ಬೀಸುವ ದೊಣ್ಣೆಯಿಂದ ರಾವ್ ಪಾರು
ನವದೆಹಲಿ, ಜುಲೈ 12 (ಪಿಟಿಐ): ಪಕ್ಷದಲ್ಲಿ ನಾಯಕತ್ವ ವಿವಾದವನ್ನು ಬಗೆಹರಿಸಿ, ಮುಂದಿನ ಕಾಂಗ್ರೆಸ್ ಅಧಿವೇಶನದವರೆಗೆ ರಾವ್ ಅವರನ್ನೇ ಪಕ್ಷಾಧ್ಯಕ್ಷರನ್ನಾಗಿ ಮುಂದುವರಿಸುವ ರಾಜಿ ಸೂತ್ರವನ್ನು ಸಿದ್ಧಗೊಳಿಸಲು ಇಂದು ಇಲ್ಲಿ ಸಭೆ ಸೇರಿದ್ದ ಕಾಂಗ್ರೆಸ್ ಕಾರ್ಯಕಾರಿಣಿ ನಿರ್ಧರಿಸಿದೆ.
ರಾಜಿಸೂತ್ರದ ಪ್ರಕಾರ, ರಾವ್ ವಿರುದ್ಧದ ವಂಚನೆ ಹಗರಣಕ್ಕೂ ರಾಜೀನಾಮೆ ಪ್ರಶ್ನೆಗೂ ತಳುಕು ಹಾಕುವಂತಿಲ್ಲ. ಜುಲೈ 16ರ
ಸಭೆಯಲ್ಲಿ ರಾವ್ ಅವರಿಗೆ ಪರ್ಯಾಯ ನಾಯಕನನ್ನು ಆಯ್ಕೆ ಮಾಡಿಕೊಳ್ಳುವ ಕೆಲಸವೂ ಆರಂಭವಾಗುತ್ತದೆ. ಮುಂದಿನ ಎಐಸಿಸಿ ಅಧಿವೇಶನ ಮುಂದಿನ ತಿಂಗಳಲ್ಲೇ ನಡೆಯಲಿದ್ದು, ಅಲ್ಲಿ ರಾವ್ ಉತ್ತರಾಧಿಕಾರಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಬಹುಶಃ ಎ.ಕೆ. ಆಂಟನಿ ಅವರು ಎಐಸಿಸಿ ಅಧ್ಯಕ್ಷ ಸ್ಥಾನವನ್ನು ತುಂಬುವ ನಿರೀಕ್ಷೆಯಿದೆ ಎಂದು ಗೊತ್ತಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.