ನವದೆಹಲಿ, ಜುಲೈ 11 (ಯುಎನ್ಐ, ಪಿಟಿಐ): ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯು ಸಂಸತ್ತಿನ ಅಧಿವೇಶನದ ಎರಡನೆಯ ದಿನವಾದ ಇಂದೂ ಕಲಾಪವನ್ನು ಗೊಂದಲದಲ್ಲಿ ಮುಳುಗಿಸಿತು. ಲೋಕಸಭೆಯಲ್ಲಿ ಬಿಜೆಪಿಯು ಮಂಡಿಸಲು ಯತ್ನಿಸಿದ ಹೊಸ ನಿಲುವಳಿ ಸೂಚನೆಯನ್ನು ಸ್ಪೀಕರ್ ಅವರು ತಿರಸ್ಕರಿಸಿದರೆ, ರಾಜ್ಯಸಭೆಯಲ್ಲಿ ತೀವ್ರ ಗದ್ದಲ ಉಂಟಾಗಿ ಸದನವನ್ನು ನಾಳೆಗೆ ಮುಂದೂಡಲಾಯಿತು.