</p>.<p>ದೇಶದ ಸುವರ್ಣ ಸ್ವಾತಂತ್ರ್ಯದ ಸಂದರ್ಭದಲ್ಲಿ ಆರಂಭಿಸಲಾಗಿರುವ ಈ ಪ್ರಶಸ್ತಿಗೆ ವಿದೇಶಿಯರಲ್ಲದೆ, ವಿದೇಶಗಳಲ್ಲಿ ನೆಲೆಸಿರುವ ಭಾರತೀಯರೂ ಭಾರತೀಯ ಸಂಜಾತರೂ ಅರ್ಹರಾಗಿರುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>