ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ| ಮಂಗಳವಾರ, 27–1–1998

Last Updated 26 ಜನವರಿ 2023, 19:30 IST
ಅಕ್ಷರ ಗಾತ್ರ

ಈಶಾನ್ಯ ರಾಜ್ಯಗಳಲ್ಲಿ ಬಹಿಷ್ಕಾರ ಹಿಂಸೆ ಮಧ್ಯೆ ಗಣರಾಜ್ಯೋತ್ಸವ

ಗುವಾಹಟಿ, ಜ. 26 (ಪಿಟಿಐ)– ಹಿಂಸಾಚಾರ, ಬಹಿಷ್ಕಾರ ಹಾಗೂ ಬಂದ್‌ಗಳ ನಡುವೆಯೇ ಇಂದು ದೇಶದಾದ್ಯಂತ 49ನೇ ಗಣರಾಜ್ಯೋತ್ಸವ ಆಚರಿಸಲಾಯಿತು.

ಅಸ್ಸಾಂನಲ್ಲಿ ಉಲ್ಫಾ ಹಾಗೂ ಎನ್‌ಡಿಎಫ್‌ಬಿ ಗಣರಾಜ್ಯೋತ್ಸವ ಬಹಿಷ್ಕರಿಸಲು ಕರೆ ನೀಡಿದ್ದ 12 ಗಂಟೆಗಳ ಬಂದ್‌ ವೇಳೆಯಲ್ಲಿ ಸುರಭೋಗ್‌ ರೈಲ್ವೆ ನಿಲ್ದಾಣಕ್ಕೆ ಬೆಂಕಿ ಹಚ್ಚಲಾಯಿತು.

ಬಾರ್ಪೇಟೆ ಜಿಲ್ಲೆಯ ನಿಲ್ದಾಣಕ್ಕೆ ಬೆಂಕಿ ಹಚ್ಚಿದ ಉಗ್ರಗಾಮಿಗಳು ಹಲವು ದಾಖಲೆಗಳನ್ನು ನಾಶಪಡಿಸಿದರಲ್ಲದೆ, ದೂರವಾಣಿ ತಂತಿಗಳನ್ನು ಕತ್ತರಿಸಿದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಉಗ್ರಗಾಮಿಗಳಿಂದ 23 ಕಾಶ್ಮೀರಿ ಪಂಡಿತರ ಹತ್ಯೆ

ಶ್ರೀನಗರ, ಜ. 26 (ಯುಎನ್‌ಐ, ಪಿಟಿಐ)– ಶ್ರೀನಗರದ ಹೊರವಲಯದಲ್ಲಿ ಬಂದೂಕುಗಳಿಂದ ಸಜ್ಜಿತರಾದ ಉಗ್ರಗಾಮಿಗಳು ಭಾನುವಾರ ರಾತ್ರಿ ಮನಸ್ವೇಚ್ಛೆ ಗುಂಡು ಹಾರಿಸಿ ಕನಿಷ್ಠ 23 ಮಂದಿ ಕಾಶ್ಮೀರಿ ಪಂಡಿತರನ್ನು ಕಗ್ಗೊಲೆ ಮಾಡಿರುವ ದಾರುಣ ಘಟನೆ ವರದಿಯಾಗಿದೆ.

ತಮ್ಮ ಜನಾಂಗದವರ ಕಗ್ಗೊಲೆಯನ್ನು ಪ್ರತಿಭಟಿಸಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಕಾಶ್ಮೀರ ಪಂಡಿತರು ಹೇಳಿದ್ದಾರೆ.

ಅಧಿಕೃತ ಮೂಲಗಳ ಪ್ರಕಾರ, ಉಗ್ರಗಾಮಿಗಳು ಶ್ರೀನಗರದಿಂದ 26 ಕಿ.ಮೀ. ದೂರದಲ್ಲಿರುವ ವಂಧಾಮ ಗ್ರಾಮದಲ್ಲಿ ಗುಂಡಿನ ಸುರಿಮಳೆಗೈದಿದ್ದರು. ದಾಳಿಯಲ್ಲಿ ಸತ್ತವರ ಪೈಕಿ ಒಂಬತ್ತು ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿದ್ದಾರೆ.

‘ಭಾರತ ಸಮ್ಮಾನ’ ಪ್ರಶಸ್ತಿ

ನವದೆಹಲಿ, ಜ. 26 (ಪಿಟಿಐ)– ಭಾರತದ ಕುರಿತಾಗಿ ವಿದೇಶಗಳಲ್ಲಿ ಉತ್ತಮ ತಿಳಿವಳಿಕೆ ನೀಡಲು ಶ್ರಮಿಸುವವರಿಗೆ ಕೊಡಲು ‘ಭಾರತ ಸಮ್ಮಾನ’ ಪ್ರಶಸ್ತಿಯನ್ನು ಸರ್ಕಾರ ಸ್ಥಾಪಿಸಿದೆ.

ದೇಶದ ಸುವರ್ಣ ಸ್ವಾತಂತ್ರ್ಯದ ಸಂದರ್ಭದಲ್ಲಿ ಆರಂಭಿಸಲಾಗಿರುವ ಈ ಪ್ರಶಸ್ತಿಗೆ ವಿದೇಶಿಯರಲ್ಲದೆ, ವಿದೇಶಗಳಲ್ಲಿ ನೆಲೆಸಿರುವ ಭಾರತೀಯರೂ ಭಾರತೀಯ ಸಂಜಾತರೂ ಅರ್ಹರಾಗಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT