<p><strong>ಮೈಸೂರಿನ ಕಾವೇರಿ ಯೋಜನೆ ಕಾಮಗಾರಿ ತಡೆಯಲು ನಕಾರ</strong></p>.<p><strong>ನವದೆಹಲಿ</strong>, ಅ. 25– ಕಾವೇರಿ ಮತ್ತು ಅದರ ಉಪನದಿಗಳಾದ ಕಪಿಲಾ ಹಾಗೂ ಹೇಮಾವತಿ ಯೋಜನೆ ಕಾರ್ಯಗಳನ್ನು ಮುಂದುವರಿಸದಂತೆ ಮೈಸೂರನ್ನುತಡೆಯಬೇಕೆಂಬ ತಮಿಳುನಾಡುಹಾಗೂ ಕೇರಳ ಸರ್ಕಾರಗಳ ಪ್ರತ್ಯೇಕ ಮನವಿಗಳನ್ನು ಸುಪ್ರೀಂ ಕೋರ್ಟ್ ಇಂದು ತಿರಸ್ಕರಿಸಿತು.</p>.<p>ಆದರೆ, ಕಾವೇರಿ ಜಲವಿವಾದ ಸಂಬಂಧ ನ್ಯಾಯಮಂಡಲಿಯೊಂದನ್ನು ರಚಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಆದೇಶ ನೀಡಬೇಕೆಂಬ ತಮಿಳುನಾಡಿನ ಮೂಲ ಮೊಕದ್ದಮೆಯನ್ನು ನ್ಯಾಯಾಲಯ ವಿಚಾರಣೆಗೆ ಸ್ವೀಕರಿಸಿತು.</p>.<p><strong>‘ನಾಯಿಕೊಡೆ’ಗಳಂತಿರುವವ್ಯಾಪಾರಿಗಳನ್ನು ತಡೆಗಟ್ಟಲು ಅರಸು ಕರೆ</strong></p>.<p><strong>ಬೆಂಗಳೂರು, ಅ. 25– </strong>‘ನಾಯಿಕೊಡೆಗಳಂತೆ’ ಅನೇಕರು ರೇಷ್ಮೆ ವ್ಯಾಪಾರದಲ್ಲಿ ತೊಡಗಿ ರುವುದು ರಫ್ತು ವ್ಯಾಪಾರದ ಮೇಲೆ ದುಷ್ಪರಿ<br />ಣಾಮವನ್ನುಂಟು ಮಾಡಿದೆ ಎಂದು ರೇಷ್ಮೆ ಮಂಡಳಿಯ ಅಧ್ಯಕ್ಷ ಶ್ರೀ ಡಿ.ದೇವರಾಜ ಅರಸು ಅವರು ಇಂದು ಇಲ್ಲಿ ತಿಳಿಸಿದರು.</p>.<p>ಇಂದು ಬಂದು ನಾಳೆ ರೇಷ್ಮೆ ರಫ್ತು ವ್ಯಾಪಾರದಿಂದ ನಿವೃತ್ತರಾಗುವ ಈ ಮಾರಕ ವ್ಯಾಪಾರಿಗಳನ್ನು ತಡೆಗಟ್ಟಲು ಪ್ರಯತ್ನಿಸ<br />ಬೇಕೆಂದು ರೇಷ್ಮೆ ರಫ್ತುದಾರರಿಗೆ ಅವರು ಸಲಹೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರಿನ ಕಾವೇರಿ ಯೋಜನೆ ಕಾಮಗಾರಿ ತಡೆಯಲು ನಕಾರ</strong></p>.<p><strong>ನವದೆಹಲಿ</strong>, ಅ. 25– ಕಾವೇರಿ ಮತ್ತು ಅದರ ಉಪನದಿಗಳಾದ ಕಪಿಲಾ ಹಾಗೂ ಹೇಮಾವತಿ ಯೋಜನೆ ಕಾರ್ಯಗಳನ್ನು ಮುಂದುವರಿಸದಂತೆ ಮೈಸೂರನ್ನುತಡೆಯಬೇಕೆಂಬ ತಮಿಳುನಾಡುಹಾಗೂ ಕೇರಳ ಸರ್ಕಾರಗಳ ಪ್ರತ್ಯೇಕ ಮನವಿಗಳನ್ನು ಸುಪ್ರೀಂ ಕೋರ್ಟ್ ಇಂದು ತಿರಸ್ಕರಿಸಿತು.</p>.<p>ಆದರೆ, ಕಾವೇರಿ ಜಲವಿವಾದ ಸಂಬಂಧ ನ್ಯಾಯಮಂಡಲಿಯೊಂದನ್ನು ರಚಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಆದೇಶ ನೀಡಬೇಕೆಂಬ ತಮಿಳುನಾಡಿನ ಮೂಲ ಮೊಕದ್ದಮೆಯನ್ನು ನ್ಯಾಯಾಲಯ ವಿಚಾರಣೆಗೆ ಸ್ವೀಕರಿಸಿತು.</p>.<p><strong>‘ನಾಯಿಕೊಡೆ’ಗಳಂತಿರುವವ್ಯಾಪಾರಿಗಳನ್ನು ತಡೆಗಟ್ಟಲು ಅರಸು ಕರೆ</strong></p>.<p><strong>ಬೆಂಗಳೂರು, ಅ. 25– </strong>‘ನಾಯಿಕೊಡೆಗಳಂತೆ’ ಅನೇಕರು ರೇಷ್ಮೆ ವ್ಯಾಪಾರದಲ್ಲಿ ತೊಡಗಿ ರುವುದು ರಫ್ತು ವ್ಯಾಪಾರದ ಮೇಲೆ ದುಷ್ಪರಿ<br />ಣಾಮವನ್ನುಂಟು ಮಾಡಿದೆ ಎಂದು ರೇಷ್ಮೆ ಮಂಡಳಿಯ ಅಧ್ಯಕ್ಷ ಶ್ರೀ ಡಿ.ದೇವರಾಜ ಅರಸು ಅವರು ಇಂದು ಇಲ್ಲಿ ತಿಳಿಸಿದರು.</p>.<p>ಇಂದು ಬಂದು ನಾಳೆ ರೇಷ್ಮೆ ರಫ್ತು ವ್ಯಾಪಾರದಿಂದ ನಿವೃತ್ತರಾಗುವ ಈ ಮಾರಕ ವ್ಯಾಪಾರಿಗಳನ್ನು ತಡೆಗಟ್ಟಲು ಪ್ರಯತ್ನಿಸ<br />ಬೇಕೆಂದು ರೇಷ್ಮೆ ರಫ್ತುದಾರರಿಗೆ ಅವರು ಸಲಹೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>