<p><strong>ಶುದ್ಧಕತ್ತೆ!</strong></p>.<p><strong>ಬೆಂಗಳೂರು, ಮೇ 21–</strong> ಭಾರತದ ಪ್ರಜಾಪ್ರಭುತ್ವ ಇಂದು ‘ಶುದ್ಧ ಕತ್ತೆ’ ಆಗಿದೆ!</p>.<p>ಇದು ಶ್ರೀ ಕೆಂಗಲ್ ಹನುಮಂತಯ್ಯನವರ ಅಭಿಪ್ರಾಯ.</p>.<p>ಕತ್ತೆ ಮರಿಯಾಗಿದ್ದಾಗ ನೋಡಲು ತುಂಬಾ ಚೆನ್ನಾಗಿರುತ್ತದೆ. 1947ರಲ್ಲಿ ಭಾರತದಲ್ಲಿ ಆರಂಭವಾದಾಗ ಪ್ರಜಾಪ್ರಭುತ್ವ ಚೆನ್ನಾಗಿತ್ತು.</p>.<p>‘ಮೊದಲ ಸಾರ್ವತ್ರಿಕ ಚುನಾವಣೆಯ ನಂತರ ಮಂತ್ರಿ ಮಂಡಲಗಳು ಪುಟ್ಟದಾಗಿರುತ್ತಿದ್ದವು. ರಾಜಾಜಿ, ಬಿ.ಜಿ. ಖೇರ್, ಗೋವಿಂದವಲ್ಲಭ ಪಂತ್ ಅಂತಹವರು ಮುಖ್ಯಮಂತ್ರಿಗಳಾಗಿದ್ದರು. ಮೈಸೂರಿನಲ್ಲಿ ನನ್ನನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಿದ್ದೀರಿ’.</p>.<p>‘ಪ್ರಜಾ ಪ್ರಭುತ್ವ ಬೆಳೆಯುತ್ತಾ ಬೆಳೆಯುತ್ತಾ 1962ರಲ್ಲಿ ಕತ್ತೆ ಆಯಿತು. 67ರಲ್ಲಿ ಶುದ್ಧ ಕತ್ತೆಯಾಯಿತು. 30–40 ಮಂತ್ರಿಗಳಾದರು. ‘ಬೆಂಗಳೂರು ಸಿಟಿಜನ್ಸ್ ಫ್ರೀ ಫೋರಂ’ ಆಶ್ರಯದಲ್ಲಿ ‘ನಾಯಕರ ಚುನಾವಣೆ’ ವಿಷಯ ಕುರಿತು ಮಾತನಾಡಿದರು.</p>.<p><strong>**</strong></p>.<p><strong>ಒಮ್ಮತಕ್ಕೆ ಯತ್ನಿಸಲು ಶಾಸಕರಿಗೆ ಎಸ್ಸೆನ್ ಕರೆ</strong></p>.<p><strong>ಬೆಂಗಳೂರು, ಮೇ 21– </strong>ಕಾಂಗ್ರೆಸ್ ಪಕ್ಷದ ನಾಯಕರ ಆಯ್ಕೆ ಬಗ್ಗೆ ‘ಒಪ್ಪಂದಕ್ಕೆ ಬರಲು ಪ್ರಯತ್ನಿಸಿ’ ಎಂದು ತಮ್ಮನ್ನು ಭೇಟಿ ಮಾಡುವ ಕಾಂಗ್ರೆಸ್ ಶಾಸಕರಿಗೆ ಸಲಹೆ ಮಾಡುತ್ತಿರುವ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರು ‘ಒಪ್ಪಂದ ಸಾಧ್ಯವಾಗದಿದ್ದರೆ, ಚುನಾವಣೆ ನಡೆಯಲಿ’ ಎಂದು ರಾತ್ರಿ ವರದಿಗಾರರಿಗೆ ತಿಳಿಸಿದರು.</p>.<p><strong>**</strong></p>.<p><strong>ನಾಯಕರಾಗಿ ಸಮರ್ಥ ಪ್ರಾಮಾಣಿಕ ವ್ಯಕ್ತಿ ಆಯ್ಕೆಗೆ ಎಚ್.ಎಂ.ಸಿ. ಕರೆ</strong></p>.<p><strong>ಬೆಂಗಳೂರು, ಮೇ 21– </strong>ಮುಂಬರುವ ವಿಪತ್ತುಗಳನ್ನು ತಪ್ಪಿಸಲು ಸಮರ್ಥರಿರುವ ಅಥವಾ ಆ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವ ವ್ಯಕ್ತಿಯನ್ನು ಕಾಂಗ್ರೆಸ್ ಶಾಸಕ ಪಕ್ಷದ ನಾಯಕರನ್ನಾಗಿ ಆರಿಸಬೇಕೆಂದು ಮಾಜಿ ಸಚಿವ ಶ್ರೀ ಎಚ್.ಎಂ. ಚನ್ನಬಸಪ್ಪ ಅವರು ‘ಸಾರ್ವಜನಿಕರ ಪರವಾಗಿ’ ರಾಜ್ಯದ ಕಾಂಗ್ರೆಸ್ ಶಾಸಕರನ್ನು ಪ್ರಾರ್ಥಿಸಿದ್ದಾರೆ.</p>.<p><strong>**</strong></p>.<p><strong>ಜನಮತಗಣನೆ: ಡಿಗಾಲ್ ಆಲೋಚನೆ</strong></p>.<p><strong>ಪ್ಯಾರಿಸ್, ಮೇ 21–</strong> ಗಲಭೆಗಳ ಅಂತ್ಯಕ್ಕಾಗಿ ಪ್ರಯತ್ನಿಸಲು ಅಧ್ಯಕ್ಷ ಡಿಗಾಲ್ ಅವರು ರಾಷ್ಟ್ರಾದ್ಯಂತ ಜನಮತಗಣನೆ ನಡೆಸುವ ಆಲೋಚನೆಯಲ್ಲಿದ್ದಾರೆಂದು ವರದಿಯಾಗಿದೆ.</p>.<p>ಗಲಭೆಗಳಲ್ಲಿ ಶಿಕ್ಷೆಗೆ ಗುರಿಯಾದವರಿಗೆಲ್ಲ ಅವರಿಂದು ಕ್ಷಮಾದಾನ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶುದ್ಧಕತ್ತೆ!</strong></p>.<p><strong>ಬೆಂಗಳೂರು, ಮೇ 21–</strong> ಭಾರತದ ಪ್ರಜಾಪ್ರಭುತ್ವ ಇಂದು ‘ಶುದ್ಧ ಕತ್ತೆ’ ಆಗಿದೆ!</p>.<p>ಇದು ಶ್ರೀ ಕೆಂಗಲ್ ಹನುಮಂತಯ್ಯನವರ ಅಭಿಪ್ರಾಯ.</p>.<p>ಕತ್ತೆ ಮರಿಯಾಗಿದ್ದಾಗ ನೋಡಲು ತುಂಬಾ ಚೆನ್ನಾಗಿರುತ್ತದೆ. 1947ರಲ್ಲಿ ಭಾರತದಲ್ಲಿ ಆರಂಭವಾದಾಗ ಪ್ರಜಾಪ್ರಭುತ್ವ ಚೆನ್ನಾಗಿತ್ತು.</p>.<p>‘ಮೊದಲ ಸಾರ್ವತ್ರಿಕ ಚುನಾವಣೆಯ ನಂತರ ಮಂತ್ರಿ ಮಂಡಲಗಳು ಪುಟ್ಟದಾಗಿರುತ್ತಿದ್ದವು. ರಾಜಾಜಿ, ಬಿ.ಜಿ. ಖೇರ್, ಗೋವಿಂದವಲ್ಲಭ ಪಂತ್ ಅಂತಹವರು ಮುಖ್ಯಮಂತ್ರಿಗಳಾಗಿದ್ದರು. ಮೈಸೂರಿನಲ್ಲಿ ನನ್ನನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಿದ್ದೀರಿ’.</p>.<p>‘ಪ್ರಜಾ ಪ್ರಭುತ್ವ ಬೆಳೆಯುತ್ತಾ ಬೆಳೆಯುತ್ತಾ 1962ರಲ್ಲಿ ಕತ್ತೆ ಆಯಿತು. 67ರಲ್ಲಿ ಶುದ್ಧ ಕತ್ತೆಯಾಯಿತು. 30–40 ಮಂತ್ರಿಗಳಾದರು. ‘ಬೆಂಗಳೂರು ಸಿಟಿಜನ್ಸ್ ಫ್ರೀ ಫೋರಂ’ ಆಶ್ರಯದಲ್ಲಿ ‘ನಾಯಕರ ಚುನಾವಣೆ’ ವಿಷಯ ಕುರಿತು ಮಾತನಾಡಿದರು.</p>.<p><strong>**</strong></p>.<p><strong>ಒಮ್ಮತಕ್ಕೆ ಯತ್ನಿಸಲು ಶಾಸಕರಿಗೆ ಎಸ್ಸೆನ್ ಕರೆ</strong></p>.<p><strong>ಬೆಂಗಳೂರು, ಮೇ 21– </strong>ಕಾಂಗ್ರೆಸ್ ಪಕ್ಷದ ನಾಯಕರ ಆಯ್ಕೆ ಬಗ್ಗೆ ‘ಒಪ್ಪಂದಕ್ಕೆ ಬರಲು ಪ್ರಯತ್ನಿಸಿ’ ಎಂದು ತಮ್ಮನ್ನು ಭೇಟಿ ಮಾಡುವ ಕಾಂಗ್ರೆಸ್ ಶಾಸಕರಿಗೆ ಸಲಹೆ ಮಾಡುತ್ತಿರುವ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರು ‘ಒಪ್ಪಂದ ಸಾಧ್ಯವಾಗದಿದ್ದರೆ, ಚುನಾವಣೆ ನಡೆಯಲಿ’ ಎಂದು ರಾತ್ರಿ ವರದಿಗಾರರಿಗೆ ತಿಳಿಸಿದರು.</p>.<p><strong>**</strong></p>.<p><strong>ನಾಯಕರಾಗಿ ಸಮರ್ಥ ಪ್ರಾಮಾಣಿಕ ವ್ಯಕ್ತಿ ಆಯ್ಕೆಗೆ ಎಚ್.ಎಂ.ಸಿ. ಕರೆ</strong></p>.<p><strong>ಬೆಂಗಳೂರು, ಮೇ 21– </strong>ಮುಂಬರುವ ವಿಪತ್ತುಗಳನ್ನು ತಪ್ಪಿಸಲು ಸಮರ್ಥರಿರುವ ಅಥವಾ ಆ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವ ವ್ಯಕ್ತಿಯನ್ನು ಕಾಂಗ್ರೆಸ್ ಶಾಸಕ ಪಕ್ಷದ ನಾಯಕರನ್ನಾಗಿ ಆರಿಸಬೇಕೆಂದು ಮಾಜಿ ಸಚಿವ ಶ್ರೀ ಎಚ್.ಎಂ. ಚನ್ನಬಸಪ್ಪ ಅವರು ‘ಸಾರ್ವಜನಿಕರ ಪರವಾಗಿ’ ರಾಜ್ಯದ ಕಾಂಗ್ರೆಸ್ ಶಾಸಕರನ್ನು ಪ್ರಾರ್ಥಿಸಿದ್ದಾರೆ.</p>.<p><strong>**</strong></p>.<p><strong>ಜನಮತಗಣನೆ: ಡಿಗಾಲ್ ಆಲೋಚನೆ</strong></p>.<p><strong>ಪ್ಯಾರಿಸ್, ಮೇ 21–</strong> ಗಲಭೆಗಳ ಅಂತ್ಯಕ್ಕಾಗಿ ಪ್ರಯತ್ನಿಸಲು ಅಧ್ಯಕ್ಷ ಡಿಗಾಲ್ ಅವರು ರಾಷ್ಟ್ರಾದ್ಯಂತ ಜನಮತಗಣನೆ ನಡೆಸುವ ಆಲೋಚನೆಯಲ್ಲಿದ್ದಾರೆಂದು ವರದಿಯಾಗಿದೆ.</p>.<p>ಗಲಭೆಗಳಲ್ಲಿ ಶಿಕ್ಷೆಗೆ ಗುರಿಯಾದವರಿಗೆಲ್ಲ ಅವರಿಂದು ಕ್ಷಮಾದಾನ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>