<p><strong>ಗುಜರಾತ್: ಕೇಶುಭಾಯಿ ಬದಲಾವಣೆಗೆ ಬಿಜೆಪಿ ನಕಾರ</strong></p>.<p><strong>ನವದೆಹಲಿ, ಅ. 4 (ಪಿಟಿಐ, ಯುಎನ್ಐ)–</strong> ಗುಜರಾತ್ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್ ಅವರನ್ನು ಬದಲಾಯಿಸುವುದಿಲ್ಲ ಎಂದು ಬಿಜೆಪಿ ಇಂದು ಸ್ಪಷ್ಟವಾಗಿ ಘೋಷಿಸಿತು. ಆದರೆ, ಸರ್ಕಾರವನ್ನು ಉರುಳಿಸಲು ಭಿನ್ನಮತೀಯ ಬಿಜೆಪಿ ಶಾಸಕರು ದೃಢ ನಿರ್ಧಾರ ಮಾಡುವುದರೊಂದಿಗೆ ರಾಜಕೀಯ ಅಸ್ಥಿರತೆ ಪರಾಕಾಷ್ಠೆ ತಲುಪಿದೆ.</p>.<p>ಬಿಕ್ಕಟ್ಟು ಪರಿಹರಿಸಲು ಮಾತುಕತೆಗೆ ಮುನ್ನ ಕೇಶುಭಾಯಿ ಅವರನ್ನು ಅಧಿಕಾರದಿಂದ ಇಳಿಸಬೇಕು ಎಂಬುದು ಭಿನ್ನ ಬಣದ ಷರತ್ತು.</p>.<p>ಈ ಮಧ್ಯೆ ಗುಜರಾತ್ ಸರ್ಕಾರವನ್ನು ಉರುಳಿಸಲು ವಿವಿಧ ಮೂಲಗಳಿಂದ ಅಪಾರ ಪ್ರಮಾಣದ ಹಣದ ಹೊಳೆ ಹರಿಸಲಾಗುತ್ತಿದೆ ಎಂದು ಪಕ್ಷದ ವಕ್ತಾರ ಕೆ.ಎಲ್.ಶರ್ಮಾ ಇಲ್ಲಿ ಆರೋಪಿಸಿದರು.</p>.<p><strong>ಜುರಾಲಾ: ಮರು ಸರ್ವೆಗೆ ಆಗ್ರಹ</strong></p>.<p><strong>ರಾಯಚೂರು, ಅ. 4–</strong> ಕೃಷ್ಣಾ ನದಿಗೆ ಆಂಧ್ರ ಪ್ರದೇಶವು ನಿರ್ಮಿಸಿರುವ ಅಣೆಕಟ್ಟು ನಿಗದಿಗಿಂತ 2 ಅಡಿ ಜಾಸ್ತಿಯಾಗಿರುವುದ<br />ರಿಂದ ಮುಳುಗಡೆಯಾಗುವ ಪ್ರದೇಶದ ಮರು ಸರ್ವೆಯನ್ನು ತಕ್ಷಣವೇ ನಡೆಸಬೇಕು ಎಂದು ವಿಧಾನ ಪರಿಷತ್ತಿನಲ್ಲಿ ಬಿಜೆಪಿ ನಾಯಕರಾಗಿರುವ ಡಾ. ಎಂ.ಆರ್.ತಂಗಾ ಅವರು ಒತ್ತಾಯಿಸಿದರು.</p>.<p>ವರದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಅಣೆಕಟ್ಟೆ ಎತ್ತರ ಜಾಸ್ತಿಯಾಗಿದೆ ಎಂದರೆ ಮುಂದಿನ ಪರಿಣಾಮವನ್ನುಸುಲಭವಾಗಿ ಊಹಿಸಬಹುದಾಗಿದೆ. ಸಹಜವಾಗಿಯೇ ಮುಳುಗಡೆ ಪ್ರದೇಶ ಹೆಚ್ಚಾಗುತ್ತದೆ. ಕರ್ನಾಟಕ ಮತ್ತು ಆಂಧ್ರ ಪ್ರದೇಶದ ನಡುವೆ ಏರ್ಪಟ್ಟ ಒಪ್ಪಂದದಂತೆ ಅಣೆಕಟ್ಟೆ ಎತ್ತರ 318.516 ಮೀಟರ್ ಇರಬೇಕಿತ್ತು. ಆದರೆ, ಇದು ಇನ್ನೂ 2 ಅಡಿ ಹೆಚ್ಚಾಗಿರುವುದು ಜಂಟಿ ಸರ್ವೆಯಿಂದ ಖಚಿತವಾಗಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಜರಾತ್: ಕೇಶುಭಾಯಿ ಬದಲಾವಣೆಗೆ ಬಿಜೆಪಿ ನಕಾರ</strong></p>.<p><strong>ನವದೆಹಲಿ, ಅ. 4 (ಪಿಟಿಐ, ಯುಎನ್ಐ)–</strong> ಗುಜರಾತ್ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್ ಅವರನ್ನು ಬದಲಾಯಿಸುವುದಿಲ್ಲ ಎಂದು ಬಿಜೆಪಿ ಇಂದು ಸ್ಪಷ್ಟವಾಗಿ ಘೋಷಿಸಿತು. ಆದರೆ, ಸರ್ಕಾರವನ್ನು ಉರುಳಿಸಲು ಭಿನ್ನಮತೀಯ ಬಿಜೆಪಿ ಶಾಸಕರು ದೃಢ ನಿರ್ಧಾರ ಮಾಡುವುದರೊಂದಿಗೆ ರಾಜಕೀಯ ಅಸ್ಥಿರತೆ ಪರಾಕಾಷ್ಠೆ ತಲುಪಿದೆ.</p>.<p>ಬಿಕ್ಕಟ್ಟು ಪರಿಹರಿಸಲು ಮಾತುಕತೆಗೆ ಮುನ್ನ ಕೇಶುಭಾಯಿ ಅವರನ್ನು ಅಧಿಕಾರದಿಂದ ಇಳಿಸಬೇಕು ಎಂಬುದು ಭಿನ್ನ ಬಣದ ಷರತ್ತು.</p>.<p>ಈ ಮಧ್ಯೆ ಗುಜರಾತ್ ಸರ್ಕಾರವನ್ನು ಉರುಳಿಸಲು ವಿವಿಧ ಮೂಲಗಳಿಂದ ಅಪಾರ ಪ್ರಮಾಣದ ಹಣದ ಹೊಳೆ ಹರಿಸಲಾಗುತ್ತಿದೆ ಎಂದು ಪಕ್ಷದ ವಕ್ತಾರ ಕೆ.ಎಲ್.ಶರ್ಮಾ ಇಲ್ಲಿ ಆರೋಪಿಸಿದರು.</p>.<p><strong>ಜುರಾಲಾ: ಮರು ಸರ್ವೆಗೆ ಆಗ್ರಹ</strong></p>.<p><strong>ರಾಯಚೂರು, ಅ. 4–</strong> ಕೃಷ್ಣಾ ನದಿಗೆ ಆಂಧ್ರ ಪ್ರದೇಶವು ನಿರ್ಮಿಸಿರುವ ಅಣೆಕಟ್ಟು ನಿಗದಿಗಿಂತ 2 ಅಡಿ ಜಾಸ್ತಿಯಾಗಿರುವುದ<br />ರಿಂದ ಮುಳುಗಡೆಯಾಗುವ ಪ್ರದೇಶದ ಮರು ಸರ್ವೆಯನ್ನು ತಕ್ಷಣವೇ ನಡೆಸಬೇಕು ಎಂದು ವಿಧಾನ ಪರಿಷತ್ತಿನಲ್ಲಿ ಬಿಜೆಪಿ ನಾಯಕರಾಗಿರುವ ಡಾ. ಎಂ.ಆರ್.ತಂಗಾ ಅವರು ಒತ್ತಾಯಿಸಿದರು.</p>.<p>ವರದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಅಣೆಕಟ್ಟೆ ಎತ್ತರ ಜಾಸ್ತಿಯಾಗಿದೆ ಎಂದರೆ ಮುಂದಿನ ಪರಿಣಾಮವನ್ನುಸುಲಭವಾಗಿ ಊಹಿಸಬಹುದಾಗಿದೆ. ಸಹಜವಾಗಿಯೇ ಮುಳುಗಡೆ ಪ್ರದೇಶ ಹೆಚ್ಚಾಗುತ್ತದೆ. ಕರ್ನಾಟಕ ಮತ್ತು ಆಂಧ್ರ ಪ್ರದೇಶದ ನಡುವೆ ಏರ್ಪಟ್ಟ ಒಪ್ಪಂದದಂತೆ ಅಣೆಕಟ್ಟೆ ಎತ್ತರ 318.516 ಮೀಟರ್ ಇರಬೇಕಿತ್ತು. ಆದರೆ, ಇದು ಇನ್ನೂ 2 ಅಡಿ ಹೆಚ್ಚಾಗಿರುವುದು ಜಂಟಿ ಸರ್ವೆಯಿಂದ ಖಚಿತವಾಗಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>