‘ಪ್ರಜಾತಂತ್ರದಲ್ಲಿ ರಾಜಕಾರಣಿಗಳು, ಮಂತ್ರಿಗಳು ಮತ್ತು ಉನ್ನತ ಅಧಿಕಾರಿಗಳು ಭ್ರಷ್ಟಾಚಾರಿಗಳಾಗಿದ್ದರೆ ಭ್ರಷ್ಟಾಚಾರ ನಿರ್ಮೂಲನದ ಮಾತನ್ನು ಮರೆತುಬಿಡಬೇಕು. ದುರಾಸೆ– ಆಮಿಷ ಮತ್ತು ಲಂಚಗುಳಿತನದ ವಿರುದ್ಧ ಕರ್ತವ್ಯನಿಷ್ಠೆ, ಅಪರಿಗ್ರಹ, ನಿಸ್ವಾರ್ಥ ಬುದ್ಧಿಯ ಆತ್ಮಶಕ್ತಿಯನ್ನು ಬೆಳೆಸಿದರೆ ಮಾತ್ರ ಭ್ರಷ್ಟಾಚಾರವನ್ನು ನಿರೋಧಿಸಲು ಸಾಧ್ಯ’ ಎಂದು ಶ್ರೀ ಅರಸು ಅವರು ಹೇಳಿದರು.