<p><strong>ದೂರದಿಂದ ಬ್ರಿಟನ್ ಆಜ್ಞೆ ಮಾಡುವ ಕಾಲ ಮುಗಿದಿದೆ: ಇಂದಿರಾ ಬಿಚ್ಚುಮಾತು</strong></p>.<p><strong>ನವದೆಹಲಿ, ಡಿ. 2–</strong> ಯಾವುದೇ ರೀತಿಯ ಆಕ್ರಮಣವನ್ನೂ ನಡೆಸದಿರುವ ಭಾರತವನ್ನು ಆಕ್ರಮಣ ಎಸಗಿರುವ ರಾಷ್ಟ್ರವೆಂದು ಕರೆದರೆ ಅದಕ್ಕಾಗಿ ಭಾರತ ಚಿಂತಿಸದು ಎಂದು ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರು ಇಂದು ಇಲ್ಲಿ ಘೋಷಿಸಿದರು.</p>.<p>ಪ್ರಸ್ತುತ ಉಂಟಾಗಿರುವ ರಾಷ್ಟ್ರೀಯ ತುರ್ತು ಪರಿಸ್ಥಿತಿಯಲ್ಲಿ ಬೆಂಬಲ ವ್ಯಕ್ತಪಡಿಸಲು ತಮ್ಮ ನಿವಾಸದೆದುರು ಸಭೆ ಸೇರಿದ್ದ ಆಡಳಿತ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಇಂದಿರಾ ಅವರು ಇತ್ತೀಚಿನ ಲಂಡನ್ ಪತ್ರಿಕೆಗಳ ವರದಿಗೆ ಪ್ರತಿಕ್ರಿಯೆಯಾಗಿ ಈ ರೀತಿ ನುಡಿದರು.</p>.<p>‘ಕಳೆದ ಐದು ವರ್ಷಗಳಲ್ಲಿ ಕಾಲ ಬದಲಾಗಿದೆ. ಆಕ್ರಮಣ ಎಸಗುವ ರಾಷ್ಟ್ರವೆಂದು ಕರೆಯುವ ಮೂಲಕ ರಾಷ್ಟ್ರೀಯ ಹಿತಾಸಕ್ತಿ ಮರೆಯುವಂತೆ ನಮ್ಮ ಮೇಲೆ ಒತ್ತಡ ಹೇರಬಹುದೆಂದು ಯಾವ ರಾಷ್ಟ್ರವಾದರೂ ಯೋಚಿಸಿದ್ದಲ್ಲಿ ಅಂಥ ರಾಷ್ಟ್ರ ತನ್ನದೇ ಆದ ಭ್ರಮೆಯ ಲೋಕದಲ್ಲಿ ವಿಹರಿಸುತ್ತಿದೆಯಂದಷ್ಟೇ ಹೇಳಬಹುದು’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೂರದಿಂದ ಬ್ರಿಟನ್ ಆಜ್ಞೆ ಮಾಡುವ ಕಾಲ ಮುಗಿದಿದೆ: ಇಂದಿರಾ ಬಿಚ್ಚುಮಾತು</strong></p>.<p><strong>ನವದೆಹಲಿ, ಡಿ. 2–</strong> ಯಾವುದೇ ರೀತಿಯ ಆಕ್ರಮಣವನ್ನೂ ನಡೆಸದಿರುವ ಭಾರತವನ್ನು ಆಕ್ರಮಣ ಎಸಗಿರುವ ರಾಷ್ಟ್ರವೆಂದು ಕರೆದರೆ ಅದಕ್ಕಾಗಿ ಭಾರತ ಚಿಂತಿಸದು ಎಂದು ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರು ಇಂದು ಇಲ್ಲಿ ಘೋಷಿಸಿದರು.</p>.<p>ಪ್ರಸ್ತುತ ಉಂಟಾಗಿರುವ ರಾಷ್ಟ್ರೀಯ ತುರ್ತು ಪರಿಸ್ಥಿತಿಯಲ್ಲಿ ಬೆಂಬಲ ವ್ಯಕ್ತಪಡಿಸಲು ತಮ್ಮ ನಿವಾಸದೆದುರು ಸಭೆ ಸೇರಿದ್ದ ಆಡಳಿತ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಇಂದಿರಾ ಅವರು ಇತ್ತೀಚಿನ ಲಂಡನ್ ಪತ್ರಿಕೆಗಳ ವರದಿಗೆ ಪ್ರತಿಕ್ರಿಯೆಯಾಗಿ ಈ ರೀತಿ ನುಡಿದರು.</p>.<p>‘ಕಳೆದ ಐದು ವರ್ಷಗಳಲ್ಲಿ ಕಾಲ ಬದಲಾಗಿದೆ. ಆಕ್ರಮಣ ಎಸಗುವ ರಾಷ್ಟ್ರವೆಂದು ಕರೆಯುವ ಮೂಲಕ ರಾಷ್ಟ್ರೀಯ ಹಿತಾಸಕ್ತಿ ಮರೆಯುವಂತೆ ನಮ್ಮ ಮೇಲೆ ಒತ್ತಡ ಹೇರಬಹುದೆಂದು ಯಾವ ರಾಷ್ಟ್ರವಾದರೂ ಯೋಚಿಸಿದ್ದಲ್ಲಿ ಅಂಥ ರಾಷ್ಟ್ರ ತನ್ನದೇ ಆದ ಭ್ರಮೆಯ ಲೋಕದಲ್ಲಿ ವಿಹರಿಸುತ್ತಿದೆಯಂದಷ್ಟೇ ಹೇಳಬಹುದು’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>