<p><strong>ಬೆಂಗಳೂರು ವಾರ್ಸಿಟಿ: ಕೇಂದ್ರದ ಅಧೀನಕ್ಕೆ ಕೊಡುವ ಸಲಹೆಗೆ ಯು.ಜಿ.ಸಿ. ನಕಾರ</strong></p>.<p><strong>ನವದೆಹಲಿ, ಏ. 30–</strong> ಬೆಂಗಳೂರು ವಿಶ್ವವಿದ್ಯಾನಿಲಯವನ್ನು ಕೇಂದ್ರ ಸರ್ಕಾರ ವಹಿಸಿಕೊಳ್ಳಬೇಕೆಂಬ ಸಲಹೆಯನ್ನು ಯೋಜನಾ ಆಯೋಗ ಮತ್ತು ವಿಶ್ವವಿದ್ಯಾನಿಲಯ ಗ್ರಾಂಟ್ಸ್ ಕಮಿಷನ್ ತಿರಸ್ಕರಿಸಿದೆಯೆಂದು ಶಿಕ್ಷಣ ಸಚಿವ ಡಾ. ವಿ.ಕೆ.ಆರ್.ವಿ. ರಾವ್ ಅವರು ಇಂದು ರಾಜ್ಯಸಭೆಯಲ್ಲಿ ತಿಳಿಸಿದರು.</p>.<p>ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದ ಸಚಿವರು, ‘ಮೈಸೂರು ಸರ್ಕಾರದ ಈ ಸಲಹೆಯನ್ನು ಹಣಕಾಸು ಸಚಿವ ಶಾಖೆಗೆ ಪರಿಶೀಲನೆಗಾಗಿ ಕಳುಹಿಸಲಾಯಿತು. ಅದನ್ನು ಹಣಕಾಸು ಶಾಖೆ, ಯೋಜನೆ ಆಯೋಗ ಮತ್ತು ವಿಶ್ವವಿದ್ಯಾನಿಲಯ ಗ್ರಾಂಟ್ಸ್ ಕಮೀಷನ್ಗೆ ಕಳುಹಿಸಿತು. ಆದರೆ ಅವೆರಡೂ ಸಲಹೆಯನ್ನು ಒಪ್ಪಿಲ್ಲ’ ಎಂದರು.</p>.<p><strong>ಕನ್ನಡ ಸಾರಸ್ವತ ಲೋಕದ ಗಣ್ಯರ ಸಾಕ್ಷ್ಯಚಿತ್ರ</strong></p>.<p><strong>ಬೆಂಗಳೂರು, ಏ. 30– </strong>ಕನ್ನಡ ಸಾರಸ್ವತ ಲೋಕದ ಐದು ಮಂದಿ ಪ್ರಮುಖರ ಜೀವನದ ಸಾಧನೆ, ಸಫಲತೆಗಳು ಶೀಘ್ರದಲ್ಲಿಯೇ ಬೆಳ್ಳಿತೆರೆಯ ಮೂಲಕ ಜನತೆಗೆ ಪರಿಚಯವಾಗಲಿವೆ.</p>.<p>ಯೋಜನೆಯನ್ನು ಹಾಕಿಕೊಂಡಿರುವ ರಾಜ್ಯದ ವಾರ್ತೆ ಮತ್ತು ಪ್ರವಾಸೋದ್ಯಮ ಇಲಾಖೆಯು ಮೊದಲ ಪ್ರಯತ್ನಕ್ಕೆಂದು ಗಮನದಲ್ಲಿಟ್ಟುಕೊಂಡಿರುವ ಪ್ರಮುಖರು ಇವರು: ಶ್ರೀ ಡಿ.ವಿ. ಗುಂಡಪ್ಪ, ಶ್ರೀ ಕೆ.ವಿ. ಪುಟ್ಟಪ್ಪ, ಶ್ರೀ ದ.ರಾ. ಬೇಂದ್ರೆ, ಶ್ರೀ ಶಿವರಾಮ ಕಾರಂತ ಮತ್ತು ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್.</p>.<p>‘ಇದೊಂದು ಆರಂಭ ಮಾತ್ರ, ಕ್ರಮೇಣ ಸಾಹಿತ್ಯ ಮತ್ತು ಲಲಿತಾಕಲಾ ಕ್ಷೇತ್ರಗಳಲ್ಲಿ ಸನ್ಮಾನ್ಯ ಸ್ಥಾನ ಪಡೆದ ಎಲ್ಲ ಪ್ರಮುಖರ ಸಾಕ್ಷ್ಯಚಿತ್ರಗಳನ್ನು ತಯಾರಿಸಿ, ಪ್ರದರ್ಶಿಸುವ ಯೋಜನೆ ಇಲಾಖೆಗೆ ಇದೆ’ ಎಂದು ಇಲಾಖೆಯ ಡೈರೆಕ್ಟರ್ ಶ್ರೀ ಎಂ.ಡಿ. ಮರಿಪುಟ್ಟಣ್ಣ ಅವರು ಇಂದು ಇಲ್ಲಿ ತಿಳಿಸಿದರು.</p>.<p><strong>ಅಸ್ಸಾಂ ಪುನರ್ವಿಂಗಡಣೆ ಮಸೂದೆ: ರಾಜ್ಯಸಭೆ ಅಸ್ತು</strong></p>.<p><strong>ನವದೆಹಲಿ, ಏ. 30– </strong>ಅಸ್ಸಾಂ ರಾಜ್ಯದ ಪುನರ್ವಿಂಗಡಣೆ ಕುರಿತ ಸಂವಿಧಾನ ತಿದ್ದುಪಡಿ ಮಸೂದೆಯು ಇಂದು ರಾಜ್ಯಸಭೆಯಲ್ಲಿ ಅಂಗೀಕೃತವಾಯಿತು.</p>.<p>ಈ ಮಸೂದೆಯು ಈಗಾಗಲೇ ಲೋಕಸಭೆಯಲ್ಲಿ ಅಂಗೀಕೃತವಾಗಿದೆ. ಜನಸಂಘ ಹೊರತು ಎಲ್ಲ ಪಕ್ಷಗಳೂ ಈ ಮಸೂದೆಗೆ ಬೆಂಬಲ ಕೊಟ್ಟವು.</p>.<p>ಅಸ್ಸಾಂ ರಾಜ್ಯದೊಳಗೆ ಪರಮಾಧಿಕಾರವುಳ್ಳ ಗಿರಿ ರಾಜ್ಯ ರಚನೆಗೆ ಈ 22ನೇ ಸಂವಿಧಾನ ತಿದ್ದುಪಡಿ ಮಸೂದೆ ಅವಕಾಶ ನೀಡುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು ವಾರ್ಸಿಟಿ: ಕೇಂದ್ರದ ಅಧೀನಕ್ಕೆ ಕೊಡುವ ಸಲಹೆಗೆ ಯು.ಜಿ.ಸಿ. ನಕಾರ</strong></p>.<p><strong>ನವದೆಹಲಿ, ಏ. 30–</strong> ಬೆಂಗಳೂರು ವಿಶ್ವವಿದ್ಯಾನಿಲಯವನ್ನು ಕೇಂದ್ರ ಸರ್ಕಾರ ವಹಿಸಿಕೊಳ್ಳಬೇಕೆಂಬ ಸಲಹೆಯನ್ನು ಯೋಜನಾ ಆಯೋಗ ಮತ್ತು ವಿಶ್ವವಿದ್ಯಾನಿಲಯ ಗ್ರಾಂಟ್ಸ್ ಕಮಿಷನ್ ತಿರಸ್ಕರಿಸಿದೆಯೆಂದು ಶಿಕ್ಷಣ ಸಚಿವ ಡಾ. ವಿ.ಕೆ.ಆರ್.ವಿ. ರಾವ್ ಅವರು ಇಂದು ರಾಜ್ಯಸಭೆಯಲ್ಲಿ ತಿಳಿಸಿದರು.</p>.<p>ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದ ಸಚಿವರು, ‘ಮೈಸೂರು ಸರ್ಕಾರದ ಈ ಸಲಹೆಯನ್ನು ಹಣಕಾಸು ಸಚಿವ ಶಾಖೆಗೆ ಪರಿಶೀಲನೆಗಾಗಿ ಕಳುಹಿಸಲಾಯಿತು. ಅದನ್ನು ಹಣಕಾಸು ಶಾಖೆ, ಯೋಜನೆ ಆಯೋಗ ಮತ್ತು ವಿಶ್ವವಿದ್ಯಾನಿಲಯ ಗ್ರಾಂಟ್ಸ್ ಕಮೀಷನ್ಗೆ ಕಳುಹಿಸಿತು. ಆದರೆ ಅವೆರಡೂ ಸಲಹೆಯನ್ನು ಒಪ್ಪಿಲ್ಲ’ ಎಂದರು.</p>.<p><strong>ಕನ್ನಡ ಸಾರಸ್ವತ ಲೋಕದ ಗಣ್ಯರ ಸಾಕ್ಷ್ಯಚಿತ್ರ</strong></p>.<p><strong>ಬೆಂಗಳೂರು, ಏ. 30– </strong>ಕನ್ನಡ ಸಾರಸ್ವತ ಲೋಕದ ಐದು ಮಂದಿ ಪ್ರಮುಖರ ಜೀವನದ ಸಾಧನೆ, ಸಫಲತೆಗಳು ಶೀಘ್ರದಲ್ಲಿಯೇ ಬೆಳ್ಳಿತೆರೆಯ ಮೂಲಕ ಜನತೆಗೆ ಪರಿಚಯವಾಗಲಿವೆ.</p>.<p>ಯೋಜನೆಯನ್ನು ಹಾಕಿಕೊಂಡಿರುವ ರಾಜ್ಯದ ವಾರ್ತೆ ಮತ್ತು ಪ್ರವಾಸೋದ್ಯಮ ಇಲಾಖೆಯು ಮೊದಲ ಪ್ರಯತ್ನಕ್ಕೆಂದು ಗಮನದಲ್ಲಿಟ್ಟುಕೊಂಡಿರುವ ಪ್ರಮುಖರು ಇವರು: ಶ್ರೀ ಡಿ.ವಿ. ಗುಂಡಪ್ಪ, ಶ್ರೀ ಕೆ.ವಿ. ಪುಟ್ಟಪ್ಪ, ಶ್ರೀ ದ.ರಾ. ಬೇಂದ್ರೆ, ಶ್ರೀ ಶಿವರಾಮ ಕಾರಂತ ಮತ್ತು ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್.</p>.<p>‘ಇದೊಂದು ಆರಂಭ ಮಾತ್ರ, ಕ್ರಮೇಣ ಸಾಹಿತ್ಯ ಮತ್ತು ಲಲಿತಾಕಲಾ ಕ್ಷೇತ್ರಗಳಲ್ಲಿ ಸನ್ಮಾನ್ಯ ಸ್ಥಾನ ಪಡೆದ ಎಲ್ಲ ಪ್ರಮುಖರ ಸಾಕ್ಷ್ಯಚಿತ್ರಗಳನ್ನು ತಯಾರಿಸಿ, ಪ್ರದರ್ಶಿಸುವ ಯೋಜನೆ ಇಲಾಖೆಗೆ ಇದೆ’ ಎಂದು ಇಲಾಖೆಯ ಡೈರೆಕ್ಟರ್ ಶ್ರೀ ಎಂ.ಡಿ. ಮರಿಪುಟ್ಟಣ್ಣ ಅವರು ಇಂದು ಇಲ್ಲಿ ತಿಳಿಸಿದರು.</p>.<p><strong>ಅಸ್ಸಾಂ ಪುನರ್ವಿಂಗಡಣೆ ಮಸೂದೆ: ರಾಜ್ಯಸಭೆ ಅಸ್ತು</strong></p>.<p><strong>ನವದೆಹಲಿ, ಏ. 30– </strong>ಅಸ್ಸಾಂ ರಾಜ್ಯದ ಪುನರ್ವಿಂಗಡಣೆ ಕುರಿತ ಸಂವಿಧಾನ ತಿದ್ದುಪಡಿ ಮಸೂದೆಯು ಇಂದು ರಾಜ್ಯಸಭೆಯಲ್ಲಿ ಅಂಗೀಕೃತವಾಯಿತು.</p>.<p>ಈ ಮಸೂದೆಯು ಈಗಾಗಲೇ ಲೋಕಸಭೆಯಲ್ಲಿ ಅಂಗೀಕೃತವಾಗಿದೆ. ಜನಸಂಘ ಹೊರತು ಎಲ್ಲ ಪಕ್ಷಗಳೂ ಈ ಮಸೂದೆಗೆ ಬೆಂಬಲ ಕೊಟ್ಟವು.</p>.<p>ಅಸ್ಸಾಂ ರಾಜ್ಯದೊಳಗೆ ಪರಮಾಧಿಕಾರವುಳ್ಳ ಗಿರಿ ರಾಜ್ಯ ರಚನೆಗೆ ಈ 22ನೇ ಸಂವಿಧಾನ ತಿದ್ದುಪಡಿ ಮಸೂದೆ ಅವಕಾಶ ನೀಡುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>