<p><strong>ಪೊಲೀಸ್ ವರ್ತನೆ ಹತೋಟಿ ಬಗ್ಗೆ ಸರ್ಕಾರದ ಭರವಸೆ</strong></p>.<p><strong>ಬೆಂಗಳೂರು, ಏ. 7– </strong>ಬೆಂಗಳೂರಿನ ಎಸ್.ಜಿ.ಇ.ಎಫ್ ನಲ್ಲಿ ನಿನ್ನೆ ಮತ್ತು ಮೊನ್ನೆ ನಡೆದ ಘಟನೆಗಳ ಸಂಬಂಧದಲ್ಲಿ ವಿಧಾನಸಭೆಯಲ್ಲಿ ಇಂದು ಬಿರುಸು ವಾತಾವರಣವನ್ನು ಎದುರಿಸಿದ ಸರ್ಕಾರ ಇನ್ನು ಮುಂದೆ ಪೊಲೀಸರ ವರ್ತೆನೆಯ ಮೇಲೆ ಸಂಯಮದ ಬಿಗಿಹಾಕುವ ಭರವಸೆಯನ್ನು ಶಾಸಕರಿಗೆ ನೀಡಿತು.</p>.<p>ಮುಂದೆ ವಿದ್ಯಾರ್ಥಿಗಳು ಮತ್ತು ಕಾರ್ಮಿಕರ ಮೇಲೆ ಬಲಪ್ರಯೋಗಿಸುವ ಪ್ರಸಂಗಗಳು ಬಂದಾಗ ದೀರ್ಘ ಆಲೋಚನೆ ಮಾಡದೇ ಈ ಕೆಲಸಕ್ಕೆ ಪೊಲೀಸರು ಕೈಹಾಕರು. ಇದು ಸರ್ಕಾರದ ನೀತಿಯಾಗಿದೆ‘ ಎಂದು ಘಟನೆಗಳ ಬಗ್ಗೆ ಸದನದ ಕಳವಳವನ್ನು ಪ್ರತಿಧ್ವನಿಸಿದ ಕೈಗಾರಿಕಾ ಮಂತ್ರಿ ಎಸ್.ಎಂ. ಕೃಷ್ಣ ಅವರು ಹೇಳಿದರು.</p>.<p>‘ತೀವ್ರ ಕ್ರಮ’: ಎಂ.ಎಸ್. ಕೃಷ್ಣನ್, ಎಸ್. ಬಂಗಾರಪ್ಪ ಮತ್ತು ಟಿ.ಆರ್. ಶಾಮಣ್ಣ ಅವರು ಕಳುಹಿಸಿದ ಮೂರು ಪ್ರತ್ಯೇಕ ನಿಲುವಳಿ ಸೂಚನೆಗಳ ಅಂಗೀಕಾರದ ಸಂಬಂಧದಲ್ಲಿ ನಡೆದ ಸುಮಾರು 2 ಗಂಟೆಗಳ ಕಾಲದ ಚರ್ಚೆಯಲ್ಲಿ ಉದ್ರಿಕ್ತ ಸದಸ್ಯರೊಬ್ಬರಿಂದ ಸಭಾ ತ್ಯಾಗವೂ ನಡೆಯಿತು.</p>.<p>ಪೊಲೀಸರ ವರ್ತನೆ ಬಗ್ಗೆ ರೋಷದಿಂದ ಮಾತನಾಡಿದ ಸದಸ್ಯರನ್ನು ಸಮಾಧನ ಮಾಡಿದ ಕೃಷ್ಣ ಅವರು ‘ಪೊಲೀಸರು ಎಲ್ಲೆಮೀರಿ ವರ್ತಿಸಿದ ಸಂಶಯ ಬಂದರೆ ಸರ್ಕಾ ಅವರ ವಿರುದ್ಧ ತೀವ್ರ ಕ್ರಮ ಕೈಗೊಳ್ಳುವುದು‘ ಎಂದು ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪೊಲೀಸ್ ವರ್ತನೆ ಹತೋಟಿ ಬಗ್ಗೆ ಸರ್ಕಾರದ ಭರವಸೆ</strong></p>.<p><strong>ಬೆಂಗಳೂರು, ಏ. 7– </strong>ಬೆಂಗಳೂರಿನ ಎಸ್.ಜಿ.ಇ.ಎಫ್ ನಲ್ಲಿ ನಿನ್ನೆ ಮತ್ತು ಮೊನ್ನೆ ನಡೆದ ಘಟನೆಗಳ ಸಂಬಂಧದಲ್ಲಿ ವಿಧಾನಸಭೆಯಲ್ಲಿ ಇಂದು ಬಿರುಸು ವಾತಾವರಣವನ್ನು ಎದುರಿಸಿದ ಸರ್ಕಾರ ಇನ್ನು ಮುಂದೆ ಪೊಲೀಸರ ವರ್ತೆನೆಯ ಮೇಲೆ ಸಂಯಮದ ಬಿಗಿಹಾಕುವ ಭರವಸೆಯನ್ನು ಶಾಸಕರಿಗೆ ನೀಡಿತು.</p>.<p>ಮುಂದೆ ವಿದ್ಯಾರ್ಥಿಗಳು ಮತ್ತು ಕಾರ್ಮಿಕರ ಮೇಲೆ ಬಲಪ್ರಯೋಗಿಸುವ ಪ್ರಸಂಗಗಳು ಬಂದಾಗ ದೀರ್ಘ ಆಲೋಚನೆ ಮಾಡದೇ ಈ ಕೆಲಸಕ್ಕೆ ಪೊಲೀಸರು ಕೈಹಾಕರು. ಇದು ಸರ್ಕಾರದ ನೀತಿಯಾಗಿದೆ‘ ಎಂದು ಘಟನೆಗಳ ಬಗ್ಗೆ ಸದನದ ಕಳವಳವನ್ನು ಪ್ರತಿಧ್ವನಿಸಿದ ಕೈಗಾರಿಕಾ ಮಂತ್ರಿ ಎಸ್.ಎಂ. ಕೃಷ್ಣ ಅವರು ಹೇಳಿದರು.</p>.<p>‘ತೀವ್ರ ಕ್ರಮ’: ಎಂ.ಎಸ್. ಕೃಷ್ಣನ್, ಎಸ್. ಬಂಗಾರಪ್ಪ ಮತ್ತು ಟಿ.ಆರ್. ಶಾಮಣ್ಣ ಅವರು ಕಳುಹಿಸಿದ ಮೂರು ಪ್ರತ್ಯೇಕ ನಿಲುವಳಿ ಸೂಚನೆಗಳ ಅಂಗೀಕಾರದ ಸಂಬಂಧದಲ್ಲಿ ನಡೆದ ಸುಮಾರು 2 ಗಂಟೆಗಳ ಕಾಲದ ಚರ್ಚೆಯಲ್ಲಿ ಉದ್ರಿಕ್ತ ಸದಸ್ಯರೊಬ್ಬರಿಂದ ಸಭಾ ತ್ಯಾಗವೂ ನಡೆಯಿತು.</p>.<p>ಪೊಲೀಸರ ವರ್ತನೆ ಬಗ್ಗೆ ರೋಷದಿಂದ ಮಾತನಾಡಿದ ಸದಸ್ಯರನ್ನು ಸಮಾಧನ ಮಾಡಿದ ಕೃಷ್ಣ ಅವರು ‘ಪೊಲೀಸರು ಎಲ್ಲೆಮೀರಿ ವರ್ತಿಸಿದ ಸಂಶಯ ಬಂದರೆ ಸರ್ಕಾ ಅವರ ವಿರುದ್ಧ ತೀವ್ರ ಕ್ರಮ ಕೈಗೊಳ್ಳುವುದು‘ ಎಂದು ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>