ಬೆಂಗಳೂರು, ನ. 7– ರಾಜ್ಯದಲ್ಲಿ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವಂತೆ ಆಡಳಿತವನ್ನು ಚುರುಕು ಗೊಳಿಸುವುದರ ಜೊತೆಗೆ ಇಲ್ಲಿವರೆಗಿನ ಸಾಧನೆ– ವೈಫಲ್ಯಗಳನ್ನು ವಿಮರ್ಶಿಸಿ ಆತ್ಮಾವಲೋಕ ಮಾಡಿಕೊಂಡು ಎಲ್ಲರೂ ಏಕತೆ ಸೌಹಾರ್ದತೆಯಿಂದ ಕಾರ್ಯನಿರ್ವಹಿಸಲು ಜೆ.ಎಚ್. ಪಟೇಲ್ ನೇತೃತ್ವದ ಮಂತ್ರಿಮಂಡಲ ಸಂಕಲ್ಪ ತೊಟ್ಟ ಅಪರೂಪದ ಸಭೆ ನಗರದ ಹೊರವಲಯದಲ್ಲಿ ಇಂದು ನಡೆಯಿತು.