ರಾಜಿಸೂತ್ರದ ಪ್ರಕಾರ, ರಾವ್ ವಿರುದ್ಧದ ವಂಚನೆ ಹಗರಣಕ್ಕೂ ರಾಜೀನಾಮೆ ಪ್ರಶ್ನೆಗೂ ತಳುಕು ಹಾಕುವಂತಿಲ್ಲ. ಜುಲೈ 16ರ
ಸಭೆಯಲ್ಲಿ ರಾವ್ ಅವರಿಗೆ ಪರ್ಯಾಯ ನಾಯಕನನ್ನು ಆಯ್ಕೆ ಮಾಡಿಕೊಳ್ಳುವ ಕೆಲಸವೂ ಆರಂಭವಾಗುತ್ತದೆ. ಮುಂದಿನ ಎಐಸಿಸಿ ಅಧಿವೇಶನ ಮುಂದಿನ ತಿಂಗಳಲ್ಲೇ ನಡೆಯಲಿದ್ದು, ಅಲ್ಲಿ ರಾವ್ ಉತ್ತರಾಧಿಕಾರಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಬಹುಶಃ ಎ.ಕೆ. ಆಂಟನಿ ಅವರು ಎಐಸಿಸಿ ಅಧ್ಯಕ್ಷ ಸ್ಥಾನವನ್ನು ತುಂಬುವ ನಿರೀಕ್ಷೆಯಿದೆ ಎಂದು ಗೊತ್ತಾಗಿದೆ.