<p><strong>ರಾಮಾವತಾರ</strong></p>.<p><strong>ನವದೆಹಲಿ, ಜ. 2– </strong>ದೆಹಲಿ ಪೌರರು ಇಂದು ಇಲ್ಲಿ ಪ್ರಧಾನ ಮಂತ್ರಿ ಇಂದಿರಾಗಾಂಧಿ ಅವರ ಗೌರವಾರ್ಥ ಏರ್ಪಡಿಸಿದ್ದ ಸನ್ಮಾನ ಸಭೆಯು, ರಾಮಾಯಾಣದ ಕಾಲದಿಂದಲೂ ಭಾರತೀಯ ಪರಂಪರೆಯನ್ನು ಉಳಿಸಿಕೊಂಡು ಬಂದಿರುವ ಭಗವಾನ್ ಶ್ರೀರಾಮಚಂದ್ರ ಮೂರ್ತಿಗೆ ಇಂದಿರಾ ಗಾಂಧಿ ಅವರನ್ನು ಹೋಲಿಸಿತು.</p>.<p>ಶ್ರೀರಾಮನು ಲಂಕಾ ಜನರನ್ನು ರಾಕ್ಷಸ ರಾವಣನ ದುರಾಡಳಿತದಿಂದ ಬಿಡುಗಡೆ ಮಾಡಿದ ನಂತರ ಪ್ರಭುತ್ವವನ್ನು ರಾವಣನ ಸಹೋದರ ವಿಭೀಷಣನಿಗೆ ಒಪ್ಪಿಸಿದೆ.</p>.<p>ಅದೇ ರೀತಿಯಲ್ಲಿ ಇಂದಿರಾ ಗಾಂಧಿ ಅವರು ಬಾಂಗ್ಲಾ ದೇಶದ ಜನರನ್ನೆಲ್ಲಾ ಜನರಲ್ ಯಾಹ್ಯಾಖಾನರ ಅಕೃತ್ಯಗಳಿಂದ ಪಾರು ಮಾಡಿದ ನಂತರ ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರ ವರ್ಗಾಯಿಸಿದರೆಂದು ಭಿನ್ನವತ್ತಳೆಯಲ್ಲಿ ಬಣ್ಣಿಸಲಾಯಿತು.</p>.<p>ರಾಜಧಾನಿಯಲ್ಲಿ 286 ಸಂಘ– ಸಂಸ್ಥೆಗಳನ್ನು ಪ್ರತಿನಿಧಿಸಿದ್ದ ‘ಇಂದಿರಾ ಗಾಂಧಿ ಅಭಿನಂದನಾ ಸಮಿತಿ’ ಪರವಾಗಿ ದೆಹಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಾಧಾರಾಯನ್ ಅವರು ಭಿನ್ನವತ್ತಳೆ ಅರ್ಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮಾವತಾರ</strong></p>.<p><strong>ನವದೆಹಲಿ, ಜ. 2– </strong>ದೆಹಲಿ ಪೌರರು ಇಂದು ಇಲ್ಲಿ ಪ್ರಧಾನ ಮಂತ್ರಿ ಇಂದಿರಾಗಾಂಧಿ ಅವರ ಗೌರವಾರ್ಥ ಏರ್ಪಡಿಸಿದ್ದ ಸನ್ಮಾನ ಸಭೆಯು, ರಾಮಾಯಾಣದ ಕಾಲದಿಂದಲೂ ಭಾರತೀಯ ಪರಂಪರೆಯನ್ನು ಉಳಿಸಿಕೊಂಡು ಬಂದಿರುವ ಭಗವಾನ್ ಶ್ರೀರಾಮಚಂದ್ರ ಮೂರ್ತಿಗೆ ಇಂದಿರಾ ಗಾಂಧಿ ಅವರನ್ನು ಹೋಲಿಸಿತು.</p>.<p>ಶ್ರೀರಾಮನು ಲಂಕಾ ಜನರನ್ನು ರಾಕ್ಷಸ ರಾವಣನ ದುರಾಡಳಿತದಿಂದ ಬಿಡುಗಡೆ ಮಾಡಿದ ನಂತರ ಪ್ರಭುತ್ವವನ್ನು ರಾವಣನ ಸಹೋದರ ವಿಭೀಷಣನಿಗೆ ಒಪ್ಪಿಸಿದೆ.</p>.<p>ಅದೇ ರೀತಿಯಲ್ಲಿ ಇಂದಿರಾ ಗಾಂಧಿ ಅವರು ಬಾಂಗ್ಲಾ ದೇಶದ ಜನರನ್ನೆಲ್ಲಾ ಜನರಲ್ ಯಾಹ್ಯಾಖಾನರ ಅಕೃತ್ಯಗಳಿಂದ ಪಾರು ಮಾಡಿದ ನಂತರ ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರ ವರ್ಗಾಯಿಸಿದರೆಂದು ಭಿನ್ನವತ್ತಳೆಯಲ್ಲಿ ಬಣ್ಣಿಸಲಾಯಿತು.</p>.<p>ರಾಜಧಾನಿಯಲ್ಲಿ 286 ಸಂಘ– ಸಂಸ್ಥೆಗಳನ್ನು ಪ್ರತಿನಿಧಿಸಿದ್ದ ‘ಇಂದಿರಾ ಗಾಂಧಿ ಅಭಿನಂದನಾ ಸಮಿತಿ’ ಪರವಾಗಿ ದೆಹಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಾಧಾರಾಯನ್ ಅವರು ಭಿನ್ನವತ್ತಳೆ ಅರ್ಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>