ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ | ಮಂಗಳವಾರ, 27–10–1970

Last Updated 26 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಕಾವೇರಿ ವಿವಾದ: ಇಂದು ಅಂತಿಮ ಸುತ್ತು ಮಾತುಕತೆ

ಮದ್ರಾಸ್, ಅ. 26– ಕಾವೇರಿ ಜಲವಿವಾದದ ಬಗ್ಗೆ ಅಂತಿಮ ಸುತ್ತು ಮಾತುಕತೆ ನಡೆಸಿ ವಿವಾದ ಪರಿಹಾರಕ್ಕೆ ಯತ್ನಿಸಲು ಮೈಸೂರು
ಮತ್ತು ತಮಿಳುನಾಡು ಮುಖ್ಯಮಂತ್ರಿಗಳು ಹಾಗೂ ಕೇರಳ ಲೋಕೋಪಯೋಗಿ ಸಚಿವರು ನಾಳೆ ಇಲ್ಲಿ ಸಭೆ ಸೇರಲಿದ್ದಾರೆ.

ಪ್ಯಾಸೆಂಜರ್ ಟ್ರೈನಿಗೆ ಗೂಡ್ಸ್ ಡಿಕ್ಕಿ: 9 ಸಾವು

ನವದೆಹಲಿ, ಅ. 26– ಉತ್ತರ ರೈಲ್ವೆಯ ಅಲಿಗಡ–ಘಾಜಿಯಾಬಾದ್ ವಿಭಾಗದಲ್ಲಿ ಝರಿಯಾ ರೈಲ್ವೆ ನಿಲ್ದಾಣದ ಬಳಿ
ಇಂದು ಬೆಳಿಗ್ಗೆ ಅಲಿಗಡ–ದೆಹಲಿ ಪ್ಯಾಸೆಂಜರ್ ಮತ್ತು ಗೂಡ್ಸ್ ಟ್ರೈನಿಗೆ ಡಿಕ್ಕಿ ಸಂಭವಿಸಿದ ಪರಿಣಾಮವಾಗಿ 9 ಮಂದಿ ಸತ್ತು, 80 ಮಂದಿ ಗಾಯಗೊಂಡರು.

ಪ್ಯಾಸೆಂಜರ್ ಟ್ರೈನಿನ ಚಾಲಕ ಹಾಗೂ ಫೈರ್‌ಮನ್ ಸ್ಥಳದಲ್ಲೇ ಮೃತಪಟ್ಟರು.

ಗಾಯಗೊಂಡವರಲ್ಲಿ 6 ಮಂದಿ ಪರಿಸ್ಥಿತಿ ಚಿಂತಾಜನಕವಾಗಿದೆಯೆಂದು ಅಧಿಕೃತವಾಗಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT