<h2>ರೈತರೊಡನೆ ಸತತ ಸಮಾಲೋಚನೆ ಅಗತ್ಯ</h2><p><strong>ನವದೆಹಲಿ, ಮೇ 28–</strong> ಕೃಷಿ ಸಂಶೋಧನೆಯ ಉದ್ದೇಶಗಳನ್ನು ಸಾಧಿಸಲು ಕಾರ್ಯನಿರತ ರೈತರೊಡನೆ ಸತತ ಸಮಾಲೋಚನೆ ನಡೆಸುತ್ತಿರಬೇಕೆಂದು ಕೃಷಿ ಮತ್ತು ನೀರಾವರಿ ಸಚಿವ ಜಗಜೀವನರಾಂ ಅವರು ಇಂದು ಕೃಷಿ ವಿಜ್ಞಾನಿಗಳಿಗೆ ತಿಳಿಸಿದರು.</p> <p>ಅನೇಕ ಶತಮಾನಗಳಿಂದ ರೈತರು ಅನುಸರಿಸಿಕೊಂಡು ಬರುತ್ತಿರುವ ಪ್ರಾಚೀನ ಕೃಷಿ ಪದ್ಧತಿಗಳನ್ನೂ ಅವುಗಳಿಗೆ ಕಾರಣವನ್ನೂ ಸಾಕಷ್ಟು ಸರಿಯಾಗಿ ಅರಿತುಕೊಳ್ಳದೆ ಅವುಗಳನ್ನು ಬದಲಾಯಿಸಲು ಪ್ರಯತ್ನಿಸಿದರೆ, ‘ಬದಲಾವಣೆ ಮಾಡುವ ಪ್ರಯತ್ನದಲ್ಲಿ ನಾವು ಯಶಸ್ವಿಯಾಗಲಾರೆವು’ ಎಂದರು.</p>.<h2>ದುರಾಚಾರರಹಿತ ‘ಸುರಾಜ್ಯ’ ಸ್ಥಾಪನೆಗೆ ಹೋರಾಡಿ: ಕೆಂಗಲ್</h2><p><strong>ಚಿಕ್ಕಮಗಳೂರು, ಮೇ 28–</strong> ಇಂದು ವ್ಯಾಪಕವಾಗಿರುವ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತಿತರ ಕೆಡುಕುಗಳನ್ನು ನಿರ್ಮೂಲ ಮಾಡಲು ಸ್ವಾತಂತ್ರ್ಯ ಯೋಧರು ನೆರವಾಗಬೇಕೆಂದು ಸಂಸತ್ ಸದಸ್ಯ ಕೆಂಗಲ್ ಹನುಮಂತಯ್ಯ ಅವರು ಕರೆಯಿತ್ತರು.</p><p>ಶ್ರೀಯುತರು ಅಖಿಲ ಭಾರತ ಸ್ವಾತಂತ್ರ್ಯ ಹೋರಾಟಗಾರರ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರು ಸ್ವರಾಜ್ಯ ಗಳಿಸಲು ಹೋರಾಡಿದಂತೆಯೇ ಕೆಡುಕುರಹಿತ ‘ಸುರಾಜ್ಯ’ ಸ್ಥಾಪನೆಗಾಗಿ ಹೋರಾಡಬೇಕೆಂದು ಮನವಿ ಮಾಡಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2>ರೈತರೊಡನೆ ಸತತ ಸಮಾಲೋಚನೆ ಅಗತ್ಯ</h2><p><strong>ನವದೆಹಲಿ, ಮೇ 28–</strong> ಕೃಷಿ ಸಂಶೋಧನೆಯ ಉದ್ದೇಶಗಳನ್ನು ಸಾಧಿಸಲು ಕಾರ್ಯನಿರತ ರೈತರೊಡನೆ ಸತತ ಸಮಾಲೋಚನೆ ನಡೆಸುತ್ತಿರಬೇಕೆಂದು ಕೃಷಿ ಮತ್ತು ನೀರಾವರಿ ಸಚಿವ ಜಗಜೀವನರಾಂ ಅವರು ಇಂದು ಕೃಷಿ ವಿಜ್ಞಾನಿಗಳಿಗೆ ತಿಳಿಸಿದರು.</p> <p>ಅನೇಕ ಶತಮಾನಗಳಿಂದ ರೈತರು ಅನುಸರಿಸಿಕೊಂಡು ಬರುತ್ತಿರುವ ಪ್ರಾಚೀನ ಕೃಷಿ ಪದ್ಧತಿಗಳನ್ನೂ ಅವುಗಳಿಗೆ ಕಾರಣವನ್ನೂ ಸಾಕಷ್ಟು ಸರಿಯಾಗಿ ಅರಿತುಕೊಳ್ಳದೆ ಅವುಗಳನ್ನು ಬದಲಾಯಿಸಲು ಪ್ರಯತ್ನಿಸಿದರೆ, ‘ಬದಲಾವಣೆ ಮಾಡುವ ಪ್ರಯತ್ನದಲ್ಲಿ ನಾವು ಯಶಸ್ವಿಯಾಗಲಾರೆವು’ ಎಂದರು.</p>.<h2>ದುರಾಚಾರರಹಿತ ‘ಸುರಾಜ್ಯ’ ಸ್ಥಾಪನೆಗೆ ಹೋರಾಡಿ: ಕೆಂಗಲ್</h2><p><strong>ಚಿಕ್ಕಮಗಳೂರು, ಮೇ 28–</strong> ಇಂದು ವ್ಯಾಪಕವಾಗಿರುವ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತಿತರ ಕೆಡುಕುಗಳನ್ನು ನಿರ್ಮೂಲ ಮಾಡಲು ಸ್ವಾತಂತ್ರ್ಯ ಯೋಧರು ನೆರವಾಗಬೇಕೆಂದು ಸಂಸತ್ ಸದಸ್ಯ ಕೆಂಗಲ್ ಹನುಮಂತಯ್ಯ ಅವರು ಕರೆಯಿತ್ತರು.</p><p>ಶ್ರೀಯುತರು ಅಖಿಲ ಭಾರತ ಸ್ವಾತಂತ್ರ್ಯ ಹೋರಾಟಗಾರರ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರು ಸ್ವರಾಜ್ಯ ಗಳಿಸಲು ಹೋರಾಡಿದಂತೆಯೇ ಕೆಡುಕುರಹಿತ ‘ಸುರಾಜ್ಯ’ ಸ್ಥಾಪನೆಗಾಗಿ ಹೋರಾಡಬೇಕೆಂದು ಮನವಿ ಮಾಡಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>